ಮೈಸೂರು : ಉದ್ಯೋಗಿಗಳು, ಸ್ಥಿತಿವಂತರು ಮಾತ್ರ ಹಿಮಾಲಯ ಪರ್ವತಾರೋಹಣ ನಡೆಸಲಿದ್ದಾರೆ ಎನ್ನುವ ಮನಸ್ಥಿತಿಯಲ್ಲಿರುವಾಗ ನಗರದ ಟೈಗರ್ ಅಡ್ವೆಂಚರ್ ಫೌಂಡೇಷನ್ ಪೌರಕಾರ್ಮಿಕ ಮಕ್ಕಳು ಹಾಗೂ ಆದಿವಾಸಿ ಮಕ್ಕಳನ್ನು ಸಾಹಸಯಾತ್ರೆಗೆ ಕರೆದೊಯ್ಯಲು ಸಿದ್ಧವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಚಾರಣ ಕೈಗೊಂಡ ಟೈಗರ್ ಅಂಡ್ವೆಂಚರ್ ಫೌಂಡೇಷನ್ 22 ಜನರಿರುವ ತಂಡದೊಂದಿಗೆ ಇದೇ ಏ.23ಕ್ಕೆ ಹೊರಟು ಮೇ 8 ರವರಗೆ ಹಿಮಾಲಯ ಪರ್ವತಾರೋಹಣ ನಡೆಸಲಿದೆ.
ತಂಡಕ್ಕೆ ಜೂನೂನ್ 2025 ಎಂದು ಹೆಸರಿಡಲಾಗಿದೆ. ತಂಡದ ನಾಯಕ ಅನಿಲ್ ಕುಮಾರ್ ನಾಯಕತ್ವದಲ್ಲಿ ಮಕ್ಕಳು ಚಾರಣ ನಡೆಸಲಿದ್ದಾರೆ.
ಚಾರಣದಲ್ಲಿ 8 ಪೌರಕಾರ್ಮಿಕರ ಮಕ್ಕಳು, ಇಬ್ಬರು ಮಾವುತರು, ಇಬ್ಬರು ಗಸ್ತು ಅರಣ್ಯ ಪಾಲಕರು ಸೇರಿ 22 ಮಂದಿ ಇರಲಿದ್ದಾರೆ.
ಸುಮಾರು 15 ಸಾವಿರ ಅಡಿಗಳ ಎತ್ತರದಲ್ಲಿರುವ ಮೌಂಟ್ ಪಾಂಗರ್ ಚುಲ್ಲ ಎಂಬ ಜಾಗಕ್ಕೆ ಚಾರಣದ ಗುರಿ ಇಟ್ಟು ಮಕ್ಕಳು ಹೊರಟಿದ್ದಾರೆ .
ಮೊದಲ ಬಾರಿಗೆ ವಿಮಾನ ಏರಿ ಹೋಗುತ್ತಿದ್ದೇವೆ. ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಗುಣಗಳನ್ನು ಬೆಳೆಸಿಕೊಳ್ಳಲು ಇದು ಸಹಾಯವಾಗಲಿದೆ. ನಮ್ಮ ಜೀವನದ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾದರೆ ಇಂತಹ ಸಾಹಸಗಳು ಮುಖ್ಯ. ಧೈರ್ಯವಾಗಿ ಮುನ್ನುಗ್ಗುವ ಗುರಿ ಇದೆ. ಎಲ್ಲಾ ಅನುಭವಗಳು ಹೇಗಿರಲಿದೆ ಎಂಬ ಕುತೂಹಲ ನಮಗೂ ಇದೆ ಎಂದು ಮಕ್ಕಳು ಸಂತಸ ವ್ಯಕ್ತಪಡಿಸಿದರು.
ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…
ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…
ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…
‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…
ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…