Microfinance staff waylaid and robbed: ₹25000 looted culprits absconding
ತಿ.ನರಸೀಪುರ : ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಅಡ್ಡಗಟ್ಟಿರುವ ಏಳು ಮಂದಿ ದರೋಡೆಕೋರರ ತಂಡ ಮಚ್ಚು ತೋರಿಸಿ ಅವರ ಬಳಿ ಇದ್ದ ಸಾಲ ವಸೂಲಾತಿ 25 ಸಾವಿರ ರೂ. ದೋಚಿರುವ ಘಟನೆ ಸೋಮವಾರ ಸಂಜೆ ಪಟ್ಟಣದ ಹೊರವಲಯ ಶ್ರೀ ನರಸಿಂಹಸ್ವಾಮಿ ಕಂತೆಕಟ್ಟೆ ಕ್ಷೇತ್ರದ ಬಳಿ ಹುಣಸೂರು ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದ ಮಹೇಶ್ ಅವರು ಬಣ್ಣಾರಿ ಅಮ್ಮನ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಸಹೋದ್ಯೋಗಿ ಪ್ರೇಮ್ ಕುಮಾರ್ ಅವರೊಂದಿಗೆ ಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ಸೂಚನೆಯಂತೆ ವಿವಿಧೆಡೆ ಸಾಲದ ಹಣವನ್ನು ವಸೂಲಿ ಮಾಡಿಕೊಂಡು ಹುಣಸೂರು ಗ್ರಾಮದ ಕಡೆಗೆ ಬೈಕ್ನಲ್ಲಿ ಇಬ್ಬರೂ ಹೋಗುತ್ತಿದ್ದಾಗ ಸ್ಕೂಟಿ ಹಾಗೂ ಕಾರಿನಲ್ಲಿ ಬಂದು ಅಡ್ಡಗಟ್ಟಿರುವ ಏಳು ಮಂದಿ ದರೋಡೆಕೋರರ ತಂಡ ಹಣವನ್ನು ದೋಚಿದ್ದಾರೆ.
ಮಹೇಶ್ ಮತ್ತು ಪ್ರೇಮ್ ಕುಮಾರ್ ಇಬ್ಬರೂ ಬೆಳಿಗ್ಗೆ ಕಂಪೆನಿಯ ಬೈಕ್ನಲ್ಲಿ ಆಲನಹಳ್ಳಿ, ನಂತರ ವರುಣ, ಸೋಸಲೆ, ಪೂರಿಗಾಲಿ, ಸರಗೂರು ಹ್ಯಾಂಡ್ ಪೋಸ್ಟ್ ಹಾಗೂ ತಲಕಾಡು ಗ್ರಾಮಗಳಲ್ಲಿ ಅಂಗಡಿ ಮತ್ತು ಸಾರ್ವಜನಿಕರಿಂದ ಒಟ್ಟು 25 ಸಾವಿರ ರೂ.ಗಳನ್ನು ಸಾಲಗಾರರಿಂದ ವಸೂಲಿ ಮಾಡಿಕೊಂಡು ತಲಕಾಡಿನಿಂದ ತಿ.ನರಸೀಪುರಕ್ಕೆ ಬರುತ್ತಿದ್ದು, ಬಳಿಕ ಇಬ್ಬರೂ ತಿ.ನರಸೀಪುರದಿಂದ ಹುಣಸೂರಿಗೆ ಹೋಗುತ್ತಿದ್ದಾಗ ಬೈಕ್ ಅನ್ನು ಮಾರ್ಗ ಮಧ್ಯೆ ಶ್ರೀ ನರಸಿಂಹಸ್ವಾಮಿ ಕಂತೆಕಟ್ಟೆ ಕ್ಷೇತ್ರದ ಬಳಿ ನರಸೀಪುರ ಕಡೆಯಿಂದ ಬಿಳಿಯ ಬಣ್ಣದ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ಒಂದು ಕೆಂಪು ಬಣ್ಣದ ಇನ್ನೋವಾ ಕಾರಿನಲ್ಲಿದ್ದ ಐವರು ಅಡ್ಡಹಾಕಿ ನಿಲ್ಲಿಸಿ ಚಿಕ್ಕ ಮಚ್ಚನ್ನು ತೋರಿಸಿ, ಬೆದರಿಸಿ 21 ಸಾವಿರ ರೂ. ಸಾಲ ವಸೂಲಾತಿ ಹಣ ಹಾಗೂ ಪ್ರೇಮ್ ಕುಮಾರ್ ಬಳಿಯಿದ್ದ 4 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರು ಘಟನಾ ಸ್ಥಳದ ಮಹಜರು ನಡೆಸಿ ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…