ಮೈಸೂರು

ಗೃಹರಕ್ಷಕರು ತರಬೇತಿ ಪಡೆದ ನಂತರ ನಾಗರೀಕರ ಸಂಕಷ್ಟಗಳಿಗೆ ಸ್ಪಂದಿಸಬೇಕು : ಸಿ.ಶಿವರಾಜು

ಮೈಸೂರು : ಗೃಹರಕ್ಷಕದಳ ಸ್ವಯಂಸೇವಾ ಸಂಸ್ಥೆ ಯಾಗಿದ್ದು ಹೊಸದಾಗಿ ನೊಂದಾವಣೆಯಾಗಿರುವ ಗೃಹರಕ್ಷಕರು ತರಬೇತಿ ಪಡೆದ ನಂತರ ನಾಗರೀಕರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಅಪರ ಜಿಲ್ಲಾಧಿಕಾಕಾರಿ ಸಿ.ಶಿವರಾಜು ಸೂಚಿಸಿದರು.

ಜ್ಯೋತಿ ನಗರದ ಡಿಎಆರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗೃಹರಕ್ಷಕರ ಮೂಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಸರಿ ಸಮಾನರಾಗಿ ಸ್ವಯಂ ಸೇವಕ ಗೃಹರಕ್ಷಕರು ಎಲ್ಲೆಡೆ ಕೆಲಸ ಮಾಡುತ್ತಿದ್ದು.ಇತ್ತೀಚಿನ ದಿನಗಳಲ್ಲಿ ಪೊಲೀಸ್ ಕೊರತೆಯನ್ನು ನೀಗಿಸುತ್ತಿದೆ ಅಲ್ಲದೆ ರಾಜ್ಯದಲ್ಲಿನ ಎಲ್ಲ ಇಲಾಖೆಗಳಲ್ಲೂ ಗೃಹರಕ್ಷಕರಿಗೆ ಬೇಡಿಕೆ ಇದೆ ಎಂದರು.

ಹಲವು ಕಚೇರಿಗಳಲ್ಲಿ, ಜಾತ್ರೆ, ಸಂಚಾರ ನಿಯಂತ್ರಣ, ರೈಲ್ವೆ,  ಕಾನೂನು ಸುವ್ಯವಸ್ಥೆ ಕರ್ತವ್ಯಗಳಿಗೂ ನಿಯೋಜಿಸಲಾಗುತ್ತಿದೆ ಎಂದರು.

ತರಬೇತಿ ವೇಳೆಯಲ್ಲಿ ಕಲಿತತದ್ದನ್ನು ಸಬ್ದಳಕೆ ಮಾಡಿಕೊಂಡು ತೊಂದರೆಗೊಳಗಾದ ಸಾರ್ವಜನಿಕರಿಗೆ ನೆರವಾಗಬೇಕು.
ಜೊತೆಗೆ ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡುವುದು ಸಹ ಅವಶ್ಯವೆಂಬುದನ್ನರಿತು ಕೆಲಸಗಳ್ಲಿ ತೊಡಗಿಸಿಕೊಳ್ಳಿ ಎಂದು ಸಲಹ ನೀಡಿದರು.

ಜಿಲ್ಲಾ ಸಮಾದೇಷ್ಟರಾದ (ಕಮಾಂಡೆಂಟ್) ಡಾ. ಎಂ. ಕಾಂತರಾಜು ಮಾತನಾಡಿ ಇಲಾಖೆಯ ಉದ್ದೇಶ ಮತ್ತು ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿ. ಪ್ರಶಿಕ್ಷಣಾರ್ಥಿಗಳಿಗೆ 10 ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ.

ಇಲ್ಲಿ ಮೂಲ ತರಬೆತಿ ಪಡೆದುಕೊಂಡ ನಂತರ ಇಲಾಖೆ ನೀಡುವ ಸಮವಸ್ತ್ರ ಉಚಿತವಾಗಿ ವಿತರಿಸಲಾಗುತ್ತದೆ.ಇದರೊಟ್ಟಿಗೆ ಆದ್ಯತೆ ಮೇಲೆ ವಿವಿಧ ಇಲಾಖೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.

ಈವೇಳೆ ಇಲಾಖೆ ನಿಗದಿ ಪಡಿಸುವ ಭತ್ಯೆ ನೀಡಲಾಗುವುದು.ಅಲ್ಲದೆ ನಿಮ್ಮ ತಾಲೂಕುಗಳ್ಲಿ ನಡೆಯುವ ವಾರದ ಕವಾಯತುಗಳಿಗೆ ಹಾಜರಾಗುವುದು ಕಡ್ಡಾಯವಾಗಿದ್ದು.

ಕವಾಯತಿಗೆ ಹಾಜರಾಗುವ ವೇಳೆ ಪ್ರತಿ ಗೃಹರಕ್ಷಕರಿಗೆ ತಲಾ ೧೦೦ ರೂ ಅವರವರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಆದ್ಯತೆ ಮೇರೆಗೆ ಕರ್ತವ್ಗಳಿಗೆ ನಿಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಎಂ.ಎನ್ ವಿಶ್ವನಾಥ್ ,ಬೋಧಕರಾದ ಚಂದನ್, ಸಹಾಯಕ ಬೋಧಕ ಮಂಜುನಾಥ್, ಕ್ಯಾಂಪ್ ಕಮಾಂಡೆಂಟ್ ಸಂಪತ್ ಕುಮಾರ್, ಘಟಕಾಧಿಕಾರಿ ರೇವಣ್ಣ, ವಿದ್ಯಾ ಇದ್ದರು.

andolanait

Recent Posts

ತೊಗರಿ – ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ ; ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

ಹೊಸದಿಲ್ಲಿ : ಕರ್ನಾಟಕ ರಾಜ್ಯದಲ್ಲಿ‌ ಭಾರತದ ರಾಷ್ಟ್ರೀಯ ಕೃಷಿ‌ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ…

15 mins ago

ಹಾಡಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಿ: ಅರುಣ್ ಕುಮಾರ್

ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ…

51 mins ago

ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ…

2 hours ago

ಡೆವಿಲ್‌ ಸಿನಿಮಾ ಬ್ಲಾಕ್‌ ಬಸ್ಟರ್‌ ಆಗಲಿ: ನಟ ದರ್ಶನ್‌ಗೆ ರಿಷಬ್‌ ಶೆಟ್ಟಿ ವಿಶ್‌

ಬೆಂಗಳೂರು: ನಾಳೆ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಡಿ ಬಾಸ್‌ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.…

3 hours ago

ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ…

3 hours ago

ಕೇಂದ್ರ ಸರ್ಕಾರ, ಇಂಡಿಗೋ ವಿರುದ್ಧ ಹೈಕೋರ್ಟ್‌ ಆಕ್ರೋಶ

ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ನೂರಾರು ವಿಮಾನಗಳು ರದ್ದಾಗಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ…

4 hours ago