ಮೈಸೂರು

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ ಪೊಲೀಸರು ಶನಿವಾರ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತನಿಖೆ ಮಾಹಿತಿಯನ್ನು ಎನ್‌ಐಎ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ಘಟನೆಯಲ್ಲಿ ಮೃತಪಟ್ಟಿರುವ ಸಲೀಂ, ಇಲ್ಲಿಗೆ ಬರುವ ಮುನ್ನ ಉತ್ತರಪ್ರದೇಶ, ಹೈದರಾಬಾದ್‌ನಲ್ಲಿ ಬಲೂನ್ ಮಾರಾಟ ಮಾಡಿದ್ದನು. ಕಳೆದ ತಿಂಗಳಷ್ಟೇ ಆತ ಮೈಸೂರಿಗೆ ಬಂದಿದ್ದ ಬಲೂನ್ ಮಾರಾಟ ಸೇರಿದಂತೆ ಸಣ್ಣಪುಟ್ಟ ವಸ್ತುಗಳ ಮಾರಾಟ ಆತನ ಕಾಯಕ.

ಸಲೀಂ ಜೊತೆ ಬಂದಿದ್ದ ಸ್ನೇಹಿತರಾದ ರಿಜ್ವಾನ್ ಅಲಿಯಾಸ್ ರಾಜು ಹಾಗೂ ಹುಸೇನ್ ಅಲಿಯಾಸ್ ಸಿಂಗ್, ಸುನೀಲ್ ಸಿಂಗ್ ಅವರುಗಳಿಂದ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸುನ್ನಿಚೌಕದ ಷರೀಫ್ ಲಾಡ್ಜ್ ಮಾಲೀಕ ಅಮಾನ್, ಸಲೀಂ ಹಾಗೂ ಅವರ ಸಂಬಂಧಿಕರು ಹಲವಾರು ವರ್ಷದಿಂದ ಮೈಸೂರಿಗೆ ಬರುತ್ತಿದ್ದರು. ದಸರಾ, ಹಬ್ಬ ಹರಿದಿನಗಳಲ್ಲಿ ಬರುತ್ತಿದ್ದರು. ಒಬ್ಬರಿಗೆ ಒಂದು ದಿನಕ್ಕೆ ನೂರು ರೂಪಾಯಿಯ ಬಾಡಿಗೆಯಲ್ಲಿ ಕೊಠಡಿ ಕೊಡುತ್ತಿದ್ದೆವು ಎಂದಿದ್ದಾರೆ.

ಒಂದೇ ಕೊಠಡಿಯಲ್ಲಿ ನಾಲ್ವರು ಉಳಿದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಎರಡು ಕೊಠಡಿಯಲ್ಲಿ ನಾಲ್ವರು ಇರುತ್ತಿದ್ದರು. ವ್ಯಾಪಾರವಾದರೆ ಆ ಹಣವನ್ನು ಕೊಡುತ್ತಿದ್ದರು. ಇಲ್ಲವಾದರೆ ಅದನ್ನೂ ಅವರು ಕೊಡುತ್ತಿರಲಿಲ್ಲ. ನಾವು ಕೂಡ ಹಣಕ್ಕಾಗಿ ಒತ್ತಾಯ ಮಾಡುತ್ತಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

ಅವರುಗಳು ಸೈಕಲ್ ಮೂಲಕವೇ ಸಂಚರಿಸುತ್ತಿದ್ದರು. ಸೈಕಲ್ ಇಲ್ಲೇ ಇರುತ್ತಿದ್ದವು. ಬಲೂನ್ ಮಾರಿದ ಮೇಲೆ ಸೈಕಲ್ ಬಿಟ್ಟು ಹೋಗುವುದು, ಬರುವುದು ಮಾಡುತ್ತಿದ್ದರು. ಸಿಲಿಂಡರ್‌ಗಳನ್ನು ಶೆಡ್‌ಗಳಲ್ಲಿ ಬಾಡಿಗೆಗೆ ಇಟ್ಟು ಬರುತ್ತಿದ್ದರು. ಯಾವತ್ತೂ ಲಾಡ್ಜ್ ಬಳಿಗೆ ಅವರು ತರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಲಾಡ್ಜ್‌ಗಳ ಮೇಲೆ ಪೊಲೀಸರ ನಿಗಾ  

ಗ್ಯಾಸ್ ಸಿಲಿಂಡರ್ ಸೋಟ ಪ್ರಕರಣ ಬೆನ್ನಲ್ಲೆ ನಗರದ ಎಲ್ಲಾ ಲಾಡ್ಜ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬೇರೆಡೆಯಿಂದ ಬರುವ ವ್ಯಕ್ತಿಗಳ ಮಾಹಿತಿ ಪಡೆದು ಕೊಠಡಿ ಕೊಡುವಂತೆ ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಆಧಾರ್ ಕಾರ್ಡ್ ಅಥವ ಇನ್ನಿತರ ಗುರುತಿನ ಚೀಟಿ ಇಲ್ಲದೆ ರೂಮ್ ಕೊಡುವ ಲಾಡ್ಜ್‌ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಲಾಡ್ಜ್‌ಗಳಲ್ಲಿ ಅಕ್ರಮವಾಗಿ ಉಳಿದುಕೊಂಡಿರುವವರ ಮೇಲೆ ನಿಗಾ ಇಟ್ಟಿದ್ದಾರೆ. ಹೊಸ ವರ್ಷದ ಹಿನ್ನಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಆಡುಮಾತಿಗೆ ಹತ್ತಿರವಿರುವ ಕಾವ್ಯಾನುವಾದ

ಹಾಡುಪಾಡು ರಾಮು ಅನುವಾದಿಸಿ ದೇವನೂರ ಮಹಾದೇವ ಸಂಪಾದಿಸಿದ 'ಮಹಾಭಾರತದಿಂದ ಒಂದಿಷ್ಟು ಮೇರುಕೃತಿ' ಬರುವ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕಕ್ಕೆ…

22 mins ago

ಭಾನುವಾರದ ಹಾಡುಪಾಡು | ವಿಯಟ್ಟಾಮಿನಲ್ಲೂ ಹುಡುಗಿಯರೇ ಸ್ಟ್ರಾಂಗೂ ಗುರೂ

ಬಲಿಷ್ಟ ಮಹಿಳೆ, ಸಮೃದ್ದ ಕುಟುಂಬ, ಬಲಿಷ್ಠ ರಾಷ್ಟ್ರ ಎಂಬ ಮಾತು ವಿಯಾಟ್ಟಾಮಿನಲ್ಲಿ ಅಕ್ಷರಶಃ ಸತ್ಯ. ಇತಿಹಾಸದಿಂದ ಇಂದಿನವರೆಗೂ ಅಲ್ಲಿನ ಮಹಿಳೆಯರು…

32 mins ago

ಭಾನುವಾರದ ಹಾಡುಪಾಡು | “ಇಲ್ಲ ಕಣ್‌ ಪುಟ್ರಂಗಾ, ಡಿಕೆ ಏನಾರೂ ಮಾಡದ್ರೂ ಮಾಡಬೋದು ಅನಿಸ್ತಾದೆ”

• ಕುಸುಮ ಆಯರಹಳ್ಳಿ ವೀಕೆಂಡಿನಲ್ಲಿ ಊರಿಗೆ ಬಂದು ಅವನನ್ನು ಮಾತಾಡಿಸಿಕೊಂಡು ಹೋಗುವ ಪ್ರೊಫೆಸರ್ ಧರ್ಮರಾಜ್‌ಗೆ ಊರಲ್ಲಿ ಜನವೇ ಕಾಣದಿದ್ದುದು ಅಚ್ಚರಿಯಾಯ್ತು.…

51 mins ago

ಎಲ್‌ಪಿಜಿ ಸಿಲಿಂಡರ್‌ ದರ ಮತ್ತೆ ಏರಿಕೆ ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಹೊಸದಿಲ್ಲಿ :  ಮಧ್ಯಪ್ರಾಚ್ಯ ಬಿಕ್ಕಟ್ಟು ಆರಂಭವಾದ ಬಳಿಕ ಕಳೆದ 3 ತಿಂಗಳ ಅವಧಿಯಲ್ಲಿ 2 ನೇ ಬಾರಿಗೆ ಗೃಹಬಳಕೆ ಎಲ್…

1 hour ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 7 ಭಾನುವಾರ

4 hours ago

ರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ: ಸರ್ಕಾರಕ್ಕೆ ಎದುರಾಗಿದ್ದ ಕಂಟಕ ತಾತ್ಕಾಲಿಕ ನಿವಾರಣೆ

ಬೆಂಗಳೂರು: ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಸಚಿವ ರಾಮಲಿಂಗ ರೆಡ್ಡಿ…

17 hours ago