ಮೈಸೂರು

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು

ಮೈಸೂರು : ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗೋಕುಲಂನ ಕಾಂಟೂರ್ ರಸ್ತೆಯ ಶ್ಯಾಗಲೆ ಶಿವರುದ್ರಪ್ಪ ಟ್ರಸ್ಟ್‌ನಲ್ಲಿರುವ ಜಾತ್ಯತೀತ ಒಲವಿನ ವಿವಾಹ ವೇದಿಕೆ ಮಾನವ ಮಂಟಪದಲ್ಲಿ ಭಾನುವಾರ ನಡೆದ ಸರಳ ಪ್ರೇಮ ವಿವಾಹದಲ್ಲಿ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಿಸಿಕೊಂಡು ಹಸೆಮಣೆ ಏರಿದರು. ಯಾವುದೇ ಮಂಗಳ ವಾದ್ಯ ಇಲ್ಲದೆ ಕುವೆಂಪು ಅವರ ಆಶಯದಂತೆ ಪ್ರಕೃತ್ ಗೌಡ ಅವರು ಪ್ರಿಯಾಂಕ ಅವರಿಗೆ ತಾಳಿ ಕಟ್ಟುತ್ತಿದ್ದಂತೆ ನೆರೆದಿದ್ದ ಜನರು ಅಕ್ಷತೆ ಕಾಳಿಟ್ಟು ಆಶೀರ್ವಾದ ಮಾಡಿದರು.

ಲಕ್ಷ್ಮೀಕಾಂತ್ ನಗರದ ನಿಸರ್ಗ ಬಡಾವಣೆಯ ಟಿ.ಎಚ್.ಶ್ರೀನಿವಾಸಮೂರ್ತಿ-ದೇವಿ ಶಾರದಾ ದಂಪತಿಯ ಪುತ್ರಿ ಎಸ್.ಪ್ರಿಯಾಂಕ ಮತ್ತು ಮಹಾಲಕ್ಷ್ಮೀ ಬಡಾವಣೆಯ ಯು.ಎಂ.ಕೃಷ್ಣಪ್ಪ ಹಾಗೂ ಎಚ್.ಸಿ.ಶೀಲಾ ದಂಪತಿ ಪುತ್ರ ಯು.ಕೆ.ಪ್ರಕೃತ್ ಗೌಡ ಸರಳ ಪ್ರೇಮ ವಿವಾಹವಾದರು.

ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯಗಳನ್ನು ಬೋಧಿಸುತ್ತಿದ್ದಂತೆಯೇ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಾಯಿಸಿಕೊಂಡರು. ನಂತರ, ವಧುವಿಗೆ ತಾಳಿ ಕಟ್ಟಿದಾಗ ನೆರೆದಿ ದ್ದವರು ಆಶೀರ್ವಾದ ಮಾಡಿದರು.

ಶ್ರೀಮತಿ ಕಾಳಚನ್ನೇಗೌಡ, ಪತ್ರಕರ್ತ ಟಿ.ಗುರುರಾಜ್, ಸಾಮಾಜಿಕ ಕಾರ್ಯಕರ್ತೆ ಮಂಗಳ, ನಿವೃತ್ತ ಅಽಕಾರಿ ರಾಜು, ಉಪನ್ಯಾಸಕರಾದ ಕವಿತ, ಸಾರಿಗೆ ಇಲಾಖೆಯ ಕೃಷ್ಣ, ವಧುವಿನ ಪೋಷಕರಾದ ದೇವಿ ಶಾರದ ಮತ್ತು ಟಿ.ಎಚ್.ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದು ಹಾರೈಸಿದರು.

ಮನವೊಲಿಕೆಗೆ ಯತ್ನ
ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಕುಟುಂಬದವರ ಸಮ್ಮುಖದಲ್ಲಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದರು. ಈ ವಿಚಾರ ಎರಡೂ ಕುಟುಂಬಗಳ ಮನೆಯವರಿಗೂ ತಿಳಿದಿತ್ತು. ಯು.ಕೆ.ಪ್ರಕೃತ್ ಗೌಡ ಅವರ ಮನೆಗೆ ವಧುವಿನ ಪೋಷಕರು ತೆರಳಿ ಮಾತುಕತೆ ನಡೆಸಿದಾಗ ವರನ ತಂದೆ-ತಾಯಿ ಸಮ್ಮತಿಸಿದ್ದರು. ಆದರೆ, ವರನ ತಾತ-ಅಜ್ಜಿ ಈ ಮದುವೆಗೆ ನಿರಾಕರಿಸಿದ್ದರಿಂದ ಸಮಸ್ಯೆಯಾಯಿತು. ಪ್ರಿಯಾಂಕಳನ್ನು ಬಿಟ್ಟಿರದ ಪ್ರಕೃತ್ ಗೌಡ ಮಾನವ ಮಂಟಪದವರಿಗೆ ವಿಚಾರ ಮುಟ್ಟಿಸಿದರು. ಸಂಚಾಲಕರು ಈ ಕುಟುಂಬಗಳ ಮನವೊಲಿಸಿ ವಿವಾಹ ಮಾಡಿಸಲು ಯತ್ನಿಸಿದರೂ ಸಾಧ್ಯವಾಗದೆ, ವರನ ಪೋಷಕರು ದೂರ ಉಳಿದರೆ, ವಧುವಿನ ಪೋಷಕರು ಮುಂದೆ ನಿಂತು ಮದುವೆ ಮಾಡಿಸಿದರು.

ಆಂದೋಲನ ಡೆಸ್ಕ್

Recent Posts

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

2 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ…

2 hours ago

ಗಾಂಧಿವಾದಕ್ಕೆ ಮರುಳಾಗಿದ್ದ ಮೈಸೂರಿನ ಯಶೋಧರಾ ದಾಸಪ್ಪ

ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…

2 hours ago

ಅಸತ್ಯ ಎಂಬುದು ಕೆಟ್ಟ ವ್ರಣದ ಹಾಗೆ

ನಲವತ್ತು ವರುಷಗಳ ಕೆಳಗೆ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ಇರುವುದಕ್ಕಿಂತ ಬಹಳ ಕಡಿಮೆಯಾಗಿತ್ತು. ತಾವು ಮದುವೆಯಾದವರಾಗಿದ್ದರೂ, ಬ್ರಹ್ಮಚಾರಿಗಳೆಂದು ನಟಿಸುವುದು…

2 hours ago

ಮಳೆ ಕೊರತೆ; ಸಂಕಷ್ಟದಲ್ಲಿ ಅವಳಿ ತಾಲ್ಲೂಕುಗಳ ರೈತರು

ಭೇರ್ಯ ಮಹೇಶ್ ಮಳೆ ಅಭಾವದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ, ರೈತರಿಗೆ ಸಾಕಷ್ಟು ನಷ್ಟ ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…

2 hours ago