ಹುಣಸೂರು : ಅಖಿಲ ಭಾರತ ಹುಲಿ ಗಣತಿಗಾಗಿ ಮ್ಯಾಗ್ನಾ ಸಾಫ್ಟ್ವೇರ್ ಕಂಪೆನಿಯ ನವೋದಯ ಫೌಂಡೇಷನ್ವತಿಯಿಂದ ೨೦೦ ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಸಿಇಒ ಟೈಗರ್ ರಮೇಶ್ ಅವರು ನಾಗರಹೊಳೆ ಉದ್ಯಾನದ ಹುಣಸೂರು ವಿಭಾಗ ಕಚೇರಿಗೆ ಕೊಡುಗೆಯಾಗಿ ನೀಡಿದರು.
ಹುಣಸೂರು ಹುಲಿ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಉದ್ಯಮಿಯಿಂದ ಕ್ಯಾಮೆರಾ ಸ್ವೀಕರಿಸಿ ಮಾತನಾಡಿದ ಡಿಸಿಎಫ್ ಸೀಮಾ ಅವರು, ಪರಿಸರ ಸಂರಕ್ಷಣೆ ಕಾಳಜಿ ಹೊಂದಿರುವ ಮ್ಯಾಗ್ನಾ ಸಾಫ್ಟ್ವೇರ್ ಕಂಪೆನಿ ನಿರಂತರವಾಗಿ ನಾಗರಹೊಳೆ ಅರಣ್ಯ ಸಂರಕ್ಷಣೆಗೆ ಸಿಎಸ್ಆರ್ ಅನುದಾನದಿಂದ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಇವರ ಪರಿಸರ ಕಾಳಜಿಗೆ ಇಲಾಖೆ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಅರಣ್ಯದಲ್ಲಿ ಹುಲಿ ಚಲನವಲನ ವೀಕ್ಷಣೆಗೆ ಕ್ಯಾಮೆರಾ ಟ್ರ್ಯಾಪಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈಗಾಗಲೇ ೮೪೮ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅಳವಡಿಸಿ ನಿಗಾವಹಿಸಿದೆ. ಉದ್ಯಮಿ ನೀಡಿದ ಕ್ಯಾಮೆರಾವನ್ನು ಹುಲಿ ಯೋಜನೆಗೆ ಬಳಸಿಕೊಂಡು ಅರಣ್ಯದಂಚಿನ ಗ್ರಾಮಗಳಲ್ಲಿ ಜನ-ಜಾನುವಾರುಗಳ ಸುರಕ್ಷತೆಗೆ ಸಹಕಾರವಾಗಲಿದೆ ಎಂದರು.
ಬೇಸಿಗೆಯಲ್ಲಿ ಅರಣ್ಯದಲ್ಲಿ ಕೊಳವೆ ಬಾವಿಯಿಂದ ಕೆರೆಗಳಿಗೆ ನೀರು ಹರಿಸಲು ಈ ಹಿಂದೆ ಡಿಸಿಎಫ್ ದಿ.ಮಣಿಕಂದನ್ ಸೋಲಾರ್ ಪಂಪ್ಸೆಟ್ ಅಳವಡಿಸಿ ಕೆರೆಗೆ ನೀರು ಸೇರಿಸುವ ಪ್ರಯತ್ನ ಯಶಸ್ವಿಯಾಗಿ ಅರಣ್ಯದಲ್ಲಿ ಹಲವು ಸ್ಥಳದಲ್ಲಿ ಕಾರ್ಯನಿರ್ವಹಿಸಿದೆ. ಅದೇ ಮಾದರಿಯಲ್ಲಿ ಉದ್ಯಮಿ ಟೈಗರ್ ರಮೇಶ್ ಸೋಲಾರ್ ಪಂಪ್ಸೆಟ್ ನೀಡಿದ್ದಾರೆ ಎಂದರು.
ಕ್ಯಾಮೆರಾ ಹಸ್ತಾಂತರ ಸಮಯದಲ್ಲಿ ಕಂಪೆನಿಯ ಗೋವಿಂದನ್ ತಿರುಮಲೈ, ಪರಮೇಶ್ ಮೂರ್ತಿ, ಕೊಯಮತ್ತೂರಿನ ಹರಿಸಾಂತರಾಮ್, ಅಂತರಸಂತೆ ವಲಯದ ವಲಯ ಅರಣ್ಯಾಧಿಕಾರಿ ಸಿದ್ದರಾಜು, ಪಶುವೈದ್ಯಾಧಿಕಾರಿ ಡಾ.ರಮೇಶ್, ಕಚೇರಿ ವ್ಯವಸ್ಥಾಪಕ ರಘು, ಮಂಜು, ಗೋಪಿ, ಇತರರು ಹಾಜರಿದ್ದರು.
ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು…
ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…
ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್.11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ…
ಸುಂಟಿಕೊಪ್ಪ: ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಅತಂಕ ಮೂಡಿಸಿದ ಘಟನೆಯೊಂದು ವರದಿಯಾಗಿದೆ. ಕಾಡಾನೆಯೊಂದು…
ವಯನಾಡು: ವಯನಾಡ್ ಭೂಕುಸಿತ ಸ್ಥಳದಲ್ಲಿ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿದೆ…
ಬೀಜಿಂಗ್: ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.…