r ashok
ನಂಜನಗೂಡು : ನವೆಂಬರ್ ನಲ್ಲಿ ಆಡಳಿತದಲ್ಲಿ ಕ್ರಾಂತಿ ಎಂದು ತಾವು ಹೇಳಿದ್ದು ನಿಜವಾಗಿದೆ ಎಂದ ವಿರೊಧ ಪಕ್ಷದ ನಾಯಕ ಆರ್ ಆಶೋಕ ಕಾಂಗ್ರೇಸ್ ಹೈಕಮಾಂಡ್ ಮುಕ್ಯಮಂತ್ರಿ ಸಿದ್ದರಾಮಯ್ಯವರ ರಾಜಿನಾಮೆ ಸೂಚನೆ ನೀಡಿದೆ ಎಂದರು.
ನಂಜನಗೂಡು ತಾಲೂಕು ಸಮುಚ್ಛಯದ ಬಾಗಿಲಲ್ಲಿ ಛಲವಾದಿ ನಾರಾಯಣ ಸ್ವಾಮಿ ಅವರೊಂದಿಗೆ ಽಡೀರ್ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು, ನವೆಂಬರ್ ಕಾಂಗ್ರೆಸ್ ಕ್ರಾಂತಿ ನಿಜವಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಆಡಳಿತ ಸತ್ತು ಮಲಗಿದೆ ಮಹಿಳೆಯರನ್ನು ಬಸ್ ಹಚ್ಚಿಸಿ ಇಳಿಸುವದು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ ಎಂದರು. ಸತ್ತರಿವ ಆಡಳಿತ ನಡೆಸಲು ಸಿದ್ದರಾಮಯವರಾದರೂ ಒಂದೇ ಬೇರೆಯವರಾದರೂ ಒಂದೆ ಎಂದ ಅಶೋಕ ಜೀವವಿಲ್ಲದ ಆಡಳಿತ ನಡೆಸಲು ಯಾರಾದರೆನು ಎಂದು ಕಟುಕಿದರು.
ನಂಜನಗೂಡಿನ ೨೩ ಕರೆಗಳಿಗೆ ನೀರು ತುಂಬುವ ಯೋಜನೆಯೂ ಸೇರಿದಂತೆ ಎಲ್ಲ ಅಭಿವೃದ್ದಿ ಕಾರ್ಯಗಳು ಸ್ಥಗಿತವಾಗಿವೆ ಎಂದ ಅವರು ಘೋಷಣೆಯಾದ ಸಹಕಾರಿ ಸಂಘದ ಚುನಾವಣೆಯನ್ನು ಆಡಳಿತ ಪಕ್ಷ ವಿವಿಧ ಕಾರಣಗಳನೊಡ್ಡಿ ಮುಂದುಡುತ್ತಿದ್ದು ಮತ್ತೆ ಮುಂದೂಡಿದರೆ ತಾವು ನಂಜನಗೂಡಿಗೆ ಬಂದು ತಾಲೂಕು ಕಛೇರಿಗೆ ಬೀಗ ಜಡಿಯುವುದಾಗಿ ಅಶೋಕ ಎಚ್ಚರಿಕೆ ನೀಡಿದರು ಮಾಜಿ ಶಾಸಕ ಹರ್ಷವರ್ದನರ ಕೋರಿಕೆ ಮೇರೆಗೆ ಗುಂಡ್ಲುಪೇಟೆಯಿಂದ ಬರುತ್ತಿರುವಾಗ ಈ ಬೇಟಿ ಎಂದು ಅವರು ತಿಳಿಸಿದರು.
ಇದನ್ನೂ ಓದಿ:-ಮಹಿಳೆಯರಿಗೆ, ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ : ಸಚಿವೆ ಹೆಬ್ಬಾಳಕರ್
ಮಾಜಿ ಶಾಸಕ ಬಿ ಹರ್ಷವರ್ಧನ್ ಮಾತನಾಡಿ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಮುರಿದು ಬಿದ್ದಿದೆ ಅಭಿವೃದ್ದಿ ಕೆಲಸ ಸ್ಥಗಿತವಾಗಿದೆ ನಂಜನಗೂಡಿನ ಇತಿಹಾಸದಲ್ಲೇ ಕಂಡರಿಯದ ಹಾಡಾ ಹಗಲೇ ಮನೆ ಧರೋಡೆಗಳು ನಡೆಯುತ್ತಿವೆ ಎಂದರೆ ತಾಲೂಕಲ್ಲಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಹರ್ಷವರ್ದನ್ ಕಿಡಿಕಾರಿದರು.
ಘೋಷಿತವಾದ ಕ್ಷೇತ್ರದ ಸಹಕಾರಿ ಸಂಘಗಳ ಚುನಾವಣೆಯನ್ನು ಸೋಲಿನ ಭಯದಿಂದಲೇ ವಿವಿಧ ನೆಪಗಳನ್ನೊಡ್ಡಿ ಮುಂದೂಡಲಾಗಿದೆ ಎಂದ ಅವರು ತಾಲೂಕು ಆಡಳಿತ ಸತ್ತೇ ಹೋಗಿದೆ ಎಂದರು.
ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ತಾಲುಕು ಬಿ ಜೇಪಿ ಅದ್ಯಕ್ಷ ಕೆಂಡಗಣ್ಣಪ್ಪ ನಗರಾದ್ಯಕ್ಷ ಸಿಧ್ದರಾಜು, ಎನ್ ಆರ್ ಕೃಷ್ಣಪ್ಪ ಗೌಡ , ಸಿಂಧುವಳ್ಳಿ ಕೆಂಪಣ್ಣ, ಮಾಜಿ ಶಾಸಕ ನಾಗೇಂದ್ರ. ಮಾಜಿ ಮಹಾಪೌರ ಶೈಲೇಂದ್ರ . ಲಾ ಮಹೇಶ, ಶ್ರೀಕಂಠ , ವಿನಯ ಕುಮಾರ್ , ಮಹೇಶ ಬಾಬು , ಶ್ರೀನಿವಾಸ ರೆಡ್ಡಿ ಮತ್ತೀತರರಿದ್ದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…