ಹುಣಸೂರು : ಅಖಿಲ ಭಾರತ ಹುಲಿ ಗಣತಿಗಾಗಿ ಮ್ಯಾಗ್ನಾ ಸಾಫ್ಟ್ವೇರ್ ಕಂಪೆನಿಯ ನವೋದಯ ಫೌಂಡೇಷನ್ವತಿಯಿಂದ ೨೦೦ ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಸಿಇಒ ಟೈಗರ್ ರಮೇಶ್ ಅವರು ನಾಗರಹೊಳೆ ಉದ್ಯಾನದ ಹುಣಸೂರು ವಿಭಾಗ ಕಚೇರಿಗೆ ಕೊಡುಗೆಯಾಗಿ ನೀಡಿದರು.
ಹುಣಸೂರು ಹುಲಿ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಉದ್ಯಮಿಯಿಂದ ಕ್ಯಾಮೆರಾ ಸ್ವೀಕರಿಸಿ ಮಾತನಾಡಿದ ಡಿಸಿಎಫ್ ಸೀಮಾ ಅವರು, ಪರಿಸರ ಸಂರಕ್ಷಣೆ ಕಾಳಜಿ ಹೊಂದಿರುವ ಮ್ಯಾಗ್ನಾ ಸಾಫ್ಟ್ವೇರ್ ಕಂಪೆನಿ ನಿರಂತರವಾಗಿ ನಾಗರಹೊಳೆ ಅರಣ್ಯ ಸಂರಕ್ಷಣೆಗೆ ಸಿಎಸ್ಆರ್ ಅನುದಾನದಿಂದ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಇವರ ಪರಿಸರ ಕಾಳಜಿಗೆ ಇಲಾಖೆ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಅರಣ್ಯದಲ್ಲಿ ಹುಲಿ ಚಲನವಲನ ವೀಕ್ಷಣೆಗೆ ಕ್ಯಾಮೆರಾ ಟ್ರ್ಯಾಪಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈಗಾಗಲೇ ೮೪೮ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅಳವಡಿಸಿ ನಿಗಾವಹಿಸಿದೆ. ಉದ್ಯಮಿ ನೀಡಿದ ಕ್ಯಾಮೆರಾವನ್ನು ಹುಲಿ ಯೋಜನೆಗೆ ಬಳಸಿಕೊಂಡು ಅರಣ್ಯದಂಚಿನ ಗ್ರಾಮಗಳಲ್ಲಿ ಜನ-ಜಾನುವಾರುಗಳ ಸುರಕ್ಷತೆಗೆ ಸಹಕಾರವಾಗಲಿದೆ ಎಂದರು.
ಬೇಸಿಗೆಯಲ್ಲಿ ಅರಣ್ಯದಲ್ಲಿ ಕೊಳವೆ ಬಾವಿಯಿಂದ ಕೆರೆಗಳಿಗೆ ನೀರು ಹರಿಸಲು ಈ ಹಿಂದೆ ಡಿಸಿಎಫ್ ದಿ.ಮಣಿಕಂದನ್ ಸೋಲಾರ್ ಪಂಪ್ಸೆಟ್ ಅಳವಡಿಸಿ ಕೆರೆಗೆ ನೀರು ಸೇರಿಸುವ ಪ್ರಯತ್ನ ಯಶಸ್ವಿಯಾಗಿ ಅರಣ್ಯದಲ್ಲಿ ಹಲವು ಸ್ಥಳದಲ್ಲಿ ಕಾರ್ಯನಿರ್ವಹಿಸಿದೆ. ಅದೇ ಮಾದರಿಯಲ್ಲಿ ಉದ್ಯಮಿ ಟೈಗರ್ ರಮೇಶ್ ಸೋಲಾರ್ ಪಂಪ್ಸೆಟ್ ನೀಡಿದ್ದಾರೆ ಎಂದರು.
ಕ್ಯಾಮೆರಾ ಹಸ್ತಾಂತರ ಸಮಯದಲ್ಲಿ ಕಂಪೆನಿಯ ಗೋವಿಂದನ್ ತಿರುಮಲೈ, ಪರಮೇಶ್ ಮೂರ್ತಿ, ಕೊಯಮತ್ತೂರಿನ ಹರಿಸಾಂತರಾಮ್, ಅಂತರಸಂತೆ ವಲಯದ ವಲಯ ಅರಣ್ಯಾಧಿಕಾರಿ ಸಿದ್ದರಾಜು, ಪಶುವೈದ್ಯಾಧಿಕಾರಿ ಡಾ.ರಮೇಶ್, ಕಚೇರಿ ವ್ಯವಸ್ಥಾಪಕ ರಘು, ಮಂಜು, ಗೋಪಿ, ಇತರರು ಹಾಜರಿದ್ದರು.
ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ನ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…
ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್…
ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಬಿಗ್ ಶಾಕ್ ಎಂಬಂತೆ ರಾಜ್ಯ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.…
ಕೊಡಗು: ಶನಿವಾರಸಂತೆಯಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ನಾಳೆ ಕೊಡಗಿನ ಕೆಲ ಪ್ರದೇಶಗಳಲ್ಲಿ…
ನವದೆಹಲಿ: ಇಂಡಿಗೋ ವಿಮಾನಯಾ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ನಡುವೆ ಕಾನೂನು ಮತ್ತು ನಿಯಮಗಳು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರ…