r ashok
ನಂಜನಗೂಡು : ನವೆಂಬರ್ ನಲ್ಲಿ ಆಡಳಿತದಲ್ಲಿ ಕ್ರಾಂತಿ ಎಂದು ತಾವು ಹೇಳಿದ್ದು ನಿಜವಾಗಿದೆ ಎಂದ ವಿರೊಧ ಪಕ್ಷದ ನಾಯಕ ಆರ್ ಆಶೋಕ ಕಾಂಗ್ರೇಸ್ ಹೈಕಮಾಂಡ್ ಮುಕ್ಯಮಂತ್ರಿ ಸಿದ್ದರಾಮಯ್ಯವರ ರಾಜಿನಾಮೆ ಸೂಚನೆ ನೀಡಿದೆ ಎಂದರು.
ನಂಜನಗೂಡು ತಾಲೂಕು ಸಮುಚ್ಛಯದ ಬಾಗಿಲಲ್ಲಿ ಛಲವಾದಿ ನಾರಾಯಣ ಸ್ವಾಮಿ ಅವರೊಂದಿಗೆ ಽಡೀರ್ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು, ನವೆಂಬರ್ ಕಾಂಗ್ರೆಸ್ ಕ್ರಾಂತಿ ನಿಜವಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಆಡಳಿತ ಸತ್ತು ಮಲಗಿದೆ ಮಹಿಳೆಯರನ್ನು ಬಸ್ ಹಚ್ಚಿಸಿ ಇಳಿಸುವದು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ ಎಂದರು. ಸತ್ತರಿವ ಆಡಳಿತ ನಡೆಸಲು ಸಿದ್ದರಾಮಯವರಾದರೂ ಒಂದೇ ಬೇರೆಯವರಾದರೂ ಒಂದೆ ಎಂದ ಅಶೋಕ ಜೀವವಿಲ್ಲದ ಆಡಳಿತ ನಡೆಸಲು ಯಾರಾದರೆನು ಎಂದು ಕಟುಕಿದರು.
ನಂಜನಗೂಡಿನ ೨೩ ಕರೆಗಳಿಗೆ ನೀರು ತುಂಬುವ ಯೋಜನೆಯೂ ಸೇರಿದಂತೆ ಎಲ್ಲ ಅಭಿವೃದ್ದಿ ಕಾರ್ಯಗಳು ಸ್ಥಗಿತವಾಗಿವೆ ಎಂದ ಅವರು ಘೋಷಣೆಯಾದ ಸಹಕಾರಿ ಸಂಘದ ಚುನಾವಣೆಯನ್ನು ಆಡಳಿತ ಪಕ್ಷ ವಿವಿಧ ಕಾರಣಗಳನೊಡ್ಡಿ ಮುಂದುಡುತ್ತಿದ್ದು ಮತ್ತೆ ಮುಂದೂಡಿದರೆ ತಾವು ನಂಜನಗೂಡಿಗೆ ಬಂದು ತಾಲೂಕು ಕಛೇರಿಗೆ ಬೀಗ ಜಡಿಯುವುದಾಗಿ ಅಶೋಕ ಎಚ್ಚರಿಕೆ ನೀಡಿದರು ಮಾಜಿ ಶಾಸಕ ಹರ್ಷವರ್ದನರ ಕೋರಿಕೆ ಮೇರೆಗೆ ಗುಂಡ್ಲುಪೇಟೆಯಿಂದ ಬರುತ್ತಿರುವಾಗ ಈ ಬೇಟಿ ಎಂದು ಅವರು ತಿಳಿಸಿದರು.
ಇದನ್ನೂ ಓದಿ:-ಮಹಿಳೆಯರಿಗೆ, ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ : ಸಚಿವೆ ಹೆಬ್ಬಾಳಕರ್
ಮಾಜಿ ಶಾಸಕ ಬಿ ಹರ್ಷವರ್ಧನ್ ಮಾತನಾಡಿ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಮುರಿದು ಬಿದ್ದಿದೆ ಅಭಿವೃದ್ದಿ ಕೆಲಸ ಸ್ಥಗಿತವಾಗಿದೆ ನಂಜನಗೂಡಿನ ಇತಿಹಾಸದಲ್ಲೇ ಕಂಡರಿಯದ ಹಾಡಾ ಹಗಲೇ ಮನೆ ಧರೋಡೆಗಳು ನಡೆಯುತ್ತಿವೆ ಎಂದರೆ ತಾಲೂಕಲ್ಲಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಹರ್ಷವರ್ದನ್ ಕಿಡಿಕಾರಿದರು.
ಘೋಷಿತವಾದ ಕ್ಷೇತ್ರದ ಸಹಕಾರಿ ಸಂಘಗಳ ಚುನಾವಣೆಯನ್ನು ಸೋಲಿನ ಭಯದಿಂದಲೇ ವಿವಿಧ ನೆಪಗಳನ್ನೊಡ್ಡಿ ಮುಂದೂಡಲಾಗಿದೆ ಎಂದ ಅವರು ತಾಲೂಕು ಆಡಳಿತ ಸತ್ತೇ ಹೋಗಿದೆ ಎಂದರು.
ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ತಾಲುಕು ಬಿ ಜೇಪಿ ಅದ್ಯಕ್ಷ ಕೆಂಡಗಣ್ಣಪ್ಪ ನಗರಾದ್ಯಕ್ಷ ಸಿಧ್ದರಾಜು, ಎನ್ ಆರ್ ಕೃಷ್ಣಪ್ಪ ಗೌಡ , ಸಿಂಧುವಳ್ಳಿ ಕೆಂಪಣ್ಣ, ಮಾಜಿ ಶಾಸಕ ನಾಗೇಂದ್ರ. ಮಾಜಿ ಮಹಾಪೌರ ಶೈಲೇಂದ್ರ . ಲಾ ಮಹೇಶ, ಶ್ರೀಕಂಠ , ವಿನಯ ಕುಮಾರ್ , ಮಹೇಶ ಬಾಬು , ಶ್ರೀನಿವಾಸ ರೆಡ್ಡಿ ಮತ್ತೀತರರಿದ್ದರು.
ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…
ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…
ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇವಲ ಎರಡನೇ ಮಾತಿನಲ್ಲಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್ಚಿಟ್ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…
ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಜನವರಿ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ನರೇಗಾ ಯೋಜನೆ ಹೆಸರು ಬದಲಾವಣೆ ಆಕ್ಷೇಪಿಸಿ ಕರೆದಿರುವ…