ಮೈಸೂರು

ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲು ಪ್ರಯತ್ನ : ಶಾಸಕ ಜಿ.ಟಿ.ದೇವೆಗೌಡ

ಮೈಸೂರು : ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಂತಹಂತವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರಪಾಲಿಕೆಯಷ್ಟೇ ಸ್ಥಳೀಯ ಸಂಸ್ಥೆಗಳು ಕೆಲಸ ಮಾಡುವ ಜತೆಗೆ,ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಹೂಟಗಳ್ಳಿ ಎಚ್.ಕೆ.ಫಂಕ್ಷನ್‌ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹೂಟಗಳ್ಳಿ ನಗರಸಭೆ ವತಿಯಿಂದ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ಬೀದಿನಾಯಿಗಳ ಹಾವಳಿ, ಒಳಚರಂಡಿ ನಿರ್ವಹಣೆ ಮತ್ತು ಬೀದಿ ದೀಪಗಳ ನಿರ್ವಹಣೆ ಕುರಿತಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ರಾಜ್ಯದಲ್ಲೇ ೧೮ ಗ್ರಾಮ ಪಂಚಾಯಿತಿ,ನಗರಪಾಲಿಕೆ ಐದು ವಾರ್ಡುಗಳು, ನಾಲ್ಕು ಪಟ್ಟಣ ಪಂಚಾಯಿತಿ,ಒಂದು ನಗರಸಭೆಯನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ನಾಲ್ಕು ದಿಕ್ಕುಗಳನ್ನು ಸಂಪರ್ಕ ಕಲ್ಪಿಸುವ ಪ್ರದೇಶವಾಗಿರುವ ಕಾರಣ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದರು. ಮೈಸೂರು ನಗರದ ರಿಂಗ್ ರಸ್ತೆಯ ಅಕ್ಕಪಕ್ಕದ ಗ್ರಾಪಂಗಳು, ಬಡಾವಣೆಗಳು, ವಿಜಯನಗರ ಮೂರನೇ ಹಂತ,ನಾಲ್ಕನೇ ಹಂತವನ್ನು ಮೈಸೂರು ನಗರಪಾಲಿಕೆಗೆ ಸೇರಿಸಲು ಯುದ್ಧ ಮಾಡಿದಂತೆ ಹೋರಾಟ ಮಾಡಿದ್ದೆ. ನಗರಪಾಲಿಕೆಗೆ ಸೇರ್ಪಡೆಗೊಳಿಸಲು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲು ಪ್ರಸ್ತಾವನೆ ಇಟ್ಟಾಗ ಬಿಜೆಪಿ,ಜಾ.ದಳ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಐದು ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರೆ ಮಾತ್ರ ಸೇರ್ಪಡೆ ಮಾಡಿಸಿಕೊಳ್ಳುತ್ತೇವೆಂದು ನಿರ್ಣಯ ಕೈಗೊಂಡರು.

ಇದನ್ನು ಓದಿ:MLA ನಾಮ ನಿರ್ದೇಶನಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ ರಾಜ್ಯಪಾಲರು

ಇದರಿಂದಾಗಿ ಅಪಮಾನವಾಗಿ ವಾಪಸ್ ಬಂದು ಬಿಟ್ಟೆ. ನಂತರ, ಅಂದಿನ ಸಂಸದ ಪ್ರತಾಪ್ ಸಿಂಹ ಅವರನ್ನು ಕೂರಿಸಿಕೊಂಡು ಸಮಾಲೋಚನೆಮಾಡಿದಾಗ ಗ್ರಾಪಂಗಳನ್ನು ಪಾಲಿಕೆ ಸೇರಿಸಿಕೊಳ್ಳಲ್ಲ. ಬಡಾವಣೆಗಳಲ್ಲಿ ಸ್ವಚ್ಛಮಾಡಲ್ಲ. ಖಾತೆ ಕಂದಾಯ ಮಾಡಲ್ಲ. ಮುಡಾದ ಬಡಾವಣೆಗಳಲ್ಲೂ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿ ನಾಲ್ಕು ಪಟ್ಟಣ ಪಂಚಾಯಿತಿ,ಒಂದು ನಗರಸಭೆಯನ್ನು ರಚಿಸಲಾಯಿತು ಎಂದು ಹೇಳಿದರು. ಮುಡಾದಿಂದ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಕೊಡಲಾಗುತ್ತಿತ್ತು.ಆದರೆ,ಸರ್ಕಾರ ನಿಧಿ-೧, ನಿಧಿ-೨ ಎನ್ನುವಂತೆ ವಿಂಗಡಿಸಿದರು. ನಿಧಿ ಒಂದರಲ್ಲಿ ಹತ್ತಾರು ವರ್ಷಗಳ ಹಿಂದೆ ರಚನೆಯಾಗಿರುವ ಬಡಾವಣೆಗಳಿಗೆ ನಿರ್ವಹಣೆ ಮಾಡಬಹುದು ಹೊರತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಳಸುವಂತಿಲ್ಲ. ನಿಧಿ-೨ರಲ್ಲಿ ಖಾಸಗಿ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಕೆ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿದ್ದರಿಂದ ತುಂಬಾ ಸಮಸ್ಯೆಯಾಯಿತು. ಹೀಗಾಗಿಯೇ, ಗ್ರಾಪಂಗಳನ್ನು ಮೇಲ್ದರ್ಜೇಗೇರಿಸಲು ಹಗಲು-ರಾತ್ರಿ ವಿಧಾನಸೌಧದಲ್ಲಿ ಅಲೆದಾಡಿ ಅನುಮೋದನೆ ಕೊಡಿಸಿದ್ದರಿಂದಾಗಿ ಇಂದು ಅನುಕೂಲವಾಯಿತು ಎಂದು ಹೇಳಿದರು.

ಖಾಸಗಿ ಬಡಾವಣೆಗಳನ್ನು ರಚನೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದ ಮಾಲೀಕರು ರಸ್ತೆ,ನೀರು,ಚರಂಡಿಯನ್ನೇ ಮಾಡದೆ ಹಾಗೆಯೇ ಬಿಟ್ಟು ಹೋದರು. ನಿವೇಶನಗಳನ್ನು ಖರೀದಿಸಿದವರು ಮನೆ ಕಟ್ಟಿಸಿಕೊಂಡು ವಾಸ ಮಾಡುತ್ತಿದ್ದರಿಂದ ಮೂಲ ಸೌಕರ್ಯ ಇಲ್ಲವೆಂದು ಬರಲು ಶುರು ಮಾಡಿದ್ದರಿಂದ ದೊಡ್ಡ ಸಮಸ್ಯೆಯಾಯಿತು. ಕಷ್ಟಪಟ್ಟು ಮನೆ ಕಟ್ಟಿದರೂ ನೆಮ್ಮದಿಯಾಗಿ ವಾಸಿಸಲು ಸಾಧ್ಯವಾಗದ ಸ್ಥಿತಿಯಾಯಿತು. ಹಾಗಾಗಿಯೇ, ಪಟ್ಟಣ ಪಂಚಾಯಿತಿ,ನಗರಸಭೆಮಾಡಿಸಿ ಈಗ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯವಾಗಿದೆ ಎಂದು ಹೇಳಿದರು.

ಕೈಗಾರಿಕಾ ಪ್ರದೇಶಗಳಿಂದ ೨೫ರಿಂದ ೩೦ ಕೋಟಿ ರೂಪಾಯಿ ಬರುತ್ತಿದ್ದರು.ಈಗ ಕರ್ನಾಟಕ ಕೈಗಾರಿಕಾ ಪ್ರಾಧಿಕಾರ ರಚನೆ ಮಾಡಿದ ಮೇಲೆ ಬರುವ ತೆರಿಗೆ ನಿಂತು ಹೋಗಿದೆ. ಇದರಿಂದಾಗಿ ಅನೇಕ ಕಾಮಗಾರಿಗಳು ನಿಂತುಹೋಗಿವೆ. ಗ್ರಾಪಂಗಳು ಕಟ್ಟದೆ ಹೋಗಿರುವ ವಿದ್ಯುತ್ ಬಿಲ್‌ನ್ನು ಎಂಡಿಎದಿಂದ ಕಟ್ಟಿಸಿಕೊಡಲು ತೀರ್ಮಾನ ಮಾಡಿದ್ದೇನೆ ಎಂದು ಭರವಸೆ ನೀಡಿದರು.

ಇದನ್ನು ಓದಿ: ಭಾರತದ ಕ್ವಾಂಟಮ್‌ ಭವಿಷ್ಯದ ಕೇಂದ್ರವಾಗಲು ಬೆಂಗಳೂರಿಗೆ ಮಹತ್ವದ ಹೆಜ್ಜೆ

ಖಾಸಗಿ ಬಡಾವಣೆಗಳನ್ನು ಈಗ ಎಂಡಿಎಗೆ ವರ್ಗಾವಣೆ ಮಾಡಿ ಖಾತೆ ಮಾಡುವಜೊತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚುನಿವೇಶನಗಳನ್ನು ವರ್ಗಾವಣೆ ಮಾಡಿರುವುದರಿಂದ ಕಂದಾಯ ಕಟ್ಟಿಸಿಕೊಂಡು ಖಾತೆ ಮಾಡಲಾಗುತ್ತಿದೆ. ನಿವೇಶನ,ಮನೆ ಮಾಲೀಕರು ಯಾರಿಗೂ ಒಂದು ಪೈಸೆ ಕಟ್ಟದೆ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.೨೦೦೭ರಲ್ಲಿ ಜೆನರ್ಮ್ ಯೋಜನೆಯಡಿ ೬೦ ಎಂಎಲ್‌ಡಿ ನೀರನ್ನು ತರಲಾಯಿತು. ಕಬಿನಿ ಎರಡನೇ ಹಂತ,ಉಂಡುವಾಡಿ ಯೋಜನೆಯಿಂದ ದಿನದ ೨೪ಗಂಟೆಗಳ ಕಾಲ ನೀರು ಒದಗಿಸುವುದಕ್ಕೆ ಕೆಲಸ ಶುರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾದ ನೀರು ಒದಗಿಸಲಾಗುವುದು. ಸರ್ಕಾರದಿಂದ ಅನುದಾನ ತಂದು ರಸ್ತೆ,ಚರಂಡಿ ಎಲ್ಲವನ್ನು ಒದಗಿಸುತ್ತೇನೆ ಎಂದರು.ರಿಂಗ್ ರಸ್ತೆಯ ಬದಿಯಲ್ಲಿ ಕಸ ಹಾಕಿದರೆ, ಕೋಳಿ ತ್ಯಾಜ್ಯಗಳನ್ನು ಎಸೆಯುವವರು ಕಂಡುಬಂದರೆ ಅಂತಹವರ ಮೇಲೆ ಮೊಕದ್ದಮೆ ಹಕುವ ಜತೆಗೆ, ದಂಡ ವಿಧಿಸಬೇಕು. ವಾಹನಗಳನ್ನು ಸೀಜ್ ಮಾಡುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಇದಾದ ಬಳಿಕ ವಿಜಯನಗರ ನಾಲ್ಕನೇಹಂತಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಟ್ಯಾಂಕ್ ಪರಿಶೀಲನೆ ನಡೆಸಿದರು. ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಧನುಷ್, ನಗರಸಭೆ ಎಇಇಗಳಾದ ಮಧು, ಗಿರಿಜಾ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಇಡಿಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್‌ ನೀಡಿದೆ. ಆ ಮೂಲಕ ನಮಗೆ…

18 mins ago

ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ: ಸಚಿವ ಕೆ.ಜೆ.ಜಾರ್ಜ್‌

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಯಾದ…

22 mins ago

2 ಗುಂಪುಗಳ ಮಧ್ಯೆ ಮಾರಾಮಾರಿ: ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ

ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್‌ ಕಾರ್ಯಕರ್ತ ಮೃತಪಟ್ಟ ಘಟನೆ ಕಡೂರು ತಾಲ್ಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ವರ…

26 mins ago

ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಮನುವಾದಿ ಆಗಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…

35 mins ago

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…

1 hour ago

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್‌…

2 hours ago