ಮೈಸೂರು

ಬದುಕಿನ ವೈರಾಗ್ಯ ದಾಟುವುದು ಹೇಗೆ ಎನ್ನುವುದೆ ಕಲಿಕೆ : ಚಿತ್ರ ನಿರ್ದೇಶಕ ಸುರೇಶ್‌

ಮೈಸೂರು : ಯುವಕರು ಸಾಮಾಜಿಕ ಮಾದ್ಯಮಗಳಲ್ಲಿ ಬಹು ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ. ಅದರಲ್ಲಿ ದಬ್ಬಾಳಿಕೆ ನಡೆಸುವ, ಇದ್ದಕ್ಕಿದ್ದಂತೆ ಸನಾತನಿಗಳಾಗಿ, ಮತ್ತೊಮ್ಮೆ ಆಧುನೀಕರಣಿಗಳಾಗಿ, ಮರುಕ್ಷಣವೇ ಸಂಸ್ಕಾರ, ಭಕ್ತಿದಾರಿಗಳಾಗಿ ಬದುಕುತ್ತಿರುವ ಇವರ ಮನಸ್ಥಿತಿಯ ಬಗ್ಗೆ ಅತೀವವಾದ ಕುತೂಹಲ, ಆತಂಕವಿದೆ ಎಂದು ಚಲನಚಿತ್ರ ನಟ, ನಿರ್ದೇಶಕ ಬಿ.ಸುರೇಶ್ ವಿಶ್ಲೇಷಿಸಿದರು.

ನಗರದ ಚಾಮರಾಜಪುರಂನ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಿನಿಮೊಟೋಗ್ರಫಿ ಮತ್ತು ಫೋಟೋಗ್ರಫಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿತ್ರಕಲೆಯ ಮೂಲಕ ಛಾಯಾಗ್ರಹಣ ಅದರಲ್ಲೂ ಸ್ಥಿರಚಿತ್ರಗ್ರಹಣ, ಚಲನಚಿತ್ರಛಾಯಾಗ್ರಹಣದ ಕಲಿಕೆ ನಿಜವಾಗಿ ಜೀವನದ ಸಾರ್ಥಕ ಮಾರ್ಗ. ಇವತ್ತಿನ ಕಾಲಘಟ್ಟದ ಮಕ್ಕಳೊಂದಿಗೆ ಮಾತನಾಡುವುದು ವೈಯಕ್ತಿಕವಾಗಿ ನನಗೆ ಬಹಳ ಸಂತಸವಾಗುತ್ತದೆ. ಚಿತ್ರಕಲೆ ಕಲಿಕೆಯಲ್ಲಿ ಹಿಂದೆ ಆಡಂಬರ ಚಿತ್ರಿಸಿ ಅದರ ಮುಂದಣ ಬಡತನವನ್ನು ಚಿತ್ರಿಸುವ ಕಲಾವಿದರು ಕಾಣಿಸುತ್ತಿದ್ದಾರೆ. ದೇಶದಲ್ಲಿ ಬಡತನದಿಂದ ಸಂಕಟದಲ್ಲಿರುವವರ ವೇದನೆ ಚಿತ್ರಿಸುವ ಕೆಲಸವಾಗುತ್ತಿದೆ. ಇವರು ನಿಜವಾಗಿ ನಾಡನ್ನು ಕಟ್ಟುವ ಮನಸ್ಸುಗಳು. ಪ್ರಸ್ತುತದಲ್ಲೂ ದಿನದಲ್ಲಿ ೪೦೦ ರೂ. ಸಂಪಾದಿಸಲು ಒದ್ದಾಡುತ್ತಿರುವವರೆ ಬಹುಸಂಖ್ಯಾಂತರು. ಬದುಕಿನ ವೈರುಧ್ಯ ದಾಟುವುದು ಹೇಗೆ ಎನ್ನುವುದೇ ಕಲಿಕೆ ಎಂದು ಹೇಳಿದರು.

ಇವತಿನ ಯುಜನತೆ ಬಗ್ಗೆ ಅಪಾರವಾದ ಕುತೂಹಲವಿದೆ. ಏಕೆಂದರೆ ಹೆಚ್ಚಿನ ಯುವಕರು ಪ್ರಸ್ತುತ ದಿನಗಳಲ್ಲಿ ವಿದೇಶಗಳ ಶಿಕ್ಷಣಕಾಗ್ಕಿ ಹಾರಿ ಹೋಗುವರ ಸಂಖ್ಯೆ ಹೆಚ್ಚಿದ್ದು, ನಮ್ಮದೇ ದೇಶದಲ್ಲಿ ಉಳಿದು ಕಲಿಕೆ ಪಡೆಯುತ್ತಿರುವ ಯುವ ಜನತೆಯ ಮೇಲೆ ಕುತೂಹಲ ಹೆಚ್ಚಿದೆ. ಇಲ್ಲಿ ಕಲಿತವರು ಎಲ್ಲಿಯೂ ಸಲ್ಲುವವರು ಎಂಬುದು ನನ್ನ ನಂಬಿಕೆ ಎಂದು ಬಣ್ಣಿಸಿದರು.

ಒಂದು ವರದಿಯ ಪ್ರಕಾರ ೨೦೨೨-೨೩ ಇಸವಿಯಲ್ಲಿ ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚು ವಿದ್ಯಾರ್ಥಿ ವೇತನ ಪಡೆದವರ ಪೈಕಿ ಭಾರತೀಯ ಯುವಕರೆ ಹೆಚ್ಚಿನದಾಗಿದ್ದಾರೆ. ಇವತ್ತಿನ ಯುವಜನತೆಗೆ ಹೊಸ ತಂತ್ರಜ್ಞಾನ ಹೆಚ್ಚು ಕರಗತವಾಗಿದ್ದು, ಏನನ್ನಾದರೂ ಮಾಡುವ ಸಾಮರ್ಥ್ಯ ಬೆಳಸಿಕೊಂಡಿದ್ದಾರೆ. ಇವರು ಒಂದು ರೀತಿಯಲ್ಲಿ ಏಕಕಾಲಕ್ಕೆ ಹಲವು ವೇಷ ಧರಿಸುವವರು ಎನ್ನಬಹುದು. ವೇಷದಾರಿಗಳಾದ ಇವರ ನಿಜವಾದ ಬದುಕಿನ ಬಗ್ಗೆ ಆತಂಕವಿದೆ.

ಹಿಂದೆ ಈ ದೇಶದ ಮಾದರಿ ನಾಯಕರಾಗುವವರು ಎಂದುಕೊಂಡಿದ್ದವರು ಇಂದು ರಾಜಕೀಯ ಪಕ್ಷಾಂತರಿ, ಸನಾತನವಾದಿಗಳಾಗಿ, ಮತೀಯರಾಗಿ ಮುಖವಾಡದ ಬದುಕುತ್ತಿರುವುದನ್ನು ಕಾಣುತಿದ್ದೇವೆ. ಎಂದು ಟೀಕೆ ವ್ಯಕ್ತಪಡಿಸಿದರು.
ರಂಗಭೂಮಿ ಹಾಗೂ ಚಲನಚಿತ್ರ ನೃತ್ಯಕಲಾವಿದೆ ಆರ್. ರಶ್ಮಿ, ಹಿರಿಯ ಛಾಯಾಚಿತ್ರ ಕಲಾವಿದ ಎಂ.ಆರ್. ಮಂಜುನಾಥ್, ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಶಿವಕುಮಾರ ಕೆಸರಮಡು ಉಪಸ್ಥಿತರಿದ್ದರು.

ಕಲೆಯಲ್ಲಿ ವಾಸ್ತವ ಹೇಳಬೇಕು
ಕಲೆಯಲ್ಲಿ ನಮ್ಮೆದುರಿಗಿನ ವಾಸ್ತವ ಹೇಳುವ ಕೆಲಸವಾಗಬೇಕು. ಇವತ್ತು ಬೆಂಗಳೂರಿನ ದೇವನಹಳ್ಳಿ-ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಕಳೆದ ೧೨ವರ್ಷದಿಂದ ರೈತರು ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅಂದಿನಿಂದಲೂ ಹಲವು ಸರ್ಕಾರಗಳು ರೈತರ ಬೇಡಿಕೆ ಧಿಕ್ಕರಿಸಿ, ಭೂಮಿ ಕಬಳಿಸಿ, ಕೈಗಾರೀಕರಣ ಮಾಡುವ ಕಡೆಗೆ ಸಾಗಿದ್ದಾರೆ. ಲಾಭಕೋರರಾಗಿ ಜನಪ್ರತಿನಿಧಿಗಳು ರೈತರನ್ನು ದಿವಾಳಿಯಾಗಿಸುತ್ತಿದ್ದು, ಆ ಭಾಗದ ನೆಮ್ಮದಿ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ. ಖಾಸಗೀಯವರೆಡೆ ಒಲವಿದ್ದು ಇದೆಲ್ಲ, ಭಾವನಾತ್ಮಕವಾಗಿ ದೇವಸ್ಥಾನ ಕಟ್ಟುವವರ ಆಯ್ಕೆ ಮಾಡಿದ್ದರ ಪರಿಣಾಮ. ನಾವೆಲ್ಲರೂ ದೇಶಕಟ್ಟುವ, ಶಾಲೆ, ಆಸ್ಪತ್ರೆ ಕಟ್ಟುವವವರನ್ನು ಆಯ್ಕೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಸಮಾಜ ಅವನತಿಯೆಡೆಗೆ ಸಾಗುತ್ತದೆ ಎಂದು ಬಿ.ಸುರೇಶ್ ಎಚ್ಚರಿಸಿದರು.

ಆಂದೋಲನ ಡೆಸ್ಕ್

Recent Posts

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2026 ಜನವರಿ 1ರಿಂದ ಅನ್ವಯವಾಗುವಂತೆ…

10 hours ago

ಮೇ.13ರಂದು ಬೆಂಗಳೂರು ಜನತೆಗೆ ಬಿಗ್‌ ಗಿಫ್ಟ್:‌ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಮೇ.13ಕ್ಕೆ ಬೆಂಗಳೂರು ಜನತೆಗೆ ಬಿಗ್‌ ಗಿಫ್ಟ್‌ ನೀಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ…

10 hours ago

ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್‌ ಒಡೆಯರ್‌ ಭೇಟಿ

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಒಂದಾಗಿರುವ ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದು ಭೇಟಿ ನೀಡಿ…

11 hours ago

ಪಂಚಭೂತಗಳಲ್ಲಿ ಲೀನರಾದ ಸಚಿವ ಡಿ.ಸುಧಾಕರ್‌

ಚಿತ್ರದುರ್ಗ: ಸಕಲ ಸರ್ಕಾರಿ ಗೌರವಗಳೊಂದಿಗೆ ಚಳ್ಳಕೆರೆಯ ಚಿತಾಗಾರದಲ್ಲಿ ಹಿರಿಯೂರು ಶಾಸಕ ಡಿ.ಸುಧಾಕರ್‌ ಅವರ ಅಂತ್ಯಕ್ರಿಯೆ ನೆರವೇರಿತು. ಬೆಳಿಗ್ಗೆಯಿಂದ ಸುಧಾಕರ್‌ ಅವರ…

11 hours ago

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ: ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಜಮೀನಿನಲ್ಲಿದ್ದ ರೈತನೋರ್ವನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ…

12 hours ago

ಎಂ.ಕೆ.ಸ್ಟಾಲಿನ್‌ ಭೇಟಿಯಾದ ತಮಿಳುನಾಡು ನೂತನ ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ನೂತನ ಸಿಎಂ ವಿಜಯ್‌ ಅವರಿಂದು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾದರು. ಸದ್ಯ ಇಂದಿನ ಸಭೆಯಲ್ಲಿ ಇಬ್ಬರು…

13 hours ago