ಮೈಸೂರು

ಮೈಸೂರು | ವಿದೇಶಿ ಮಹಿಳೆ ಜೊತೆ ಅನುಚಿತ ವರ್ತನೆ ;ಮಧ್ಯರಾತ್ರಿ ಮನೆಗೆ ನುಗ್ಗಿದ ಖದೀಮ

ಕಪಿಮುಷ್ಠಿಯಿಂದ ಬಚಾವ್ ಆದ ಮಹಿಳೆ

ತಡವಾಗಿ ಬೆಳಕಿಗೆ ಬಂದ ಪ್ರಕರಣ

ಮೈಸೂರು : ಮಧ್ಯರಾತ್ರಿ ವೇಳೆ ಬಲವಂತವಾಗಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ವಿದೇಶಿ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.

ವಿದೇಶಿ ಮಹಿಳೆಯ ಸಮಯಪ್ರಜ್ಞೆ ಆಕೆಯನ್ನ ಅನಾಹುತದಿಂದ ಪಾರು ಮಾಡಿದೆ.ಅಪರಿಚಿತನ ವಿರುದ್ದ ವಿದೇಶಿ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಯು.ಕೆ.ಪ್ರಜೆ 45 ವರ್ಷದ ಮಹಿಳೆಯಿಂದ ಪ್ರಕರಣ ದಾಖಲಾಗಿದೆ.ಜುಲೈ 18 ರಂದು ಯೋಗಾಭ್ಯಾಸಕ್ಕಾಗಿ ಪ್ರವಾಸಿ ವೀಸಾದಲ್ಲಿ ಬಂದ ಯು.ಕೆ.ಮಹಿಳೆ ಗೋಕುಲಂ ಬಡಾವಣೆಯಲ್ಲಿ ತಂಗಿದ್ದರು.27-7-2025 ರ ರಾತ್ರಿ ಸುಮಾರು 11.45 ರಲ್ಲಿ ಬಾಗಿಲು ತಟ್ಟಿದ ಶಬ್ದವಾಗಿದೆ.ಫುಡ್ ಡೆಲಿವರಿ ಬಾಯ್ ಇರಬಹುದೆಂದು ಮಹಿಳೆ ಬಾಗಿಲು ತೆರೆದಿದ್ದಾರೆ.ಫುಡ್ ಆರ್ಡರ್ ಮಾಡಿಲ್ಲವೆಂದು ಹೇಳುತ್ತಿದ್ದ ವೇಳೆ ಮಹಿಳೆಯನ್ನ ಬೆಡ್ ಮೇಲೆ ತಳ್ಳಿ ಬಾಗಿಲು ಚಿಲಕ ಹಾಕುವ ಪ್ರಯತ್ನ ಮಾಡಿದ್ದಾನೆ.ಈ ವೇಳೆ ಮಹಿಳೆ ಕಿರುಚಲು ಪ್ರಯತ್ನಿಸಿದಾಗ ಬಾಯಿಮುಚ್ಚಿದ್ದಾನೆ. ಆತನನ್ನ ತಳ್ಳಿ ಮಹಿಳೆ ಹೊರಬಂದು ಕಿರುಚಾಡಿದಾಗ ರಾಜೀವ್ ಎಂಬುವರು ಸಹಾಯಕ್ಕೆ ಬಂದಿದ್ದಾರೆ. ಅಪರಿಚಿತನನ್ನು ಮನೆಯೊಳಗೆ ತಳ್ಳಿ ಹೊರಗಿನಿಂದ ಬಾಗಿಲು ಭದ್ರಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಬರುವಷ್ಟರಲ್ಲಿ ಬಾಲ್ಕನಿಯಿಂದ ಕಿಡಿಗೇಡಿ ಪರಾರಿಯಾಗಿದ್ದಾನೆ.

ನೊಂದ ವಿದೇಶಿ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

2 mins ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

7 mins ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

11 mins ago

ಗಣರಾಜ್ಯೋತ್ಸವದ ಅಯೋಮಯ ಇಂಗ್ಲಿಷ್ ಭಾಷಣ

ಗಣರಾಜ್ಯೋತ್ಸವ ಎಂದೊಡನೆ ನಾನು ಪ್ರೌಢಶಾಲೆಯಲ್ಲಿ ಸತತವಾಗಿ ೩ವರ್ಷ ಮಾಡಿದ ಇಂಗ್ಲಿಷ್ ಭಾಷಣ ನೆನಪಾಗುತ್ತದೆ. ಈ ದಿನದ ಮಹತ್ವದ ಬಗ್ಗೆ ಇತ್ತೀಚೆಗೆ…

15 mins ago

ಈಗ ಗಣರಾಜ್ಯೋತ್ಸವದಲ್ಲೂ ದ್ವೇಷದ ಉರಿಗಾಳಿ

ಗಣರಾಜ್ಯೋತ್ಸವ ಅಂದರೆ ನನಗೆ ನೆನಪಾಗೋದು ಶಾಲಾ ದಿನಗಳು. ಗಣರಾಜ್ಯದ ಹಿಂದಿನ ಎರಡು ಮೂರು ದಿನಗಳು ಯಾವುದೇ ತರಗತಿ ನಡೆಯುತ್ತಿರ ಲಿಲ್ಲ.…

18 mins ago

ಹಾಳೆ ಅಂಬುಲೆ ಉಯ್ಯಾಲೆ ಆಡಿ…

ನಾನು ಕೆಲಸ ಮಾಡುವ ಪಿರಿಯಾಪಟ್ಟಣದ ಶಾಲೆ ಮೈಸೂರು ಜಿಲ್ಲೆಯಲ್ಲೇ ವಿಶೇಷವಾದ ಶಾಲೆ. ಮೈಸೂರು ಜಿಲ್ಲೆಗೆ ಸೇರಿದ್ದರೂ ಕೊಡಗು ಜಿಲ್ಲೆಗೆ ಸಮೀಪ…

21 mins ago