Learning How to Overcome Life’s Dispassion is the Real Lesson: Film Director Suresh
ಮೈಸೂರು : ಯುವಕರು ಸಾಮಾಜಿಕ ಮಾದ್ಯಮಗಳಲ್ಲಿ ಬಹು ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ. ಅದರಲ್ಲಿ ದಬ್ಬಾಳಿಕೆ ನಡೆಸುವ, ಇದ್ದಕ್ಕಿದ್ದಂತೆ ಸನಾತನಿಗಳಾಗಿ, ಮತ್ತೊಮ್ಮೆ ಆಧುನೀಕರಣಿಗಳಾಗಿ, ಮರುಕ್ಷಣವೇ ಸಂಸ್ಕಾರ, ಭಕ್ತಿದಾರಿಗಳಾಗಿ ಬದುಕುತ್ತಿರುವ ಇವರ ಮನಸ್ಥಿತಿಯ ಬಗ್ಗೆ ಅತೀವವಾದ ಕುತೂಹಲ, ಆತಂಕವಿದೆ ಎಂದು ಚಲನಚಿತ್ರ ನಟ, ನಿರ್ದೇಶಕ ಬಿ.ಸುರೇಶ್ ವಿಶ್ಲೇಷಿಸಿದರು.
ನಗರದ ಚಾಮರಾಜಪುರಂನ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಿನಿಮೊಟೋಗ್ರಫಿ ಮತ್ತು ಫೋಟೋಗ್ರಫಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರಕಲೆಯ ಮೂಲಕ ಛಾಯಾಗ್ರಹಣ ಅದರಲ್ಲೂ ಸ್ಥಿರಚಿತ್ರಗ್ರಹಣ, ಚಲನಚಿತ್ರಛಾಯಾಗ್ರಹಣದ ಕಲಿಕೆ ನಿಜವಾಗಿ ಜೀವನದ ಸಾರ್ಥಕ ಮಾರ್ಗ. ಇವತ್ತಿನ ಕಾಲಘಟ್ಟದ ಮಕ್ಕಳೊಂದಿಗೆ ಮಾತನಾಡುವುದು ವೈಯಕ್ತಿಕವಾಗಿ ನನಗೆ ಬಹಳ ಸಂತಸವಾಗುತ್ತದೆ. ಚಿತ್ರಕಲೆ ಕಲಿಕೆಯಲ್ಲಿ ಹಿಂದೆ ಆಡಂಬರ ಚಿತ್ರಿಸಿ ಅದರ ಮುಂದಣ ಬಡತನವನ್ನು ಚಿತ್ರಿಸುವ ಕಲಾವಿದರು ಕಾಣಿಸುತ್ತಿದ್ದಾರೆ. ದೇಶದಲ್ಲಿ ಬಡತನದಿಂದ ಸಂಕಟದಲ್ಲಿರುವವರ ವೇದನೆ ಚಿತ್ರಿಸುವ ಕೆಲಸವಾಗುತ್ತಿದೆ. ಇವರು ನಿಜವಾಗಿ ನಾಡನ್ನು ಕಟ್ಟುವ ಮನಸ್ಸುಗಳು. ಪ್ರಸ್ತುತದಲ್ಲೂ ದಿನದಲ್ಲಿ ೪೦೦ ರೂ. ಸಂಪಾದಿಸಲು ಒದ್ದಾಡುತ್ತಿರುವವರೆ ಬಹುಸಂಖ್ಯಾಂತರು. ಬದುಕಿನ ವೈರುಧ್ಯ ದಾಟುವುದು ಹೇಗೆ ಎನ್ನುವುದೇ ಕಲಿಕೆ ಎಂದು ಹೇಳಿದರು.
ಇವತಿನ ಯುಜನತೆ ಬಗ್ಗೆ ಅಪಾರವಾದ ಕುತೂಹಲವಿದೆ. ಏಕೆಂದರೆ ಹೆಚ್ಚಿನ ಯುವಕರು ಪ್ರಸ್ತುತ ದಿನಗಳಲ್ಲಿ ವಿದೇಶಗಳ ಶಿಕ್ಷಣಕಾಗ್ಕಿ ಹಾರಿ ಹೋಗುವರ ಸಂಖ್ಯೆ ಹೆಚ್ಚಿದ್ದು, ನಮ್ಮದೇ ದೇಶದಲ್ಲಿ ಉಳಿದು ಕಲಿಕೆ ಪಡೆಯುತ್ತಿರುವ ಯುವ ಜನತೆಯ ಮೇಲೆ ಕುತೂಹಲ ಹೆಚ್ಚಿದೆ. ಇಲ್ಲಿ ಕಲಿತವರು ಎಲ್ಲಿಯೂ ಸಲ್ಲುವವರು ಎಂಬುದು ನನ್ನ ನಂಬಿಕೆ ಎಂದು ಬಣ್ಣಿಸಿದರು.
ಒಂದು ವರದಿಯ ಪ್ರಕಾರ ೨೦೨೨-೨೩ ಇಸವಿಯಲ್ಲಿ ಇಂಗ್ಲೆಂಡ್ನಲ್ಲಿ ಅತೀ ಹೆಚ್ಚು ವಿದ್ಯಾರ್ಥಿ ವೇತನ ಪಡೆದವರ ಪೈಕಿ ಭಾರತೀಯ ಯುವಕರೆ ಹೆಚ್ಚಿನದಾಗಿದ್ದಾರೆ. ಇವತ್ತಿನ ಯುವಜನತೆಗೆ ಹೊಸ ತಂತ್ರಜ್ಞಾನ ಹೆಚ್ಚು ಕರಗತವಾಗಿದ್ದು, ಏನನ್ನಾದರೂ ಮಾಡುವ ಸಾಮರ್ಥ್ಯ ಬೆಳಸಿಕೊಂಡಿದ್ದಾರೆ. ಇವರು ಒಂದು ರೀತಿಯಲ್ಲಿ ಏಕಕಾಲಕ್ಕೆ ಹಲವು ವೇಷ ಧರಿಸುವವರು ಎನ್ನಬಹುದು. ವೇಷದಾರಿಗಳಾದ ಇವರ ನಿಜವಾದ ಬದುಕಿನ ಬಗ್ಗೆ ಆತಂಕವಿದೆ.
ಹಿಂದೆ ಈ ದೇಶದ ಮಾದರಿ ನಾಯಕರಾಗುವವರು ಎಂದುಕೊಂಡಿದ್ದವರು ಇಂದು ರಾಜಕೀಯ ಪಕ್ಷಾಂತರಿ, ಸನಾತನವಾದಿಗಳಾಗಿ, ಮತೀಯರಾಗಿ ಮುಖವಾಡದ ಬದುಕುತ್ತಿರುವುದನ್ನು ಕಾಣುತಿದ್ದೇವೆ. ಎಂದು ಟೀಕೆ ವ್ಯಕ್ತಪಡಿಸಿದರು.
ರಂಗಭೂಮಿ ಹಾಗೂ ಚಲನಚಿತ್ರ ನೃತ್ಯಕಲಾವಿದೆ ಆರ್. ರಶ್ಮಿ, ಹಿರಿಯ ಛಾಯಾಚಿತ್ರ ಕಲಾವಿದ ಎಂ.ಆರ್. ಮಂಜುನಾಥ್, ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಶಿವಕುಮಾರ ಕೆಸರಮಡು ಉಪಸ್ಥಿತರಿದ್ದರು.
ಕಲೆಯಲ್ಲಿ ವಾಸ್ತವ ಹೇಳಬೇಕು
ಕಲೆಯಲ್ಲಿ ನಮ್ಮೆದುರಿಗಿನ ವಾಸ್ತವ ಹೇಳುವ ಕೆಲಸವಾಗಬೇಕು. ಇವತ್ತು ಬೆಂಗಳೂರಿನ ದೇವನಹಳ್ಳಿ-ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಕಳೆದ ೧೨ವರ್ಷದಿಂದ ರೈತರು ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅಂದಿನಿಂದಲೂ ಹಲವು ಸರ್ಕಾರಗಳು ರೈತರ ಬೇಡಿಕೆ ಧಿಕ್ಕರಿಸಿ, ಭೂಮಿ ಕಬಳಿಸಿ, ಕೈಗಾರೀಕರಣ ಮಾಡುವ ಕಡೆಗೆ ಸಾಗಿದ್ದಾರೆ. ಲಾಭಕೋರರಾಗಿ ಜನಪ್ರತಿನಿಧಿಗಳು ರೈತರನ್ನು ದಿವಾಳಿಯಾಗಿಸುತ್ತಿದ್ದು, ಆ ಭಾಗದ ನೆಮ್ಮದಿ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ. ಖಾಸಗೀಯವರೆಡೆ ಒಲವಿದ್ದು ಇದೆಲ್ಲ, ಭಾವನಾತ್ಮಕವಾಗಿ ದೇವಸ್ಥಾನ ಕಟ್ಟುವವರ ಆಯ್ಕೆ ಮಾಡಿದ್ದರ ಪರಿಣಾಮ. ನಾವೆಲ್ಲರೂ ದೇಶಕಟ್ಟುವ, ಶಾಲೆ, ಆಸ್ಪತ್ರೆ ಕಟ್ಟುವವವರನ್ನು ಆಯ್ಕೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಸಮಾಜ ಅವನತಿಯೆಡೆಗೆ ಸಾಗುತ್ತದೆ ಎಂದು ಬಿ.ಸುರೇಶ್ ಎಚ್ಚರಿಸಿದರು.
ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…
ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…
ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…
ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…