ಮೈಸೂರು : ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿಯ ಉದ್ದೇಶಿತ ಚಿತ್ರನಗರಿಯ ಕಾಮಗಾರಿಗೆ ತಡೆಯೊಡ್ಡಿದ ರೈತರು ಅಲ್ಲಿನ ಕೆಲಸವನ್ನು ಸ್ಥಗಿತಗೊಳಿಸಿದರು. ಚಿತ್ರನಗರಿಗಾಗಿ ಭೂಮಿ ಕಳೆದಕೊಂಡ ರೈತರು ತಮಗೆ ನ್ಯಾಯಯುತವಾಗಿ ಬರಬೇಕಾಗಿದ್ದ ಪರಿಹಾರಕ್ಕಾಗಿ ೧೩೫ ದಿನಗಳಿಂದ ನಡಸುತ್ತಿದ್ದ ಶಾಂತಿಯುತ ಪ್ರತಿಭಟನೆಗೆ ಶನಿವಾರ ತಿರುವು ನೀಡಿ, ಅಲ್ಲಿನ ಕಾಮಗಾರಿಗೆ ತಡೆಯೊಡ್ಡಿ ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರನ್ನು ವಾಪಸ್ ಕಳಿಸಿದರು.
ತಾವು ಕಳೆದಕೊಂಡ ಭೂಮಿಗೆ ಸರ್ಕಾರ ಬಿಡುಗಡೆ ಮಾಡಿದ ೧೮ ಕೋಟಿ ರೂ. ಪರಿಹಾರ ಅಧಿಕಾರಿಗಳ ಚಿತಾವಣೆಯಿಂದಾಗಿ ಅನ್ಯರ ಪಾಲಾಗಿದ್ದು, ತಮಗೆ ಪರಿಹಾರಬೇಕೇ ಬೇಕು ಎಂದು ೧೩೫ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ಪರಿಹಾರದ ವಿತರಣೆಯ ಕುರಿತು ಜಿಲ್ಲಾಧಿಕಾರಿಗಳು ತನಿಖಾ ತಂಡ ರಚಿಸಿ ವಾರದೊಳಗೆ ನ್ಯಾಯ ಕೊಡಿಸುವುದಾಗಿ ಹೇಳಿ ತಿಂಗಳೂ ಕಳೆದರೂ ಪರಿಹಾರ ದೊರಕಿಲ್ಲ, ತನಿಖಾ ಸಮಿತಿಯ ವರದಿಯೂ ಹೊರಬಂದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ರೈತ ಸಂಘದ ನೇತೃತ್ವಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಶಾಂತ ರೀತಿಯ ಪ್ರತಿಭಟನೆಗೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಿ ಪರಿಹಾರ ರೂಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಲ್ಲಿ ನಡೆಯುತ್ತಿದ್ದ ಕಾಂಪೌಂಡ್ ನಿರ್ಮಾಣದ ಕೆಲಸಕ್ಕೆ ಶನಿವಾರ ತಡೆಯೊಡ್ಡಿದರು. ಇದರ ಪರಿಣಾಮ ೩೦ ಕ್ಕೂ ಹೆಚ್ಚು ಕಾರ್ಮಿಕರು ಕಾಮಗಾರಿ ಸ್ಥಗಿತಗೊಳಿಸಿ ವಾಪಸಾದರು. ಈ ಮೂಲಕ ಚಿತ್ರ ನಗರಿಯ ಪರಿಹಾರದ ಪ್ರತಿಭಟನೆ ೧೩೬ನೇ ದಿನ ಇನ್ನೊಂದು ಮಜಲು ತಲುಪಿದಂತಾಗಿದೆ.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಪಿ.ಮರಂಕಯ್ಯ, ಪ್ರೇಮರಾಜ್, ಸಂಘದ ಯುವ ಘಟಕದ ಅದ್ಯಕ್ಷ ಶ್ರೀಕಂಠ, ಭೂಮಾಲೀಕರಾದ ಸಂತೋಷ, ಪ್ರಕಾಶ, ಬಸಪ್ಪ, ರಾಜಣ್ಣ, ವೆಂಕಟೇಗೌಡ, ವಾಸು, ಕಳಸಮ್ಮ ಮಂಗಳಮ್ಮ, ಮಂಜುಳ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…