ಮೈಸೂರು

ಎಚ್.ಡಿ.ಕೋಟೆ: ಪುನರ್ವಸತಿ ಜಮೀನಿಗಾಗಿ ದಲಿತ ಕುಟುಂಬಗಳಿಂದ ನಿರಂತರ ಪ್ರತಿಭಟನೆ

ಮಂಜು ಕೋಟೆ 

ಎಚ್.ಡಿ.ಕೋಟೆ: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಪುನರ್ವಸತಿಯ ಜಮೀನಿಗಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೆಂಚನಹಳ್ಳಿ ಪುನರ್ವಸತಿಯ ೨೦೦ ದಲಿತ ಕುಟುಂಬಗಳಿಗೆ ೩೫೦ ಎಕರೆ ಜಮೀನು ಮತ್ತು ಹಕ್ಕುಪತ್ರವನ್ನು ನ.೧೫ರೊಳಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ನೀಡುತ್ತೇವೆ ಎಂದು ಸಭೆ ನಡೆಸಿದ್ದರು. ಆದರೆ ಇದುವರೆಗೂ ಹಕ್ಕು ಪತ್ರ ನೀಡದ ಅಧಿಕಾರಿಗಳ ವಿರುದ್ಧ ಗ್ರಾಮದ ದಲಿತ ಕುಟುಂಬದವರು ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೆಂಚನಹಳ್ಳಿಯ ಸರ್ವೆ ನಂಬರ್ ೧ರ ಬಳಿ ಹಗಲು -ಇರುಳೆನ್ನದೆ ದಲಿತ ಕುಟುಂಬದವರು, ಮುಖಂಡರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಇತ್ತ ಸುಳಿವು ನೀಡದೆ, ನೀಡಿದ ಭರವಸೆಯನ್ನೂ ಬಗೆಹರಿಸದಿರುವುದರಿಂದ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಮಗ್ಗೆಮಳಲಿ ಗ್ರಾಮದ ಸುಮಾರು ೪೦೦ ಕುಟುಂಬಗಳನ್ನು ೧೯೬೯ರಲ್ಲಿ ಕಬಿನಿ ಡ್ಯಾಂ ಕಟ್ಟುವಾಗ ಹಿನ್ನೀರಿಗೆ ಮುಳುಗಡೆ ಆಗಿದ್ದವರನ್ನು ರಾತ್ರೋರಾತ್ರಿ ಟಿಪ್ಪರ್‌ನಲ್ಲಿ ತುಂಬಿಕೊಂಡು ಕೆಂಚನಹಳ್ಳಿ ಭಾಗಕ್ಕೆ ತಂದು ಬಿಟ್ಟರು. ಇಂದಿಗೂ ಅನೇಕರಿಗೆ ಭೂಮಿ ಮತ್ತು ಪುನರ್ವಸತಿ ಕಲ್ಪಿಸದೆ ನಿರ್ಗತಿಕರನ್ನಾಗಿ ಮಾಡಿದ ಸರ್ಕಾರದ ನಡೆ ಇಂದಿಗೂ ಜನವಿರೋಧಿಯಾಗಿದೆ.

ಇದನ್ನು ಓದಿ: ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ: ಮಾಜಿ ಸಂಸದೆ ರಮ್ಯಾ ಹೇಳಿದ್ದಿಷ್ಟು.!

1969-70ರಲ್ಲಿ ಮನೆ ನಿವೇಶನ, ಭೂಮಿ ಮತ್ತು ಬದುಕನ್ನು ಕಳೆದುಕೊಂಡ ದಲಿತ, ನಿರಾಶ್ರಿತ ಕುಟುಂಬಗಳಿಗೆ ಅಂದಿನ ಸರ್ಕಾರ ಆದೇಶ ಮಾಡಿ ಪ್ರತಿ ಕುಟುಂಬಕ್ಕೂ ಸಮಗ್ರ ಪುನರ್ವಸತಿ ಕಲ್ಪಿಸುವ ಸಲುವಾಗಿ ಕೆಂಚನಹಳ್ಳಿ ಗ್ರಾಮದ ಸರ್ವೇ ನಂ.೧ರ ೯೬೧ ಎಕರೆ ಸಾಮಾಜಿಕ ಅರಣ್ಯವನ್ನು, ಕಂದಾಯ ಭೂಮಿಯನ್ನು ಪರಿವರ್ತಿಸಿ ಇದರಲ್ಲಿ ೮೦ ಎಕರೆ ಭೂಮಿಯನ್ನು ನಿವೇಶನಕ್ಕೆ ಹಂಚಿಕೆ ಮಾಡಿ ಉಳಿದ ಭೂಮಿಯನ್ನು ಕುಟುಂಬಕ್ಕೆ ತಲಾ ೨-೩ ಎಕರೆ ಭೂಮಿ ವ್ಯವಸಾಯಕ್ಕೆ ಹಂಚಬೇಕು ಎಂದು ಆದೇಶ ಮಾಡಿತ್ತು. ಆದರೆ ಅಂದಿನ ಅಧಿಕಾರಿ ವರ್ಗ ಇವರ ಪುನರ್ವಸತಿ ಬಗ್ಗೆ ಮುತುವರ್ಜಿ ವಹಿಸದೆ ಜನರನ್ನು ಎತ್ತುವಳಿ ಮಾಡಿದ್ದನ್ನು ಬಿಟ್ಟರೆ ಬೇರ‍್ಯಾವ ಕೆಲಸವನ್ನು ಮಾಡದ ಕಾರಣ ಕೂಲಿಯನ್ನೇ ಆಶ್ರಯಿಸಿ ಬದುಕುತ್ತಿದ್ದ ಈ ಜನರು, ಕೂಲಿಗಾಗಿ ಕೆಂಚನಹಳ್ಳಿ ಗ್ರಾಮವನ್ನು ಬಿಟ್ಟು ೧೯೭೫-೭೬ರಲ್ಲಿ ವಲಸೆ ಹೋದರು. ೧೯೯೫-೯೬ರಲ್ಲಿ ಮತ್ತೆ ವಾಪಸ್ ಬಂದು ಸರ್ಕಾರ ಕೊಟ್ಟ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದಾಗ ಅರಣ್ಯ ಇಲಾಖೆಯವರು ಈ ನಿರಾಶ್ರಿತರನ್ನು ತಡೆದು ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಡೆಹಿಡಿದರು.

ಇದು ನಮ್ಮ ಭೂಮಿ, ಸರ್ಕಾರ ನಮಗೆ ನೀಡಿರುವುದು ಎಂದು ಪ್ರತಿಭಟನೆಗೆ ಇಳಿದಾಗ ಅರಣ್ಯ ಇಲಾಖೆ ಮತ್ತು ಪೊಲೀಸರು ಏಕಾಏಕಿ ಸುಮಾರು ೧೫೦ ಜನರ ಮೇಲೆ ಪ್ರಕರಣ ದಾಖಲು ಮಾಡಿ ೪೫ ದಿನಗಳ ಕಾಲ ಜೈಲುವಾಸ ಮಾಡಿಸಿದರು.

ಈ ವಿಚಾರವಾಗಿ ನಾವು ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಅಂದಿನಿಂದ ಇಲ್ಲಿಯ ತನಕವೂ ಅಧಿಕಾರಕ್ಕೆ ಬರುವ ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು, ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕ ಮಾಡಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ಬರುತ್ತಿದ್ದೇವೆ. ಆದರೂ ನಮಗೆ ಭೂಮಿ ಸಿಗದೇ ಜೀವನ ನಡೆಸಲು ಕಷ್ಟಕರವಾಗಿದೆ.

ಈ ಹೋರಾಟವನ್ನು ತಾರ್ಕಿಕ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಇಡೀ ಗ್ರಾಮವೇ ತಿರ್ಮಾನಿಸಿ ನಮಗಾಗಿ ಕಾಯ್ದಿರಿಸಿದ ಸರ್ವೇ ನಂ .೧ ರಲ್ಲಿಯೇ ಅನಿರ್ದಿಷ್ಟಾವಧಿ ಧರಣಿ, ಪ್ರತಿಭಟನೆ ನಡೆಸುತ್ತಿದೆ.

ಆಂದೋಲನ ಡೆಸ್ಕ್

Recent Posts

ಚಾ.ನಗರ | ಚಿನ್ನಾಭರಣಕ್ಕಾಗಿ ಮದುವೆ ಮನೆಯಲ್ಲಿ ಮಾರಮಾರಿ ; ಚಾಕು ಇರಿತ

ಚಾಮರಾಜನಗರ : ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು…

37 mins ago

ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖ

ಬಿಸಿಲ ಝಳದಿಂದ ಕುಸಿಯುತ್ತಿರುವ ಅಂತರ್ಜಲ ಮಟ್ಟ ; ಮೇ ತಿಂಗಳಲ್ಲಿ ನೀರಿನ ಕೊರತೆ ಸಾಧ್ಯತೆ • ಕೆ.ಬಿ.ಶಂಶುದ್ದೀನ್ ಕುಶಾಲನಗರ :…

3 hours ago

ಅನಾಥ ಶವಗಳಿಗೆ ಗೌರವದ ವಿದಾಯ ಹೇಳುವ ಶರೀಫ್‌ ಚಾಚಾ

1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಉರುಳಿಸಲ್ಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಕೋಮು ಗಲಭೆಗಳಲ್ಲಿ 2,000ಕ್ಕೂ ಜನ ಸಾವಿಗೀಡಾದರು. ಅಯೋಧ್ಯೆಯಿಂದ 65ಕಿ.…

3 hours ago

ಪೊಲಿಟಿಕಲ್‌ ಪ್ರೊಫೆಸರ್‌ ಇಲ್ಲದ 2 ವರ್ಷ

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಂಡೇಳುವುದು ವಿ.ಶ್ರೀನಿವಾಸ ಪ್ರಸಾದ್‌ ಅವರ ಜಾಯಮಾನ ಸಿ.ಹರಕುಮಾರ್ ಸ್ವಾಭಿಮಾನದ ರಾಜಕಾರಣಕ್ಕೆ ಪರ್ಯಾಯವೆಂಬಂತಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ನಮ್ಮನ್ನಗಲಿ…

7 hours ago

ಆಂದೋಲನ ವಿಶೇಷ | ವಿಪಕ್ಷ ಮುಕ್ತ ಭಾರತ ; ಬಿಜೆಪಿ ಕನಸು?

ಐಟಿ, ಇಡಿ ಬಳಸಿಕೊಂಡು ಬೆದರಿಸುವ ತಂತ್ರ. ಬಿಜೆಪಿ ಸೇರ್ಪಡೆಯಾದ ನಂತರ ಎಲ್ಲ ಆರೋಪಿಗಳಿಂದ ಮುಕ್ತಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ…

7 hours ago

ಪ.ಬಂಗಾಳ ವಿಧಾನಸಭೆ ಚುನಾವಣೆ : 142 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಆರಂಭ

ಕೋಲ್ಕತ್ತ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಬುಧವಾರ(ಏ.29) ಬೆಳಿಗ್ಗೆ 7 ಗಂಟೆಗೆ…

8 hours ago