Mysuru Rangayana | Summer Theatre Festival in Memory of S.G. K. from June 29
ಮೈಸೂರು : ಪ್ರತಿಬಾರಿಯಂತೆ ಈ ಬಾರಿಯೂ ರಂಗಾಯಣವು ಸಿಜಿಕೆ ನೆನಪಿನಲ್ಲಿ ಹವ್ಯಾಸಿ ರಂಗತಂಡಗಳನ್ನು ಆಹ್ವಾನಿಸಿ ‘ಗ್ರೀಷ್ಮ ರಂಗೋತ್ಸವ-25’ ಅನ್ನು ಆಯೋಜಿಸುತ್ತಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.
ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಜೂ.೨೯ರಂದು ಸಂಜೆ ೬ ಗಂಟೆಗೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಿರುವ ಗ್ರೀಷ್ಮ ರಂಗೋತ್ಸವವನ್ನು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್ಬಾಬು ಹಾಜರಲಿದ್ದಾರೆ. ಜೂ.೨೯ರಿಂದ ಆ.೧೦ರವರೆಗೆ ಪ್ರತಿ ಭಾನುವಾರ ಹವ್ಯಾಸಿ ಕಲಾತಂಡದಿಂದ ಒಂದೊಂದು ನಾಟಕ ಪ್ರದರ್ಶನ ಇರಲಿದೆ,” ಎಂದು ತಿಳಿಸಿದರು.
“ರಂಗಾಯಣ ಹಾಗೂ ಹವ್ಯಾಸಿ ರಂಗತಂಡಗಳ ಬೆಸುಗೆಯಾಗಿ ಗ್ರೀಷ್ಮ ರಂಗೋತ್ಸವ ಪ್ರತಿವರ್ಷ ನಡೆದುಕೊಂಡು ಬರುತ್ತಿದೆ. ಮೈಸೂರು, ಮಂಡ್ಯ ಹಾಗೂ ಕೇರಳ ಸೇರಿದಂತೆ ಒಟ್ಟು ಏಳು ನಾಟಕಗಳು ಪ್ರದರ್ಶನ ಕಾಣಲಿದ್ದು, ಕುವೆಂಪು ಅವರ ರಚನೆಯ ಮಂಜುನಾಥ್ ಭ್ಯಾಟೆ ನಿರ್ದೇಶನದ ನೇಪಥ್ಯ ರಂಗತಂಡ ಪ್ರಸ್ತುತಪಡಿಸುವ ‘ಸ್ಮಶಾನ ಕುರುಕ್ಷೇತ್ರ’ ನಾಟಕದ ಮೂಲಕ ಗ್ರೀಷ್ಮ ರಂಗೋತ್ಸವಕ್ಕೆ ಚಾಲನೆ ಸಿಗಲಿದೆ,” ಎಂದು ತಿಳಿಸಿದರು.
ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್ ಬಾಬು, ಗ್ರೀಷ್ಮ ರಂಗೋತ್ಸವ -೨೦೨೫ರ ಸಂಚಾಲಕ ಅರಸೀಕೆರೆ ಯೋಗಾನಂದ ಇದ್ದರು.
ದಿನಾಂಕ ನಾಟಕ/ತಂಡ ನಿರ್ದೇಶನ
ಜೂ.೨೯ ಸ್ಮಶಾನ ಕುರುಕ್ಷೇತ್ರ ಮಂಜುನಾಥ್ ಭ್ಯಾಟೆ
ನೇಪಥ್ಯ ರಂಗತಂಡ
ಜು.೬ ವಾರ್ಡ್ ನಂ.೦೬ ಮೈಮ್ ರಮೇಶ್
ಜಿಪಿಐಇಆರ್, ಮೈಸೂರು
ಜು.೧೩ ಅಹಲ್ಯ ಬಿ.ಡಿ. ಯತೀಶ್ ಎನ್.ಕೊಳ್ಳೆಗಾಲ
ವರ್ಕ್ಶಾಪ್ ಇನ್ ಮೈಸೂರು ಫಾರ್ ಥಿಯೇಟರ್
ಜು.೨೦ ಪರಮೇಶಿ ಪ್ರೇಮ ಪ್ರಸಂಗ ರವಿಪ್ರಸಾದ್
ರಂಗವಲ್ಲಿ, ಮೈಸೂರು
ಜು.೨೭ ಕಳಸೂತ್ರ ಎಚ್.ಎಸ್.ಸುರೇಶ್ಬಾಬು
ಅಭಿಯಂತರರು
ಆ.೩ ನಿತ್ಯ ಸಚಿವ ಪ್ರಮೋದ್ ಶಿಗ್ಗಾಂವ್
ಕರ್ನಾಟಕ ಸಂಘ ಮಂಡ್ಯ
ಆ.೧೦ ಕುಹೂ (ಮಲಯಾಳಂ) ಅರುಣ್ಲಾಲ್
ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್, ಕೇರಳ
ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಾಯಾತ್ರೆ ತೆರಳುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ನಿರ್ಬಂಧ…
ಮೈಸೂರು : ಮುಡುಕುತೊರೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ…
ಹನೂರು : ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಗುರಿ…
ಉತ್ತರ ಪ್ರದೇಶ: ಇಲ್ಲಿನ ಪ್ರಯಾಗ್ರಾಜ್ನಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಭಾರತೀಯ ವಾಯುಪಡೆಯ ಮೈಕ್ರೋಲೈಟ್ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳನ್ನು…
ಬೆಂಗಳೂರು: ಕರ್ನಾಟಕದಲ್ಲಿ ಜೀವನೋಪಾಯಕ್ಕೆ ಅದರಲ್ಲೂ ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನೃಸರ್ಗಿಕ ಕೃಷಿ ಪದ್ಧತಿಯ ಬಗ್ಗೆ…