ಮೈಸೂರು

ದೇವಸ್ಥಾನದಲ್ಲಿ ಗೊಬ್ಬರ ತಯಾರಿಕೆ

ಪ್ರಶಾಂತ್ ಎನ್ ಮಲ್ಲಿಕ್, ಮೈಸೂರು

ಮೈಸೂರು: ದೇವಸ್ಥಾನದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಕಸದ ಬುಟ್ಟಿಗೆ ಹಾಕುವುದನ್ನು ಹಾಗೂ ಇಲ್ಲವಾದರೆ ಹೊರಗಡೆ ಸುರಿಯುವುದನ್ನು ನಾವು ನೋಡಿರುತ್ತೇವೆ ಆದರೆ ಮೈಸೂರು ಜಿಲ್ಲೆಯ ಪುರಾತನ ದೇವಾಲಯದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಗಿಡಕ್ಕೆ ಹಾಕುವ ಗೊಬ್ಬರ ವಾಗಿ ತಯಾರಿಕೆ ಮಾಡುತ್ತಿದ್ದಾರೆ. ಬೇಡವಾದ ವಸ್ತುವನ್ನು ಸಹ ಉಪಯೋಗ ಬರುವ ರೀತಿಯಲ್ಲಿ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪುರಾತನ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ನಂಜುಂಡೇಶ್ವರನ ಮೂಲ ಸ್ಥಳವೆಂದೇ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯವಾದ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಬೇಡವಾದ ವಸ್ತುವನ್ನು ಸಹ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಎರಡು ವರ್ಷಗಳಿಂದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಈ ವ್ಯವಸ್ಥೆಯನ್ನು ಐಟಿಸಿ ಕಂಪನಿಯು ಎರಡು ವರ್ಷದ ಹಿಂದೆ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ವಿವರಣೆ ನೀಡಿ ದೇವಸ್ಥಾನಕ್ಕೆ ಎರಡು ಡ್ರಮ್ ಅನ್ನು ಅಳವಡಿಸಿದ್ದಾರೆ. ಹೇಗೆ ಗೊಬ್ಬರವಾಗಿ ತಯಾರು ಮಾಡಬೇಕು ಎಂದು ಸಹ ಚಾರ್ಟ್ ದೇವಸ್ಥಾನದ ಗೋಡೆ ಮೇಲೆ ಅಳವಡಿಕೆ ಮಾಡಿದ್ದಾರೆ.

ಚಾರ್ಟ್ ಅಲ್ಲಿ ಹಂತ ಹಂತವಾಗಿ ವಿವರಣೆ:

ಹಂತ 1. ಮೊದಲು ದೇವಾಲಯದಿಂದ ಬರುವಂತ ಕೊಳೆಯುವ ತ್ಯಾಜ್ಯವನ್ನು ಸಂಗ್ರಹಿಸಬೇಕು.

ಹಂತ 2: ನಂತರ ಸಂಗ್ರಹಿಸಿದ ತ್ಯಾಜ್ಯವನ್ನು ಗೊಬ್ಬರ ತಯಾರಿಸುವ ಕಾಂಪೋಸ್ಟರ್ ಒಳಗೆ ಹಾಕಬೇಕು.

ಹಂತ 3 : ಎಲ್ಲವನ್ನು ಹಾಕಿದ ನಂತರ ಇನಾಕ್ಯುಲಮ್ ಅಥವಾ ಹುಳಿ ಮೊಸರನ್ನು ಇದಕ್ಕೆ ಸೇರಿಸಿ ಸಮವಾಗಿ ಹರಡಬೇಕು.

1. ಈ ರೀತಿ ಪ್ರತಿಭಾರಿ ದೇವಾಲಯದಿಂದ ಬಂದ ಹೂಗಳು ಹಾಗು ಎಲೆಗಳನ್ನು ಕಾಂಪೋಸ್ಟರ್ ಒಳಗೆ ಹಾಕುವ ಮೂಲಕ ಗೊಬ್ಬರವನ್ನು ತಯಾರಿಸಬಹುದು.

2. ಹೀಗೆ ದೊರೆತಂತ ಗೊಬ್ಬರವನ್ನು ದೇವಾಲಯದ ಉದ್ಯಾನದಲ್ಲಿ ಬಳಸಬಹುದು ಮತ್ತು ಭಕ್ತಾದಿಗಳಿಗೆ ಮಾರಾಟ ಮಾಡಬಹುದು

3. ಹೂವಿನ ಹಾರದಲ್ಲಿ ಬರುವ ದಾರವನ್ನು ಬಿಡಿಸಿ ಕಾಂಪೋಸ್ಟರ್ ಒಳಗೆ ಹಾಕಬೇಕು ಹಾಗು ತ್ಯಾಜ್ಯ ಹಸಿ ಇರದಂತೆ ಮರದ ಒಟ್ಟು ಅಥವಾ ಬೂದಿಯನ್ನು ಸೇರಿಸಿ ಹಾಗೂ ಶುಚಿತ್ವ ದೈವತ್ವ ಎಂದು ವಿವರಣೆ ನೀಡಿದ್ದಾರೆ.

ಸದ್ಯ ಈ ದೇವಸ್ಥಾನದಲ್ಲಿ ಹೂಗಳನ್ನು ಗಿಡಗಳಿಗೆ ಎಲ್ಲಂದರಲ್ಲಿ ಬಿಸಾಡುತ್ತಿದ್ದರು. ಆದರೆ ಈಗ ಒಣಗಿದ ಹೂವು ಗಳನ್ನು ಡ್ರಮ್ ಗೆ ಹಾಕಿ ಅಲ್ಲಿಗೆ ಹೂವು ಮಣ್ಣು ಮರದ ಹೊಟ್ಟು ಹಾಗೂ ಬೂದಿಯನ್ನು ಹಾಕಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಕಾಡಾನೆ ದಾಳಿ ; ಜಮೀನಿನ ಶೀಟಿನ ಮನೆ, ಟೊಮೆಟೊ ಬೆಳೆ ನಾಶ

ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಮಂಜುನಾಥ ಎಂಬವರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆ ನುಗ್ಗಿ ಕಟಾವು ಮಾಡಿ ಜಮೀನಿನ…

14 mins ago

ಏಪ್ರಿಲ್.‌11ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಜನತಾ ಸಮಾವೇಶ

ಬೆಂಗಳೂರು: ಹಾಸನ ಹಾಗೂ ವಿಜಯಪುರದಲ್ಲಿ ನಡೆಸಿದ ಮಾದರಿಯಲ್ಲೇ ಬೆಂಗಳೂರಿನಲ್ಲೂ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಹಾಗೂ ಜನತಾ ಸಮಾವೇಶವನ್ನು ನಡೆಸಲು…

1 hour ago

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು

ಬೆಂಗಳೂರು: ಸಾಲಗಾರರ ಕಾಟದಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು ತಾಯಿ-ಮಗಳು ಸಾವನ್ನಪ್ಪಿದರೆ, ಮತ್ತಿಬ್ಬರು ಸಾವು ಬದುಕಿನ ನಡುವೆ…

1 hour ago

ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ನಟ ವಿಜಯ್‌ ಸ್ಪರ್ಧೆ

ಚೆನ್ನೈ: ಏಪ್ರಿಲ್.23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ನಟ ವಿಜಯ್‌ ಘೋಷಣೆ ಮಾಡಿದ್ದಾರೆ. ಚೆನ್ನೈನ…

2 hours ago

ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್:‌ ಸಚಿವ ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು…

2 hours ago

ಹನೂರು| ಕಾಡಾನೆ ದಾಳಿ: ಆಟೋ ಜಖಂ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ವ್ಯಾಪಾರ ಮಾಡಲು…

3 hours ago