ನಂಜನಗೂಡು : ಮಂಡ್ಯದ ಮೂಲದ ವ್ಯಕ್ತಿಯೊಬ್ಬರು ನಂಜಗೂಡಿನ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.
ಮಂಡ್ಯ ತಾಲೂಕಿನ ಬೆಳ್ಳಂಗನ ಹುಂಡಿಯ ಶಿಕ್ಷಕ ಚಂದ್ರು (45) ನಂಜನಗೂಡಲ್ಲಿ ಕಪಿಲಾ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳವಾರ ನಂಜನಗೂಡಿಗೆ ಕಾರಿನಲ್ಲಿಬಂದ ಅವರು ರಾಷ್ಟ್ರೀಯ ಹೆದ್ದಾರಿ 766ನ ಕಪಿಲಾ ಸೇತುವೆ ಮೇಲೆ ತಮ್ಮ ಕಾರು ನಿಲ್ಲಿಸಿ ಚಪ್ಪಲಿ ಮೊಬೈಲು ಹಾಗೂ ಕಾರಿನ ಕೀ-ಯನ್ನು ಕಾರಿನಲ್ಲೇ ಬಿಟ್ಟು ಅಲ್ಲೇ ಸೇತುವೆಯಿಂದ ನದಿಗೆ ಜಿಗಿದು ಅಸು ನೀಗಿದ್ದಾರೆ ಎನ್ನಲಾಗಿದೆ.
ಬಾಗಿಲು ತೆರದ ಕಾರು ಬಹಳ ಸಮಯ ಅಲ್ಲೆ ನಿಂತಿರುವದನ್ನು ಕಂಡವರು ಪೊಲೀಸರಿಗೆ ಸುದ್ದಿ ತಲುಪಿಸಿ ಅವರು ಬಂದು ಪರಿಕ್ಷಿಸಿ ಮಂಡ್ಯ ನೋಂದಣಿಯ ಕಾರಿನಿಂದ ಮಾಲಿಕರ ವಿಳಾಸ ಪತ್ತೆ ಮಾಡಿದಾಗ ಈ ಆತ್ಮಹತ್ಯೆಯ ಸುಳಿವು ದೊರಕಿತು.
ನಂತರ ನಂಜನಗೂಡು ನಗರ ಠಾಣೆಯ ಎಸ್ ರವೀಂದ್ರ ಹಾಗೂ ತಿಮ್ಮಯ್ಯ ಮೂರು ತೆಪ್ಪಗಳನ್ನು ತರಿಸಿ ನುರಿತ ಈಜುಗಾರರಿಂದ ಕಪಿಲಾ ನದಿಯನ್ನು ಜಾಲಾಡಿಸಿದ ಪರಿಣಾಮ ಚಂದ್ರು ದೇಹ ಸೇತುವೆಯಿಂದ 1.ಕಿ.ಮಿ ದೂರದಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಬಳಿ ಪತ್ತೆಯಾಯಿತು.
ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೋಲಿಸರು ನದಿಯಿಂದ ಶವವನ್ನು ತೆಗೆದು ಮರಣೋತ್ತರ ಪರಿಕ್ಷೆಗೆ ಕಳಿಸಿದರು.
ಜಿ.ಪಂ ಉದ್ಯೋಗಿ ಪತ್ನಿ ಭಾಗ್ಯ ಹಾಗೂ ಮಕ್ಕಳಾದ ಮನೋಜ ಪಾಟೀಲ್ ಹಾಗೂ ಭಾನುಪ್ರಕಾಶರನ್ನು ಅಗಲಿದ ಮಂಜು ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿಯದಾಗಿದೆ.
ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…
ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ…
ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…
ನಲವತ್ತು ವರುಷಗಳ ಕೆಳಗೆ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ಇರುವುದಕ್ಕಿಂತ ಬಹಳ ಕಡಿಮೆಯಾಗಿತ್ತು. ತಾವು ಮದುವೆಯಾದವರಾಗಿದ್ದರೂ, ಬ್ರಹ್ಮಚಾರಿಗಳೆಂದು ನಟಿಸುವುದು…
ಭೇರ್ಯ ಮಹೇಶ್ ಮಳೆ ಅಭಾವದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ, ರೈತರಿಗೆ ಸಾಕಷ್ಟು ನಷ್ಟ ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…