Hotel owner assaults youth
ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ಬಿಬಿಸಿ ಕಾಲೋನಿಯ ಅಲೆಮಾರಿ ಯುವಕ ಗಣೇಶ ಎಂಬಾತನಿಗೆ ಇತ್ತೀಚೆಗೆ ಹೋಟೆಲ್ ಮಾಲೀಕ ಜಯಣ್ಣ ಮತ್ತು ಇತರರು ಹಲ್ಲೆ ಮಾಡಿರುವುದನ್ನು ತಾಲ್ಲೂಕು ದಸಂಸ ತೀವ್ರವಾಗಿ ಖಂಡಿಸಿದೆ.
ಹಲ್ಲೆಗೊಳಗಾದ ಅಲೆಮಾರಿ ಯುವಕ ಗಣೇಶ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬುಧವಾರ ದಸಂಸ ಮುಖಂಡರು ಈತನನ್ನು ಭೇಟಿ ನೀಡಿ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ನಲ್ಲೂರು ಪಾಲದಲ್ಲಿ ಕೇರಳ ಮೂಲದ ಹೋಟೆಲ್ ಮಾಲೀಕನಾದ ಜಯಣ್ಣ, ಅನೀಸ್ ಎಂಬವರು ಗಣೇಶನಿಗೆ ಕೊಳೆತ ಮೊಟ್ಟೆಯನ್ನು ಕೊಟ್ಟ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆತನ ತಲೆಗೆ ಕಬ್ಬಿಣದ ಕುರ್ಪಿಯಿಂದ ಹಲ್ಲೆ ಮಾಡಿದ ಪರಿಣಾಮ ತಲೆಗೆ ಗಾಯವಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಹೋಟೆಲ್ ಮಾಲೀಕ ಜಯಣ್ಣ ಮತ್ತು ಇತರರು ಗಣೇಶನ ವಿರುದ್ಧವೇ ಸುಳ್ಳು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು ಹೋಟೆಲ್ ಮಾಲೀಕರೇ ಹಲ್ಲೆ ಮಾಡಿ ಹಲ್ಲೆಗೊಳಗಾದ ಗಣೇಶನ ಮೇಲೆಯೇ ದೂರು ಕೊಟ್ಟಿರುವುದು ಇವರ ದುಷ್ಟತನವನ್ನು ತೋರಿಸುತ್ತದೆ ಎಂದರು.
ಹಲ್ಲೆಗೊಳಗಾದ ಯುವಕ ಅಲೆಮಾರಿ ಸಮುದಾಯದವನಾಗಿದ್ದು, ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವ ಸ್ಥಿತಿ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಿ ಗಣೇಶನ ಮೇಲೆ ಹಲ್ಲೆ ಮಾಡಿರುವ ಹೋಟೆಲ್ ಮಾಲೀಕರನ್ನು ಬಂಽಸಬೇಕು. ನೊಂದ ಅಲೆಮಾರಿ ಗಣೇಶನಿಗೆ ರಕ್ಷಣೆ ಮತ್ತು ನ್ಯಾಯ ಕೊಡಿಸಬೇಕು. ಗಣೇಶನ ಮೇಲೆ ಕೊಟ್ಟಿರುವ ಸುಳ್ಳು ಪ್ರಕರಣವನ್ನು ವಜಾಗೊಳಿಸಬೇಕು ಎಂದು ಪೊಲೀಸ್ ಅಧಿಕಾರಿಗಳನ್ನು ದಸಂಸ ಒತ್ತಾಯಿಸುತ್ತದೆ ಎಂದರು.
ಈ ವಿಷಯವನ್ನು ಹುಣಸೂರು ಶಾಸಕರಾದ ಜಿ.ಡಿ.ಹರೀಶ್ ಗೌಡ ಅವರಿಗೆ ತಿಳಿಸಿದಾಗ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಗಣೇಶನನ್ನು ಸಂತೈಸಿ ಚಿಕಿತ್ಸೆಗೆ ೧೦ ಸಾವಿರ ರೂ. ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದರು.
ದಸಂಸದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಿಬಿಸಿ ಅಲೆಮಾರಿ ಸಮಾಜದ ಮುಖಂಡರುಗಳಾದ ಅಣ್ಣಯ್ಯ, ರಮೇಶ, ಸಣ್ಣಸ್ವಾಮಿ, ರಾಮಕೃಷ್ಣ, ಶಿವಣ್ಣ, ವಿಷ್ಣು, ಕೃಷ್ಣ, ಗುಂಡ, ಅಣ್ಣಯ್ಯ ಬೋಡಿ ಮುಂತಾದವರು ಹಾಜರಿದ್ದರು.
ರಿಯಾಧ್: ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ರಾಸ್…
ಟಿ.ನರಸೀಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ…
ಮೈಸೂರು: ನಗರದ ಪ್ರಮುಖ ಎರಡು ಹೋಟೆಲ್ಗಳನ್ನು ಬಾಂಬ್ ಮೂಲಕ ಸ್ಛೋಟಿಸುವುದಾಗಿ ಇ-ಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದು, ಕೆಲಕಾಲ ಆತಂಕ…
ಹನೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವತಿಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.…
ಸರಗೂರು: ಮೈಸೂರು ಜಿಲ್ಲೆಯಲ್ಲಿ ಮತ್ತೆ ಹುಲಿ ಉಪಟಳ ಹೆಚ್ಚಾಗಿದ್ದು, ಹುಲಿ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಹೆಗ್ಗನೂರು…
ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಇರಾನ್ ಮಿಲಿಟರಿ ಪಡೆಗಳು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ…