ಮೈಸೂರು

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ ಪೊಲೀಸರು ಶನಿವಾರ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತನಿಖೆ ಮಾಹಿತಿಯನ್ನು ಎನ್‌ಐಎ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ಘಟನೆಯಲ್ಲಿ ಮೃತಪಟ್ಟಿರುವ ಸಲೀಂ, ಇಲ್ಲಿಗೆ ಬರುವ ಮುನ್ನ ಉತ್ತರಪ್ರದೇಶ, ಹೈದರಾಬಾದ್‌ನಲ್ಲಿ ಬಲೂನ್ ಮಾರಾಟ ಮಾಡಿದ್ದನು. ಕಳೆದ ತಿಂಗಳಷ್ಟೇ ಆತ ಮೈಸೂರಿಗೆ ಬಂದಿದ್ದ ಬಲೂನ್ ಮಾರಾಟ ಸೇರಿದಂತೆ ಸಣ್ಣಪುಟ್ಟ ವಸ್ತುಗಳ ಮಾರಾಟ ಆತನ ಕಾಯಕ.

ಸಲೀಂ ಜೊತೆ ಬಂದಿದ್ದ ಸ್ನೇಹಿತರಾದ ರಿಜ್ವಾನ್ ಅಲಿಯಾಸ್ ರಾಜು ಹಾಗೂ ಹುಸೇನ್ ಅಲಿಯಾಸ್ ಸಿಂಗ್, ಸುನೀಲ್ ಸಿಂಗ್ ಅವರುಗಳಿಂದ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸುನ್ನಿಚೌಕದ ಷರೀಫ್ ಲಾಡ್ಜ್ ಮಾಲೀಕ ಅಮಾನ್, ಸಲೀಂ ಹಾಗೂ ಅವರ ಸಂಬಂಧಿಕರು ಹಲವಾರು ವರ್ಷದಿಂದ ಮೈಸೂರಿಗೆ ಬರುತ್ತಿದ್ದರು. ದಸರಾ, ಹಬ್ಬ ಹರಿದಿನಗಳಲ್ಲಿ ಬರುತ್ತಿದ್ದರು. ಒಬ್ಬರಿಗೆ ಒಂದು ದಿನಕ್ಕೆ ನೂರು ರೂಪಾಯಿಯ ಬಾಡಿಗೆಯಲ್ಲಿ ಕೊಠಡಿ ಕೊಡುತ್ತಿದ್ದೆವು ಎಂದಿದ್ದಾರೆ.

ಒಂದೇ ಕೊಠಡಿಯಲ್ಲಿ ನಾಲ್ವರು ಉಳಿದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಎರಡು ಕೊಠಡಿಯಲ್ಲಿ ನಾಲ್ವರು ಇರುತ್ತಿದ್ದರು. ವ್ಯಾಪಾರವಾದರೆ ಆ ಹಣವನ್ನು ಕೊಡುತ್ತಿದ್ದರು. ಇಲ್ಲವಾದರೆ ಅದನ್ನೂ ಅವರು ಕೊಡುತ್ತಿರಲಿಲ್ಲ. ನಾವು ಕೂಡ ಹಣಕ್ಕಾಗಿ ಒತ್ತಾಯ ಮಾಡುತ್ತಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

ಅವರುಗಳು ಸೈಕಲ್ ಮೂಲಕವೇ ಸಂಚರಿಸುತ್ತಿದ್ದರು. ಸೈಕಲ್ ಇಲ್ಲೇ ಇರುತ್ತಿದ್ದವು. ಬಲೂನ್ ಮಾರಿದ ಮೇಲೆ ಸೈಕಲ್ ಬಿಟ್ಟು ಹೋಗುವುದು, ಬರುವುದು ಮಾಡುತ್ತಿದ್ದರು. ಸಿಲಿಂಡರ್‌ಗಳನ್ನು ಶೆಡ್‌ಗಳಲ್ಲಿ ಬಾಡಿಗೆಗೆ ಇಟ್ಟು ಬರುತ್ತಿದ್ದರು. ಯಾವತ್ತೂ ಲಾಡ್ಜ್ ಬಳಿಗೆ ಅವರು ತರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಲಾಡ್ಜ್‌ಗಳ ಮೇಲೆ ಪೊಲೀಸರ ನಿಗಾ  

ಗ್ಯಾಸ್ ಸಿಲಿಂಡರ್ ಸೋಟ ಪ್ರಕರಣ ಬೆನ್ನಲ್ಲೆ ನಗರದ ಎಲ್ಲಾ ಲಾಡ್ಜ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬೇರೆಡೆಯಿಂದ ಬರುವ ವ್ಯಕ್ತಿಗಳ ಮಾಹಿತಿ ಪಡೆದು ಕೊಠಡಿ ಕೊಡುವಂತೆ ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಆಧಾರ್ ಕಾರ್ಡ್ ಅಥವ ಇನ್ನಿತರ ಗುರುತಿನ ಚೀಟಿ ಇಲ್ಲದೆ ರೂಮ್ ಕೊಡುವ ಲಾಡ್ಜ್‌ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಲಾಡ್ಜ್‌ಗಳಲ್ಲಿ ಅಕ್ರಮವಾಗಿ ಉಳಿದುಕೊಂಡಿರುವವರ ಮೇಲೆ ನಿಗಾ ಇಟ್ಟಿದ್ದಾರೆ. ಹೊಸ ವರ್ಷದ ಹಿನ್ನಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕಾಂಕ್ರೋಚ್‌ಗಳ ಮೇಲೆ ಲಾಠಿಚಾರ್ಜ್:‌ ವಿಡಿಯೋ ನೋಡಲು ಟೈಮ್‌ ಇಲ್ಲ ಎಂದ ಸುಪ್ರೀಂಕೋರ್ಟ್‌

ನವದೆಹಲಿ: ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನಡೆಸಿದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ…

13 hours ago

ಓದುಗರ ಪತ್ರ: ರೈಲಿನಲ್ಲಿ ತಿನಿಸು ಮಾರುವವರು ವೈಯಕ್ತಿಕ ಸ್ವಚ್ಛತೆಗೂ ಗಮನ ನೀಡಲಿ

ರೈಲ್ವೆ ಇಲಾಖೆಯಿಂದ ಅನುಮತಿ ಪಡೆದ ಮಾರಾಟಗಾರರು ಪ್ರತಿನಿತ್ಯ ರೈಲುಗಳಲ್ಲಿ ಕಾಫಿ, ಟೀ, ಇಡ್ಲಿ, ರೈಸ್ ಬಾತ್ ಮೊದಲಾದ ಆಹಾರ ಪದಾರ್ಥಗಳು,…

22 hours ago

ಓದುಗರ ಪತ್ರ: ‘ಗೃಹಜ್ಯೋತಿ’ ಗೊಂದಲ ನಿವಾರಿಸಿ

ಕರ್ನಾಟಕ ವಿದ್ಯುತ್ ಮಂಡಳಿಯು ರಾಜದ್ಯಂತ ಗೃಹ ಜ್ಯೋತಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಬಾಗಿಲಿಗೆ ಬಂದು ಸಮೀಕ್ಷೆ ಕಾರ್ಯ ಮಾಡುತ್ತಿದೆ.…

22 hours ago

ಓದುಗರ ಪತ್ರ: ಬರಪೀಡಿತ ಜಿಲ್ಲೆಗಳೆಂದು ಘೋಷಿಸಿ

ಕರ್ನಾಟಕದಲ್ಲಿ ಶೇ.೬೦ ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದ್ದು, ಮೈಸೂರು, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಕೊಪ್ಪಳ, ಕಲಬುರಗಿ,ಬೀದರ್, ಹಾಸನ, ದಾವಣಗೆರೆ,…

22 hours ago

ಓದುಗರ ಪತ್ರ: ಸಂಸತ್ ಚಲೋ ತಡೆಗೆ ನಡೆದಿತ್ತೆ ಹುನ್ನಾರ?

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ…

22 hours ago

ಇ-20 ಇಂಧನಕ್ಕೆ ಭಾರತ ಪ್ರಯೋಗಾಲಯವಾಯಿತೆ?!

ಶುಭಾ ಖಟಾವಕರ ಮ್ಹೆತ್ರಸ್ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ಅಟಾರ್ನಿ ಜನರಲ್ ಹೇಳಿಕೆ! ೨೦೨೩ರ ನಂತರ ತಯಾರಾದ ವಾಹನಗಳಿಗೆ ಮಾತ್ರ ಇ-೨೦…

22 hours ago