ಮೈಸೂರು: ಮುಡಾ ನಿವೇಶನಗಳಲ್ಲಿ ಅಕ್ರಮ ಆರೋಪದ ಪಟ್ಟಿ ದಿನದಿಂದ ದಿನಕ್ಕೆ ಏರುತ್ತಿವೆ. ಈ ನಡುವೆ ಇದೀಗ ಮುಡಾ 15 ಸಾವಿರಕ್ಕೂ ಅಧಿಕ ನಿವೇಶನಗಳನ್ನು ಹಸ್ತಾಂತರ ಮಾಡದೆ ತನ್ನಲ್ಲೇ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಮುಡಾದಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಬೇಕಿದ್ದ ಖಾಸಗಿ ಬಡಾವಣೆಗಳನ್ನು ಇನ್ನೂ ಹಸ್ತಾಂತರ ಮಾಡದೇ ಕಚೇರಿಯಲ್ಲೇ ಬಾಕಿ ಉಳಿಸಿಕೊಂಡಿದೆ. ಈ ನಿವೇಶನಗಳನ್ನು ಹಸ್ತಾಂತರ ಮಾಡುವುದಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಒಟ್ಟು 21 ಗ್ರಾಮ ಪಂಚಾಯಿತಿಯ 202 ಸಂಖ್ಯೆಗಳ 15085 ನಿವೇಶನಗಳು ಹಸ್ತಾಂತರವಾಗದೇ ಮುಡಾ ಕಚೇರಿಯಲ್ಲಿಯೇ ಬಾಕಿ ಉಳಿದುಕೊಂಡಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಮುಡಾ ಕಚೇರಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗಬೇಕಿರುವ ಖಾಸಗಿ ಬಡಾವಣೆಗಳು
1. ಮೈಸೂರು ಮಹಾನಗರ ಪಾಲಿಕೆಯ 291 ನಿವೇಶನಗಳು
2. ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1059 ನಿವೇಶನಗಳು
3. ಹೂಟಗಳ್ಳಿ ನಗರಸಭಾ ಕಾರ್ಯಾಲಯ ವ್ಯಾಪ್ತಿಯ 119 ನಿವೇಶನಗಳು
4. ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1347 ನಿವೇಶನಗಳು
5. ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2169 ನಿವೇಶನಗಳು
6. ವರುಣಾ ವ್ಯಾಪ್ತಿಯ 1400 ನಿವೇಶನಗಳು
7. ವಾಜಮಂಗಲ ವ್ಯಾಪ್ತಿಯ 1646 ನಿವೇಶನಗಳು
8. ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1050 ನಿವೇಶನಗಳು
9. ಇಲವಾಲ ಗ್ರಾಮ ಪಂಚಾಯಿತಿಯ 1573 ನಿವೇಶನಗಳು
10. ಬೆಳಗೊಳ ಗ್ರಾಮ ಪಂಚಾಯಿತಿಯ 1220 ನಿವೇಶನಗಳು
ಈ ಮೇಲಿರುವ ನಿವೇಶನಗಳಲ್ಲದೆ ಆಲನಹಳ್ಳಿ, ದೇವನೂರು, ಗೋಪಾಲಪುರ, ನಾಗವಾಲ, ಉದ್ಬೂರು, ಸಿಂಧುವಳ್ಳಿ, ರಮ್ಮನಹಳ್ಳಿ, ಮೊಸಂಬಯ್ಯನಹಳ್ಳಿ ವ್ಯಾಪ್ತಿಯ ಸಾವಿರಾರು ನಿವೇಶನಗಳನ್ನು ಮುಡಾ ಕಚೇರಿಯಿಂದ ಹಸ್ತಾಂತರ ಆಗಬೇಕಿದೆ. ಆದಾಗ್ಯೂ ಹಸ್ತಾಂತರಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಇನ್ನಷ್ಟು ದಿನಗಳ ಕಾಲ ವಿಳಂಬವಾಗಲಿದೆ.
ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ,…
ಉಡುಪಿ : ಐಲ್ಯಾಂಡ್ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ…
ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…
ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…
ಬೆಂಗಳೂರು : ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ನಗರದ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…