ಮೈಸೂರು: 15 ದಿನಗಳ ಕಾಲ ಸಮಯ ಕೊಡುತ್ತೇನೆ, ತಾಕತ್ತು, ಧಮ್ ಇದ್ರೆ ನನ್ನ ವಿರುದ್ಧ ಐಟಿ, ಇಡಿ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಕೋತ್ವಾಲ್ ನ ಮೂಲವೇ ಚಿಕ್ಕಮಗಳೂರು, ಸಿ.ಟಿ ರವಿ ಕೋತ್ವಾಲ್ ನ ಸಂತತಿ.,ನಾನು ಗ್ರಾಮ ಪಂಚಾಯಿತಿ ಚುನಾವಣೆ ನಿಂತು ಗೆದ್ದಿಲ್ಲ ನಿಜಾ. ವಿಶ್ವಗುರು ಮೋದಿ ಯಾವ ಚುನಾವಣೆ ಗೆದ್ದು ಗುಜರಾತ್ ನ ಸಿಎಂ ಆಗಿದ್ದು? ಸಿಟಿ ರವಿ ಹಾಗೆ ನಾನು ಜಾತಿ, ಹಣ ಬಲದಿಂದ ಚುನಾವಣೆ ಎದುರಿಸುವ ಕ್ರಿಮಿನಲ್ ಅಲ್ಲ ಎಂದು ಸಿಟಿ ರವಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಜೀವನದಲ್ಲಿ ಎಲ್ಲಾದ್ರೂ ಎಫ್ ಐ ಆರ್ ಆಗಿದ್ರೆ , ನಾನು ನನ್ನ ರಾಜಕೀಯ ಜೀವನವನ್ನೇ ಬಿಡ್ತೇನೆ. ಸಿಟಿ ರವಿ ಕೋಟ್ಯಾಧೀಶ, ಸಿ ಟಿ ರವಿ ಎಂ ಎಲ್ ಎ ಆದಾಗ ಎಷ್ಟು ದುಡ್ಡು ಇತ್ತು, ಇವಾಗ ಎಷ್ಟಿದೆ ಅಂತ ಲೆಕ್ಕ ಕೊಡ್ಲಿ ಎಂದು ಸವಾಲು ಹಾಕಿದರು.ಸಿ ಟಿ ರವಿ ಆಲ್ದಳ್ಳಿಯಿಂದ ಬಂದವರು. ಅವರು, ರಸ್ತೆ ಮೇಲೆ ಲಿಫ್ಟ್ ಗಾಗಿ ಕಾಯ್ತಿದ್ದ ಕಾಲದಲ್ಲೇ ನನ್ನ ಬಳಿ ಸ್ಕೂಟರ್ ಇತ್ತು. ಅವರ ಭಾಷೆ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ. ಕುಡಿದ ನಶೆಯಲ್ಲಿ ಕಾರ್ ಓಡಿಸಿ ಅಮಾಯಕ ಜನರನ್ನು ಕೊಂದವನಲ್ಲ ನಾನು. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಏನು ಅಂತಾ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…