ಮೈಸೂರು

ಕನ್ನಡ ವೇದಿಕೆಯಿಂದ ಕೆ. ಶಿವರಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ !

ಮೈಸೂರು : ಕನ್ನಡ ವೇದಿಕೆ ವತಿಯಿಂದ ನಗರದ ಶಾಲೆಯ ಮಕ್ಕಳೊಂದಿಗೆ ಕೆ.ಶಿವರಾಂ ರವರಿಗೆ  ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು .
ಕಾರ್ಯಕ್ರಮ ಉದ್ದೇಶಿಸಿ ನಗರ ಪಾಲಿಕೆ ಸದಸ್ಯ  ಮಂಜುನಾಥ್  ಮಾತನಾಡಿ ಮೈಸೂರಿನ ನಗರದಲ್ಲಿ ಅವರು ಆಯುಕ್ತರಾಗಿ ಮೈಸೂರಿನ ಹಲವಾರು ಸೇವೆಗಳನ್ನು ಮಾಡಿದ್ದಾರೆ ಎಂದರು.
ಶೋಷಿತ ವರ್ಗದವರಿಗೆ ದೀನ ದಲಿತರಿಗೆ ಮೈಸೂರಿನ ಜಯನಗರ ಬಳಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ ಮತ್ತು ನೊಂದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಪಾವತಿಸಿದ್ದಾರೆ ಹಾಗೂ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕೆಎ  ಎಸ್ ಮತ್ತು ಐಎಎಸ್ ತರಬೇತಿಯನ್ನು ಸಹ ನೀಡುತ್ತಿದ್ದರು.
ನಮ್ಮ ಹಾಗೆ ಓದಿದರೆ ನನ್ನಂತೆ ತಾವು ಸಹ ಅಧಿಕಾರಿಯಾಗುತ್ತಿರಿ ಎಂದು ತಿಳಿ ಹೇಳುತ್ತಿದ್ದರು ಸ್ವಯಂ ನಿವೃತ್ತಿ ಹೊಂದಮೇಲೆ ಸಿನಿಮಾ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದರು ಚಲವಾದಿ ಎಂಬ ಸಂಘಟನೆಯಿಂದ ಶೋಷಿತ ವರ್ಗದವರಿಗೆ ಮಾರ್ಗದರ್ಶಕರಾಗಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ ಬಾಲಕೃಷ್ಣ ಅವರು ಮಾತನಾಡಿ, ಕನ್ನಡದಲ್ಲಿ ಪ್ರಥಮವಾಗಿ ಐಎಎಸ್ ಮಾಡಿದಂತ ಕೆ ಶಿವರಾಂ  ರವರು  ಇಂದು ನಮ್ಮನ್ನು ಅಗಲಿದ್ದಾರೆ.
ಆದರೆ ದೇಹ ಇಲ್ಲವಾದರೂ ಅವರ ವಿಚಾರಧಾರೆಗಳು ತಿಳಿದುಕೊಳ್ಳಲು ಸಾಕಷ್ಟು ಇವೆ ಅಂದಿನ ಕಾಲದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಸಮಯದಲ್ಲಿ ಛಲದಿಂದ ಕನ್ನಡ ಮಾತೃಭಾಷೆಯಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕಕ್ಕೆ ಮಾದರಿಯಾದರು ಎಂದರು.
ಇವರ ಸಾಹಸಕ್ಕೆ ಮೆಚ್ಚಿ ಅಂದಿನ ಸಂಘ-ಸಂಸ್ಥೆಗಳು ಅಭಿನಂದಿಸಿದವು ಇವರಿಂದ ಪ್ರೇರಿತರಾದ ಎಷ್ಟೋ ಜನ ಕನ್ನಡದಲ್ಲಿ ಐಎಎಸ್ ಮಾಡಲು  ಪ್ರಾರಂಭಿಸಿದರು.
ಇವರು ಮೈಸೂರಿನಲ್ಲಿ ನಗರ ಪಾಲಿಕೆ ಆಯುಕ್ತರಾಗಿ ಮತ್ತು ಕನ್ನಡದಲ್ಲಿ ಬಾನಲ್ಲೆ ಮಧುಚಂದ್ರಕ್ಕೆ ಎಂಬ ಸಿನಿಮಾದಿಂದ ಜನರಿಗೆ ಪರಿಚಿತರಾಗಿ ಇವರಿಂದ ಸುಮಾರು ಸಮಾಜಸೇವೆ ಕಾರ್ಯಗಳು ನಡೆದವು.
ಈಗಲೂ ಮೈಸೂರಿನಲ್ಲಿ ಇವರನ್ನು ನೆನೆಯುತ್ತಾರೆ ಇಂಥ ಮಹಾವ್ಯಕ್ತಿಯು ನಮ್ಮನ್ನು ಅಗಲಿರುವುದು ದುಃಖಕರ ವಿಷಯವಾಗಿದೆ ಮೈಸೂರಿನಲ್ಲಿ ಇವರ ಹೆಸರು ಉಳಿಸುವಂತಹ ಯಾವುದಾದರೂ ಉದ್ಯಾನವನಕ್ಕೋ ಹೊಸ ಬಡವನೆಗಳಿಗೆ ಇವರ ಹೆಸರು ಇಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಪದಾಧಿಕಾರಿಗಳಾದ ಗೋಪಿ, ಪ್ಯಾಲೇಸ್ ಬಾಬು, ಅರವಿಂದ, ಗೋವಿಂದ್ ರಾಜ್, ಮದನ್, ಮಹೇಶ್ ಮಾಧ್ಯಮ ವಕ್ತಾರ ಮುಂತಾದವರು ಇದ್ದರು.
andolana

Recent Posts

ಮಂಡ್ಯದಲ್ಲಿ ಭಿಕ್ಷುಕಿ ನಿಧನ : ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ. ಮಂಡ್ಯ ನಗರದ…

8 hours ago

ಜಿಲ್ಲೆಗೊಂದು ಕೈಗಾರಿಕೆ ತರುತ್ತೇನೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು…

9 hours ago

ನಕಲಿ ಔಷಧ ತಯಾರಿಕಾ, ಮಾರಾಟ ಜಾಲ ; ವಿದೇಶದಲ್ಲಿ ಕಿಂಗ್‌ಪಿನ್ ಬಂಧನ

ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್, ವಿದೇಶದಲ್ಲಿ ಅಡಗಿದ್ದ…

10 hours ago

ಗೋಣಿಕೊಪ್ಪ | ಮಾರುಕಟ್ಟೆಯಲ್ಲಿ ಗಸ್ತು ತಿರುಗಿದ ಪೊಲೀಸರು ; ಅಕ್ರಮ ಚಟುವಟಿಕೆ ಮೇಲೆ ನಿಗಾ

ಗೋಣಿಕೊಪ್ಪ : ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ರಸ್ತೆ ಅತಿಕ್ರಮಣ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ…

11 hours ago

ಪಾರದೀಪ್ ಕರಾವಳಿಯಲ್ಲಿ ಹಡಗು ಮುಳುಗಡೆ ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ

72,100 ಟನ್‌ ಕಬ್ಬಿಣದ ಅದಿರು ಇದ್ದ ಹಡಗು ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯ ಆಳ ಸಮುದ್ರದಲ್ಲಿ ಶನಿವಾರ ಭೀಕರ ನೌಕಾ…

12 hours ago

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಬಾಗಿಲು ಒಡೆದು ಇಡಿ ದಾಳಿ

ಬೆಂಗಳೂರು : ಕೆಪಿಎಸ್‌ಸಿ ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನುಪಸ್ಥಿತಿಯಲ್ಲಿ ಅವರ…

13 hours ago