ಮೈಸೂರು

ದೇವಸ್ಥಾನದಲ್ಲಿ ಗೊಬ್ಬರ ತಯಾರಿಕೆ

ಪ್ರಶಾಂತ್ ಎನ್ ಮಲ್ಲಿಕ್, ಮೈಸೂರು

ಮೈಸೂರು: ದೇವಸ್ಥಾನದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಕಸದ ಬುಟ್ಟಿಗೆ ಹಾಕುವುದನ್ನು ಹಾಗೂ ಇಲ್ಲವಾದರೆ ಹೊರಗಡೆ ಸುರಿಯುವುದನ್ನು ನಾವು ನೋಡಿರುತ್ತೇವೆ ಆದರೆ ಮೈಸೂರು ಜಿಲ್ಲೆಯ ಪುರಾತನ ದೇವಾಲಯದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಗಿಡಕ್ಕೆ ಹಾಕುವ ಗೊಬ್ಬರ ವಾಗಿ ತಯಾರಿಕೆ ಮಾಡುತ್ತಿದ್ದಾರೆ. ಬೇಡವಾದ ವಸ್ತುವನ್ನು ಸಹ ಉಪಯೋಗ ಬರುವ ರೀತಿಯಲ್ಲಿ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪುರಾತನ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ನಂಜುಂಡೇಶ್ವರನ ಮೂಲ ಸ್ಥಳವೆಂದೇ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯವಾದ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಬೇಡವಾದ ವಸ್ತುವನ್ನು ಸಹ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಎರಡು ವರ್ಷಗಳಿಂದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಈ ವ್ಯವಸ್ಥೆಯನ್ನು ಐಟಿಸಿ ಕಂಪನಿಯು ಎರಡು ವರ್ಷದ ಹಿಂದೆ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ವಿವರಣೆ ನೀಡಿ ದೇವಸ್ಥಾನಕ್ಕೆ ಎರಡು ಡ್ರಮ್ ಅನ್ನು ಅಳವಡಿಸಿದ್ದಾರೆ. ಹೇಗೆ ಗೊಬ್ಬರವಾಗಿ ತಯಾರು ಮಾಡಬೇಕು ಎಂದು ಸಹ ಚಾರ್ಟ್ ದೇವಸ್ಥಾನದ ಗೋಡೆ ಮೇಲೆ ಅಳವಡಿಕೆ ಮಾಡಿದ್ದಾರೆ.

ಚಾರ್ಟ್ ಅಲ್ಲಿ ಹಂತ ಹಂತವಾಗಿ ವಿವರಣೆ:

ಹಂತ 1. ಮೊದಲು ದೇವಾಲಯದಿಂದ ಬರುವಂತ ಕೊಳೆಯುವ ತ್ಯಾಜ್ಯವನ್ನು ಸಂಗ್ರಹಿಸಬೇಕು.

ಹಂತ 2: ನಂತರ ಸಂಗ್ರಹಿಸಿದ ತ್ಯಾಜ್ಯವನ್ನು ಗೊಬ್ಬರ ತಯಾರಿಸುವ ಕಾಂಪೋಸ್ಟರ್ ಒಳಗೆ ಹಾಕಬೇಕು.

ಹಂತ 3 : ಎಲ್ಲವನ್ನು ಹಾಕಿದ ನಂತರ ಇನಾಕ್ಯುಲಮ್ ಅಥವಾ ಹುಳಿ ಮೊಸರನ್ನು ಇದಕ್ಕೆ ಸೇರಿಸಿ ಸಮವಾಗಿ ಹರಡಬೇಕು.

1. ಈ ರೀತಿ ಪ್ರತಿಭಾರಿ ದೇವಾಲಯದಿಂದ ಬಂದ ಹೂಗಳು ಹಾಗು ಎಲೆಗಳನ್ನು ಕಾಂಪೋಸ್ಟರ್ ಒಳಗೆ ಹಾಕುವ ಮೂಲಕ ಗೊಬ್ಬರವನ್ನು ತಯಾರಿಸಬಹುದು.

2. ಹೀಗೆ ದೊರೆತಂತ ಗೊಬ್ಬರವನ್ನು ದೇವಾಲಯದ ಉದ್ಯಾನದಲ್ಲಿ ಬಳಸಬಹುದು ಮತ್ತು ಭಕ್ತಾದಿಗಳಿಗೆ ಮಾರಾಟ ಮಾಡಬಹುದು

3. ಹೂವಿನ ಹಾರದಲ್ಲಿ ಬರುವ ದಾರವನ್ನು ಬಿಡಿಸಿ ಕಾಂಪೋಸ್ಟರ್ ಒಳಗೆ ಹಾಕಬೇಕು ಹಾಗು ತ್ಯಾಜ್ಯ ಹಸಿ ಇರದಂತೆ ಮರದ ಒಟ್ಟು ಅಥವಾ ಬೂದಿಯನ್ನು ಸೇರಿಸಿ ಹಾಗೂ ಶುಚಿತ್ವ ದೈವತ್ವ ಎಂದು ವಿವರಣೆ ನೀಡಿದ್ದಾರೆ.

ಸದ್ಯ ಈ ದೇವಸ್ಥಾನದಲ್ಲಿ ಹೂಗಳನ್ನು ಗಿಡಗಳಿಗೆ ಎಲ್ಲಂದರಲ್ಲಿ ಬಿಸಾಡುತ್ತಿದ್ದರು. ಆದರೆ ಈಗ ಒಣಗಿದ ಹೂವು ಗಳನ್ನು ಡ್ರಮ್ ಗೆ ಹಾಕಿ ಅಲ್ಲಿಗೆ ಹೂವು ಮಣ್ಣು ಮರದ ಹೊಟ್ಟು ಹಾಗೂ ಬೂದಿಯನ್ನು ಹಾಕಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಬಾಲ್ಯವನ್ನು ನೆನಪಿಸಿದ ಗುರು-ಶಿಷ್ಯರ ಸ್ನೇಹ ಸಮ್ಮಿಲನ

ಎಸ್.ಎ.ಹುಸೇನ್ ಡಿ.ಚೆನ್ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಕಣ್ಣಾಲಿಗಳನ್ನು ಒದ್ದೆಯಾಗಿಸಿದ ಗುರು-ಶಿಷ್ಯರ ಬಾಂಧವ್ಯ ಮಡಿಕೇರಿ: ಕಾಲ ಚಕ್ರ ಉರುಳುತ್ತಾ ಸಾಗುತ್ತದೆ, ತಲೆಗೂದಲು…

1 min ago

ಹೆದ್ದಾರಿಯಲ್ಲಿ ಮನಸ್ಸಿಗೆ ಮುದ ನೀಡುತ್ತಿರುವ ಕೆಂಬಣ್ಣದ ಹೂಗಳ ಚಿತ್ತಾರ!

ಭೇರ್ಯ ಮಹೇಶ್ ಕೆ.ಆರ್.ನಗರದಿಂದ ಭೇರ್ಯ ಗ್ರಾಮದವರೆಗೆ ಅಲ್ಲಲ್ಲಿ ಮೇ ಫ್ಲವರ್ ಮರಗಳ ಆಕರ್ಷಣೆ  ಕೆ.ಆರ್.ನಗರ: ಬೇಸಿಗೆಯ ನಡುವೆ ಆಗೊಮ್ಮೆ ಈಗೊಮ್ಮೆ…

7 mins ago

ಪಾರಂಪರಿಕ ಕಟ್ಟಡ ತತ್ತರ; ನಿರ್ವಹಣೆಗಿಲ್ಲ ಸ್ಪಷ್ಟ ಉತ್ತರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತುಗಳಲ್ಲಿ ಪಾರಂಪರಿಕ ಕಟ್ಟಡಗಳೂ ಪ್ರಮುಖವಾದವು. ಪ್ರವಾಸಿಗರಿಗೂ ಇವುಗಳ ಸೆಳೆತ ಇದ್ದೇ ಇದೆ. ಇಂತಹ ಕಟ್ಟಡಗಳ…

12 mins ago

ಮೈಸೂರು | ಮಳೆ ಅನಾಹುತ ಎದುರಿಸಲು ಚೆಸ್ಕಾಂ ಸನ್ನದ್ಧ

ಮೈಸೂರು : ಮಳೆಯ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಕೂಡ ಸಿದ್ಧತೆ ಮಾಡಕೊಂಡಿದೆ. ಮೈಸೂರು ನಗರದ ಎಂಟು ಸಬ್ ಡಿವಿಸನ್‌ನಲ್ಲಿ…

11 hours ago

ಮತ್ತೆ ಗ್ರಾಹಕರಿಗೆ ಶಾಕ್ ; ಪೆಟ್ರೋಲ್, ಡೀಸೆಲ್ ದರ 95 ಪೈಸೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಮೇಲಿನ ಯುದ್ಧದ ನಡುವೆಯೇ ಇಂಧನ ದರಗಳನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಕೇಂದ್ರ…

11 hours ago