ಮಹಾನಗರ ಪಾಲಿಕೆ ವಲಯ ಕಚೇರಿ-1 ಮತ್ತು 2ರಲ್ಲಿ ಇ-ಖಾತೆ ಹಂಚಿಕೆ
ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾನಗರ ಪಾಲಿಕೆ ಕಚೇರಿ-1 ಮತ್ತು 2ರಲ್ಲಿ ಶಾಸಕ ಶ್ರೀವತ್ಸ ಅವರು ೨೫೦ಕ್ಕೂ ಹೆಚ್ಚು ಮಂದಿಗೆ ಇ-ಖಾತೆ ಪತ್ರ ಹಂಚಿಕೆ ಮಾಡಿದರು.
ನಗರದ ವಲಯ ಕಚೇರಿ-1ರಲ್ಲಿ ಇ-ಖಾತೆ ಹಂಚಿಕೆ ಮಾಡಿ ಮಾತನಾಡಿದ ಅವರು, ಆಯುಕ್ತ ತನ್ವೀರ್ ಅವರು ಆಯುಕ್ತರಾಗಿ ಬಂದ ನಂತರ ಸಾರ್ವಜನಿಕರಿಗೆ ಇ-ಖಾತೆ ಹಂಚಿಕೆಯ ವೇಗ ಹೆಚ್ಚಾಗಿದ್ದು, ವಲಯ ಕಚೇರಿಗಳ ಆಯುಕ್ತರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟು ಖಾತೆ ವಿತರಣೆ ಮಾಡಿಸುತ್ತಿರುವುದರಿಂದ ರಾಜ್ಯದಲ್ಲಿ ಮೈಸೂರು ಜಿಲ್ಲೆ ಎರಡನೇ ಸ್ಥಾನ ಪಡೆದು ಕೊಂಡಿದೆ ಎಂದು ಹೇಳಿದರು.
ಆಯುಕ್ತ ತನ್ವೀರ್ ಅವರು ಮಾತನಾಡಿ, ವಲಯ ಕಚೇರಿ-1ರ ಸಹಾಯಕ ಆಯುಕ್ತರು 7/10 ದಿನಗಳಲ್ಲಿ ಇ-ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ದಾಖಲೆ ನೀಡಿ ಸಾರ್ವಜನಿಕರು ಸಹಕರಿಸಿ. ಈಗಾಗಲೇ 45 ದಿನಗಳಲ್ಲಿ 9 ಸಾವಿರ ಇ-ಖಾತೆ ವಿತರಿಸಲಾಗಿದೆ. ಈ ವಲಯದಲ್ಲಿ ಪ್ರತೀ ತಿಂಗಳು 800/900 ಖಾತೆ ವಿತರಿಸುವ ಮೂಲಕ ಗುರಿ ಮುಟ್ಟಬೇಕಿದೆ. ಸಾರ್ವಜನಿಕರು ದಾಖಲೆ ನೀಡಿ ಪಡೆದುಕೊಳ್ಳಿ ಎಂದರು
ಸ್ವಚ್ಛ ಸರ್ವೇಕ್ಷಣ್ ನಡೆಯುತ್ತಿದೆ. ಈ ಸಾಲಿನಲ್ಲಿ ಮೈಸೂರು ನಗರ ೧ನೇ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಿಮ್ಮ ದೂರವಾಣಿಗಳ ಮೂಲಕ ಈ ವಿಚಾರವಾಗಿ ಹೆಚ್ಚು ಪ್ರಚಾರ ಮಾಡುವ ಮೂಲಕ ಸಹಕರಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಆಯುಕ್ತ(ಕಂದಾಯ) ಸೋಮಶೇಖರ್, ವಲಯ-೧ರ ಸಹಾಯಕ ಆಯುಕ್ತ ಮನನ ಮಂಜುನಾಥ ರೆಡ್ಡಿ, ಕಂದಾಯಾಧಿಜಾರಿ ಸ್ವರ್ಣಲತಾ, ಸಹಾಯಕ ಕಂದಾಯಾಧಿಕಾರಿ ಪ್ರತಾಪ್ ಮುಂಯಾದವರು ಉಪಸ್ಥಿತರಿದ್ದರು.
ವಲಯ ಕಚೇರಿ -2ರಲ್ಲಿ 100 ಇ-ಖಾತೆ ವಿತರಣೆ:
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರಲ್ಲಿ ಶಾಸಕ ಶ್ರೀವತ್ಸ ಈ ಭಾಗದ 100 ಮಂದಿ ಸಾರ್ವಜನಿಕರಿಗೆ ಇ- ವಿತರಿಸಿದರು.
ನಂತರ ಮಾತನಾಡಿದ ಅವರು, ಅತ್ಯಂತ ಸಾಧಾರಣವಾದ ನಿಮ್ಮಲ್ಲಿ ಈಗಾಗಲೇ ಇರುವ ದಾಖಲಾತಿಗಳಾದ ಟೈಟಲ್ ಡೀಡ್, ರಿಜಿಸ್ಟ್ರೇಷನ್ ಪ್ರತಿ, ಇಸಿ, ಆಸ್ತಿಯ ಛಾಯಾಚಿತ್ರ, ಪಾಸ್ ಪೋರ್ಟ್ ಫೋಟೋ, ತೆರಿಗೆ ಪಾವತಿಸಿರುವ ರಸೀದಿ, ಐಡಿ ದಾಖಲೆ ಇವಿಷ್ಟು ದಾಖಲೆ ನೀಡಿ ಇ-ಖಾತೆ ಪಡೆದುಕೊಳ್ಳಿ ಎಂದು ಹೇಳಿದರು.
ಈ ವೇಳೆ ವಲಯ ಕಚೇರಿ-2ರ ವಲಯ ಆಯುಕ್ತ ನಾಗರಾಜು, ಸಹಾಯಕ ಕಂದಾಯಾಧಿಕಾರಿ ಬೆಟ್ಟಸಾಮಯ್ಯ, ಜಂದಾಯ ನಿರೀಕ್ಷಕ ಡಿ.ಎಸ್. ಅಶೋಕ್ ಪಾಲಿಕೆ ಮಾಜಿ ಸದಸ್ಯೆ ಚಂಪಕ ಮುಂತಾದವರು ಉಪಸ್ಥಿತರಿದ್ದರು.
ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…
ಟೆಹರಾನ್: ಯುಎಸ್ ಮಿಲಿಟರಿ ಬಳಸುತ್ತಿದ್ದ ಸೌದಿ ಅರೇಬಿಯಾದ ಅಲ್ ಖಾರ್ಜ್ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಕೆಲವು…
ಬೆಂಗಳೂರು: ನಗರದಲ್ಲಿ ವಾಣಿಜ್ಯ ಎಲ್ಪಿಜಿ ಕೊರತೆ ಮುಂದುವರಿದಿದ್ದು, ಸ್ವಲ್ಪ ಮಟ್ಟಿಗೆ ಹೋಟೆಲ್ಗಳಿಗೆ ಎಲ್ಪಿಜಿ ನೀಡಲು ಚರ್ಚಿಸುತ್ತೇವೆ ಎಂದು ಸಚಿವ ಮುನಿಯಪ್ಪ…
ಚಾಮರಾಜನಗರ: ಗೂಡ್ಸ್ ಆಟೋ ಪಲ್ಟಿಯಾಗಿ 13 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮಲೆ ಮಹದೇಶ್ವರ…
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.…
ಹಾಸನ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಡ್ರಳ್ಳಿ ಗ್ರಾಮದಲ್ಲಿರುವ ಪಟ್ಲ ಬೆಟ್ಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ ಮುಂಜಾಗ್ರತಾ…