ಮೈಸೂರು

ದೀಪಾವಳಿಯಂದೇ ಕತ್ತಲು ಕವಿದ ಪಟ್ಟಣದ ರಸ್ತೆಗಳು

ತಿ.ನರಸೀಪುರ: ‘ಕತ್ತಲಿಂದ ಬೆಳಕಿನೆಡೆಗೆ’ಎಂದು ದೀಪಾವಳಿ ಹಬ್ಬ ಸಂದೇಶ ಸಾರಿದರೆ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೇ ಪಟ್ಟಣದ ಹಲವೆಡೆ ಕತ್ತಲು ಆವರಿಸಿದೆ.
ಪುರಸಭಾ ವ್ಯಾಪ್ತಿಗೆ ಒಳಪಡುವ ಪಟ್ಟಣದ ಕಾವೇರಿ- ಕಪಿಲಾ ಜೋಡಿ ರಸ್ತೆಯ ಹಳೇ ತಿರುಮಕೂಡಲನಿಂದ ವಿದ್ಯೋದಯ ಕಾಲೇಜ್ ವೃತ್ತ,ಮಹದೇವಪ್ಪ ಕಲ್ಯಾಣ ಮಂಟಪದಿಂದ ಹೆಳವರಹುಂಡಿ ಮತ್ತು ಕಪಿಲಾ ನದಿಗೆ ನಿರ್ಮಿಸಿರುವ ಹೊಸ ಸೇತುವೆಯ ಮೇಲ್ಭಾಗದಲ್ಲಿರುವ ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸದೆ ಇರುವುದರಿಂದ ಸದರಿ ಜಾಗಗಳಲ್ಲಿ ಕತ್ತಲು ಕವಿದಿದೆ.ಬೀದಿ ದೀಪ ಇಲ್ಲದ ಪರಿಣಾಮ ಖಾಸಗಿ ಬಸ್ ನಿಲ್ದಾಣದ ಬಳಿ ವಾಹನ ಸಂಚಾರ ದುಸ್ತರವಾಗಿದೆ.

ಹೊಸ ಸೇತುವೆ ಮೇಲ್ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಕೋರಿಕೆ ನಿಲ್ದಾಣ ವಿದ್ದು, ಇಲ್ಲಿ ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಬಸ್ ನಿಂದ ಇಳಿಯುವ ಮಹಿಳಾ ಪ್ರಯಾಣಿಕರಿಗೆ ಯಾವುದೇ ಭದ್ರತೆ ಇರುವುದಿಲ್ಲ.
ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಓಡಾಡುವ ವಾಹನ ಚಾಲಕ ಮತ್ತು ಪಾದಚಾರಿಗಳಿಗೆ ಬಹಳ ತೊಂದರೆಯಾಗಿದೆ.

ಈ ಸ್ಥಳಗಳಲ್ಲಿ ಕತ್ತಲು ಆವರಿಸಿರುವುದರಿಂದ ಅಪಘಾತಗಳು ನಡೆಯುವ ಸಂಭವವಿರುತ್ತದೆ.
ಕಳೆದ ಹಲವು ದಿನಗಳಿಂದಲೂ ಬೀದಿ ದೀಪದ ಸಮಸ್ಯೆ ಇದ್ದು,ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಕಳ್ಳ-ಕಾಕರಿಗೆ ಆಸ್ಪದ ಈ ರಸ್ತೆ : ಪಟ್ಟಣದ ಪ್ರಮುಖ ರಸ್ತೆಗಳಾದ ಕಾಲೇಜ್ ರಸ್ತೆ, ಜೋಡಿ ರಸ್ತೆ,ಲಿಂಕ್ ರಸ್ತೆಗಳಲ್ಲಿ ಚಿನ್ನದ, ಮೊಬೈಲ್ ಮತ್ತು ಕಿರಾಣಿ ಅಂಗಡಿಗಳು ಹೆಚ್ಚಿವೆ. ಹಾಗಾಗಿ ಭಾಗಗಳಲ್ಲಿ ಬೀದಿ ದೀಪ ಇಲ್ಲದಿರುವುದು ಕಳ್ಳಕಾಕರು ಕಳ್ಳತನ ನಡೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ.ಅಲ್ಲದೇ  ಈ ಭಾಗಗಳಲ್ಲಿ ಯಾರೇ ಓಡಾಡಿದರೂ ಪತ್ತೆ ಹಚ್ಚಲು ಗುರುತಿಸಲಾಗದಷ್ಟು ಕತ್ತಲು ಆವರಿಸಿದೆ.

andolana

Recent Posts

ಕಾರು ಚಾಲಕನ ಪುತ್ರನಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬಂದ ದಳಪತಿ ವಿಜಯ್‌!

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್‌ ಅವರ ಕಾರು ಚಾಲಕನ…

7 hours ago

ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು : ಮೈಸೂರಲ್ಲಿ ಸಂಭ್ರಮಾಚರಣೆ

ಮೈಸೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಲಭಿಸಿದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ…

8 hours ago

ವಿಜಯ್‌ ಭೇಟಿಯಾಗಿ ತ್ರಿಶಾ ಅಭಿನಂದನೆ

ಚೆನ್ನೈ : ನಟಿ ತ್ರಿಶಾ ಕೃಷ್ಣನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.…

8 hours ago

ತಮಿಳುನಾಡು| ಸಿಎಂ ಎಂ.ಕೆ.ಸ್ಟಾಲಿನ್‌ಗೆ ಸೋಲು

ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್‌ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…

11 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ: ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಜಯಭೇರಿ

ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…

12 hours ago

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ…

12 hours ago