ಮೈಸೂರು

ದೇವಸ್ಥಾನದಲ್ಲಿ ಗೊಬ್ಬರ ತಯಾರಿಕೆ

ಪ್ರಶಾಂತ್ ಎನ್ ಮಲ್ಲಿಕ್, ಮೈಸೂರು

ಮೈಸೂರು: ದೇವಸ್ಥಾನದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಕಸದ ಬುಟ್ಟಿಗೆ ಹಾಕುವುದನ್ನು ಹಾಗೂ ಇಲ್ಲವಾದರೆ ಹೊರಗಡೆ ಸುರಿಯುವುದನ್ನು ನಾವು ನೋಡಿರುತ್ತೇವೆ ಆದರೆ ಮೈಸೂರು ಜಿಲ್ಲೆಯ ಪುರಾತನ ದೇವಾಲಯದಲ್ಲಿ ದೇವರ ಮೇಲೆ ಇರುವ ಹೂವು ಗಳನ್ನು ಗಿಡಕ್ಕೆ ಹಾಕುವ ಗೊಬ್ಬರ ವಾಗಿ ತಯಾರಿಕೆ ಮಾಡುತ್ತಿದ್ದಾರೆ. ಬೇಡವಾದ ವಸ್ತುವನ್ನು ಸಹ ಉಪಯೋಗ ಬರುವ ರೀತಿಯಲ್ಲಿ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪುರಾತನ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ನಂಜುಂಡೇಶ್ವರನ ಮೂಲ ಸ್ಥಳವೆಂದೇ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯವಾದ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಬೇಡವಾದ ವಸ್ತುವನ್ನು ಸಹ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಎರಡು ವರ್ಷಗಳಿಂದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಈ ವ್ಯವಸ್ಥೆಯನ್ನು ಐಟಿಸಿ ಕಂಪನಿಯು ಎರಡು ವರ್ಷದ ಹಿಂದೆ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ವಿವರಣೆ ನೀಡಿ ದೇವಸ್ಥಾನಕ್ಕೆ ಎರಡು ಡ್ರಮ್ ಅನ್ನು ಅಳವಡಿಸಿದ್ದಾರೆ. ಹೇಗೆ ಗೊಬ್ಬರವಾಗಿ ತಯಾರು ಮಾಡಬೇಕು ಎಂದು ಸಹ ಚಾರ್ಟ್ ದೇವಸ್ಥಾನದ ಗೋಡೆ ಮೇಲೆ ಅಳವಡಿಕೆ ಮಾಡಿದ್ದಾರೆ.

ಚಾರ್ಟ್ ಅಲ್ಲಿ ಹಂತ ಹಂತವಾಗಿ ವಿವರಣೆ:

ಹಂತ 1. ಮೊದಲು ದೇವಾಲಯದಿಂದ ಬರುವಂತ ಕೊಳೆಯುವ ತ್ಯಾಜ್ಯವನ್ನು ಸಂಗ್ರಹಿಸಬೇಕು.

ಹಂತ 2: ನಂತರ ಸಂಗ್ರಹಿಸಿದ ತ್ಯಾಜ್ಯವನ್ನು ಗೊಬ್ಬರ ತಯಾರಿಸುವ ಕಾಂಪೋಸ್ಟರ್ ಒಳಗೆ ಹಾಕಬೇಕು.

ಹಂತ 3 : ಎಲ್ಲವನ್ನು ಹಾಕಿದ ನಂತರ ಇನಾಕ್ಯುಲಮ್ ಅಥವಾ ಹುಳಿ ಮೊಸರನ್ನು ಇದಕ್ಕೆ ಸೇರಿಸಿ ಸಮವಾಗಿ ಹರಡಬೇಕು.

1. ಈ ರೀತಿ ಪ್ರತಿಭಾರಿ ದೇವಾಲಯದಿಂದ ಬಂದ ಹೂಗಳು ಹಾಗು ಎಲೆಗಳನ್ನು ಕಾಂಪೋಸ್ಟರ್ ಒಳಗೆ ಹಾಕುವ ಮೂಲಕ ಗೊಬ್ಬರವನ್ನು ತಯಾರಿಸಬಹುದು.

2. ಹೀಗೆ ದೊರೆತಂತ ಗೊಬ್ಬರವನ್ನು ದೇವಾಲಯದ ಉದ್ಯಾನದಲ್ಲಿ ಬಳಸಬಹುದು ಮತ್ತು ಭಕ್ತಾದಿಗಳಿಗೆ ಮಾರಾಟ ಮಾಡಬಹುದು

3. ಹೂವಿನ ಹಾರದಲ್ಲಿ ಬರುವ ದಾರವನ್ನು ಬಿಡಿಸಿ ಕಾಂಪೋಸ್ಟರ್ ಒಳಗೆ ಹಾಕಬೇಕು ಹಾಗು ತ್ಯಾಜ್ಯ ಹಸಿ ಇರದಂತೆ ಮರದ ಒಟ್ಟು ಅಥವಾ ಬೂದಿಯನ್ನು ಸೇರಿಸಿ ಹಾಗೂ ಶುಚಿತ್ವ ದೈವತ್ವ ಎಂದು ವಿವರಣೆ ನೀಡಿದ್ದಾರೆ.

ಸದ್ಯ ಈ ದೇವಸ್ಥಾನದಲ್ಲಿ ಹೂಗಳನ್ನು ಗಿಡಗಳಿಗೆ ಎಲ್ಲಂದರಲ್ಲಿ ಬಿಸಾಡುತ್ತಿದ್ದರು. ಆದರೆ ಈಗ ಒಣಗಿದ ಹೂವು ಗಳನ್ನು ಡ್ರಮ್ ಗೆ ಹಾಕಿ ಅಲ್ಲಿಗೆ ಹೂವು ಮಣ್ಣು ಮರದ ಹೊಟ್ಟು ಹಾಗೂ ಬೂದಿಯನ್ನು ಹಾಕಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.

 

ಆಂದೋಲನ ಡೆಸ್ಕ್

Recent Posts

‘ಇದು ನನ್ನ ಜಮೀನು, ನಾನಿನ್ನೂ ಬದುಕಿದ್ದೇನೆ’

ಮಂಜು ಕೋಟೆ ಕೋಟೆ: ಕೆಲವರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಚಿಕಾಗೋದಿಂದ ಆಗಮಿಸಿ ದಾಖಲೆ ಸಲ್ಲಿಸಿದ…

50 seconds ago

‘ಒಳಚರಂಡಿ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ’: ಶಾಸಕ ಜಿಟಿಡಿ ಸೂಚನೆ

ಮೈಸೂರು:ಹಲವು ತಿಂಗಳುಗಳಿಂದ ಒಳಚರಂಡಿ ನೀರು ಹರಿಯುವ ಜತೆಗೆ,ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದ ಸನ್ನಿವೇಶ ನಿರ್ಮಾಣವಾಗಿದ್ದು,ಇದಕ್ಕೆ ಶಾಶ್ವತ ಪರಿಹಾರ…

7 mins ago

ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳಿವರು…

ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…

9 hours ago

ಹೆಬ್ಬಾಳಿನಲ್ಲಿ ಡ್ರಗ್ಸ್‌ ಲ್ಯಾಬ್‌ ಶಂಕೆ : ಶೆಡ್‌ವೊಂದರ ಮೇಲೆ ಎನ್‌ಸಿಬಿ ದಾಳಿ

ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…

9 hours ago

ನಿಗಮ ಮಂಡಳಿ | ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ

ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…

9 hours ago

ಡಿಜಿಟಲ್‌ ಅರೆಸ್ಟ್‌ ಕುತಂತ್ರ : 1 ಕೋಟಿ ವಂಚನೆ

ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…

9 hours ago