ಮೈಸೂರು

ಎಚ್.ಡಿ.ಕೋಟೆ: ಪುನರ್ವಸತಿ ಜಮೀನಿಗಾಗಿ ದಲಿತ ಕುಟುಂಬಗಳಿಂದ ನಿರಂತರ ಪ್ರತಿಭಟನೆ

ಮಂಜು ಕೋಟೆ 

ಎಚ್.ಡಿ.ಕೋಟೆ: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಪುನರ್ವಸತಿಯ ಜಮೀನಿಗಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೆಂಚನಹಳ್ಳಿ ಪುನರ್ವಸತಿಯ ೨೦೦ ದಲಿತ ಕುಟುಂಬಗಳಿಗೆ ೩೫೦ ಎಕರೆ ಜಮೀನು ಮತ್ತು ಹಕ್ಕುಪತ್ರವನ್ನು ನ.೧೫ರೊಳಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ನೀಡುತ್ತೇವೆ ಎಂದು ಸಭೆ ನಡೆಸಿದ್ದರು. ಆದರೆ ಇದುವರೆಗೂ ಹಕ್ಕು ಪತ್ರ ನೀಡದ ಅಧಿಕಾರಿಗಳ ವಿರುದ್ಧ ಗ್ರಾಮದ ದಲಿತ ಕುಟುಂಬದವರು ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೆಂಚನಹಳ್ಳಿಯ ಸರ್ವೆ ನಂಬರ್ ೧ರ ಬಳಿ ಹಗಲು -ಇರುಳೆನ್ನದೆ ದಲಿತ ಕುಟುಂಬದವರು, ಮುಖಂಡರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಇತ್ತ ಸುಳಿವು ನೀಡದೆ, ನೀಡಿದ ಭರವಸೆಯನ್ನೂ ಬಗೆಹರಿಸದಿರುವುದರಿಂದ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಮಗ್ಗೆಮಳಲಿ ಗ್ರಾಮದ ಸುಮಾರು ೪೦೦ ಕುಟುಂಬಗಳನ್ನು ೧೯೬೯ರಲ್ಲಿ ಕಬಿನಿ ಡ್ಯಾಂ ಕಟ್ಟುವಾಗ ಹಿನ್ನೀರಿಗೆ ಮುಳುಗಡೆ ಆಗಿದ್ದವರನ್ನು ರಾತ್ರೋರಾತ್ರಿ ಟಿಪ್ಪರ್‌ನಲ್ಲಿ ತುಂಬಿಕೊಂಡು ಕೆಂಚನಹಳ್ಳಿ ಭಾಗಕ್ಕೆ ತಂದು ಬಿಟ್ಟರು. ಇಂದಿಗೂ ಅನೇಕರಿಗೆ ಭೂಮಿ ಮತ್ತು ಪುನರ್ವಸತಿ ಕಲ್ಪಿಸದೆ ನಿರ್ಗತಿಕರನ್ನಾಗಿ ಮಾಡಿದ ಸರ್ಕಾರದ ನಡೆ ಇಂದಿಗೂ ಜನವಿರೋಧಿಯಾಗಿದೆ.

ಇದನ್ನು ಓದಿ: ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ: ಮಾಜಿ ಸಂಸದೆ ರಮ್ಯಾ ಹೇಳಿದ್ದಿಷ್ಟು.!

1969-70ರಲ್ಲಿ ಮನೆ ನಿವೇಶನ, ಭೂಮಿ ಮತ್ತು ಬದುಕನ್ನು ಕಳೆದುಕೊಂಡ ದಲಿತ, ನಿರಾಶ್ರಿತ ಕುಟುಂಬಗಳಿಗೆ ಅಂದಿನ ಸರ್ಕಾರ ಆದೇಶ ಮಾಡಿ ಪ್ರತಿ ಕುಟುಂಬಕ್ಕೂ ಸಮಗ್ರ ಪುನರ್ವಸತಿ ಕಲ್ಪಿಸುವ ಸಲುವಾಗಿ ಕೆಂಚನಹಳ್ಳಿ ಗ್ರಾಮದ ಸರ್ವೇ ನಂ.೧ರ ೯೬೧ ಎಕರೆ ಸಾಮಾಜಿಕ ಅರಣ್ಯವನ್ನು, ಕಂದಾಯ ಭೂಮಿಯನ್ನು ಪರಿವರ್ತಿಸಿ ಇದರಲ್ಲಿ ೮೦ ಎಕರೆ ಭೂಮಿಯನ್ನು ನಿವೇಶನಕ್ಕೆ ಹಂಚಿಕೆ ಮಾಡಿ ಉಳಿದ ಭೂಮಿಯನ್ನು ಕುಟುಂಬಕ್ಕೆ ತಲಾ ೨-೩ ಎಕರೆ ಭೂಮಿ ವ್ಯವಸಾಯಕ್ಕೆ ಹಂಚಬೇಕು ಎಂದು ಆದೇಶ ಮಾಡಿತ್ತು. ಆದರೆ ಅಂದಿನ ಅಧಿಕಾರಿ ವರ್ಗ ಇವರ ಪುನರ್ವಸತಿ ಬಗ್ಗೆ ಮುತುವರ್ಜಿ ವಹಿಸದೆ ಜನರನ್ನು ಎತ್ತುವಳಿ ಮಾಡಿದ್ದನ್ನು ಬಿಟ್ಟರೆ ಬೇರ‍್ಯಾವ ಕೆಲಸವನ್ನು ಮಾಡದ ಕಾರಣ ಕೂಲಿಯನ್ನೇ ಆಶ್ರಯಿಸಿ ಬದುಕುತ್ತಿದ್ದ ಈ ಜನರು, ಕೂಲಿಗಾಗಿ ಕೆಂಚನಹಳ್ಳಿ ಗ್ರಾಮವನ್ನು ಬಿಟ್ಟು ೧೯೭೫-೭೬ರಲ್ಲಿ ವಲಸೆ ಹೋದರು. ೧೯೯೫-೯೬ರಲ್ಲಿ ಮತ್ತೆ ವಾಪಸ್ ಬಂದು ಸರ್ಕಾರ ಕೊಟ್ಟ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದಾಗ ಅರಣ್ಯ ಇಲಾಖೆಯವರು ಈ ನಿರಾಶ್ರಿತರನ್ನು ತಡೆದು ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಡೆಹಿಡಿದರು.

ಇದು ನಮ್ಮ ಭೂಮಿ, ಸರ್ಕಾರ ನಮಗೆ ನೀಡಿರುವುದು ಎಂದು ಪ್ರತಿಭಟನೆಗೆ ಇಳಿದಾಗ ಅರಣ್ಯ ಇಲಾಖೆ ಮತ್ತು ಪೊಲೀಸರು ಏಕಾಏಕಿ ಸುಮಾರು ೧೫೦ ಜನರ ಮೇಲೆ ಪ್ರಕರಣ ದಾಖಲು ಮಾಡಿ ೪೫ ದಿನಗಳ ಕಾಲ ಜೈಲುವಾಸ ಮಾಡಿಸಿದರು.

ಈ ವಿಚಾರವಾಗಿ ನಾವು ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಅಂದಿನಿಂದ ಇಲ್ಲಿಯ ತನಕವೂ ಅಧಿಕಾರಕ್ಕೆ ಬರುವ ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು, ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕ ಮಾಡಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ಬರುತ್ತಿದ್ದೇವೆ. ಆದರೂ ನಮಗೆ ಭೂಮಿ ಸಿಗದೇ ಜೀವನ ನಡೆಸಲು ಕಷ್ಟಕರವಾಗಿದೆ.

ಈ ಹೋರಾಟವನ್ನು ತಾರ್ಕಿಕ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಇಡೀ ಗ್ರಾಮವೇ ತಿರ್ಮಾನಿಸಿ ನಮಗಾಗಿ ಕಾಯ್ದಿರಿಸಿದ ಸರ್ವೇ ನಂ .೧ ರಲ್ಲಿಯೇ ಅನಿರ್ದಿಷ್ಟಾವಧಿ ಧರಣಿ, ಪ್ರತಿಭಟನೆ ನಡೆಸುತ್ತಿದೆ.

ಆಂದೋಲನ ಡೆಸ್ಕ್

Recent Posts

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

24 mins ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

50 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

53 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

1 hour ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

1 hour ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

4 hours ago