ಮೈಸೂರು

ಮೊದಿ,ಅಮಿತ್‌ ಶಾ ಅಪ್ಪುಗೆಗಿಂತ ಅಚ್ಚೇ ದಿನ್ ಬೇಕಿಲ್ಲ : ಶಾಸಕ ಎಸ್.ಎ ರಾಮದಾಸ್

ಮೈಸೂರು‌ : ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಭೇಟಿ ನೀಡಿದ ವೇಳೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಗುದ್ದು ನೀಡಿದ್ದರು. ಇದೀಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮೈಸೂರಿಗೆ ಭೇಟಿ ನೀಡಿದ್ದರು. ಸ್ವಾಗತಿಸಲು ಶಾಸಕ ರಾಮದಾಸ್ ಅವರು​ ತೆರಳಿದ್ದರು. ಈ ವೇಳೆ ಅಮಿತ್​ ಶಾ ಅವರು ರಾಮದಾಸ್​ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮ್‌ ದಾಸ್‌ ನಮ್ಮದು ಕೌಟುಂಬಿಕ ಸಂಬಧ ಈ ಹಿಂದೆ ಕೂಡ ಮೊದಿಯವರು ಮೈಸೂರಿಗೆ ಬಂದಾಗ  ನನ್ನ ಕಿವಿ ಹಿಂಡಿ ಅಪ್ಪುಗೆ ಕೊಟ್ಟು ಒಂದು ಗುದ್ದನ್ನ ಗುದ್ದಿ ಪ್ರೀತಿಯನ್ನ ವ್ಯಕ್ತಪಡಿಸಿದ್ದರು.ನಾನು ಇಂದಿಗೂ ಅವರಿಗೆ ಆಭಾರಿಯಾಗಿದ್ದೇನೆ. ಇವತ್ತು ಅಮಿತ್‌ ಶಾ ಅವರನ್ನ ಬರಮಾಡಿಕೊಳ್ಳಲು ಹೋಗಿದ್ದಾಗ ಅವರು ರಾಮ್‌ ದಾಸ್‌ ಜಿ ಎಂದು ಪ್ರೀತಿಯಿಂದ ಅಪ್ಪುಗೆ ನೀಡಿದರು‌ ಒಂದಷ್ಟು ದೂರ ಅವರ ಜೊತೆಯಲ್ಲಿಯೇ ಹೆಜ್ಜೆ ಹಾಕಿದೆ. ನಂತರ ಅವರ ಜೊತೆಯಲ್ಲಿಯೇ ಕಾರಿನಲ್ಲಿ ಬಂದು ಚಾಮುಂಡಿ ತಾಯಿಯ ದರ್ಶನ ಪಡೆಯುವ ಭಾಗ್ಯವನ್ನ ತಾಯಿ ಕರುಣಿಸಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇದಕ್ಕಿಂತ ಅಚ್ಚೇ ದಿನ್‌ ಬೇಕಿಲ್ಲ : ಮೋದಿ ಜಿ ನನ್ನ ಕಿವಿ ಹಿಂಡಿದ ದಿನವೇ ನನಗೆ ಅಚ್ಚೇ ದಿನ್ ಇವತ್ತು ಅಮಿತ್‌ ಶಾ ಅವರು ನರೇಂದ್ರ ಮೋದಿಯವರ ರೀತಿಯೇ ಪ್ರೀತಿಯ ಅಪ್ಪುಗೆಯನ್ನ ಕೊಟ್ಟು ಜೊತೆಯಲ್ಲಿಯೇ ತಾಯಿಯ ದರ್ಶನಕ್ಕೆ ಕರೆದುಕೊಂಡು ಬಂದರಲ್ಲ ಇದೇ ನನಗೆ ಅಚ್ಚೇ ದಿನ್‌ ಇದಕ್ಕಿಂತ ದೊಡ್ಡ ಅಚ್ಚೇ ದಿನವನ್ನ ನಾನು ಬಯಸೋದಿಲ್ಲ ಎಂದರು

lokesh

Recent Posts

ಬೆಳ್ಳಂಬೆಳಗ್ಗೆ JCB ಘರ್ಜನೆ ; ಸರ್ಕಾರಿ ಜಾಗ ಅಕ್ರಮ ತೆರವು

ಮೈಸೂರು : ಮೈಸೂರು ನಗರದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ ಕೇಳಿ ಬಂದಿದ್ದು, ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಸರ್ಕಾರದ…

19 mins ago

ಡ್ರಗ್ಸ್‌ ಹಾವಳಿ ನಿಯಂತ್ರಣದಲ್ಲಿ ಸಿಸಿಬಿ ವೈಫಲ್ಯ ; ಕಮಿಷನರ್ ಸೀಮಾ ಲಾಟ್ಕರ್ ಸಿಬ್ಬಂದಿಗೆ ಬಿಗ್ ಶಾಕ್!

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿಗೆ ಮಾದಕ ವಸ್ತುಗಳ (ಡ್ರಗ್ಸ್) ತಯಾರಿಕೆ ಮತ್ತು ಮಾರಾಟದ ಜಾಲಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ…

1 hour ago

ಹೊತ್ತಿ ಉರಿದ ಖಾಸಗಿ ಬಸ್‌ : ಸಂಪೂರ್ಣ ಕರಕಲು ; 40 ಪ್ರಯಾಣಿಕರು ಬಚಾವ್‌

ಬೆಂಗಳೂರು : ನೆಲಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಂಗಳೂರಿನಿಂದ ಯಾದಗಿರಿ ಕಡೆಗೆ ಹೊರಟಿದ್ದ ಖಾಸಗಿ ನಾನ್-ಎಸಿ ಸ್ಲೀಪರ್ ಬಸ್‌ವೊಂದು…

2 hours ago

ಓದುಗರ ಪತ್ರ: ಯುಜಿಡಿ ಕೇಬಲ್; ಸೆಸ್ಕ್ ನಿರ್ಲಕ್ಷ್ಯ

ಯುಜಿಡಿ ಕೇಬಲ್; ಸೆಸ್ಕ್ ನಿರ್ಲಕ್ಷ್ಯ ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ನಿಗಮ (ಸೆಸ್ಕ್)ನಿಂದ ಅಂಡರ್ ಗ್ರೌಂಡ್ ಕೇಬಲ್…

6 hours ago

ಓದುಗರ ಪತ್ರ: ನ್ಯಾಯಾಂಗ ಬಡಾವಣೆಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಜರಾಜೇಶ್ವರಿ ನಗರದ ಬಳಿಯ ನ್ಯಾಯಾಂಗ ಬಡಾವಣೆಯಲ್ಲಿ ಐದಕ್ಕೂ ಹೆಚ್ಚು ಸರ್ಕಾರಿ ವಸತಿನಿಲಯಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಾಕಷ್ಟು ನಗರ…

6 hours ago

ಓದುಗರ ಪತ್ರ: ಮಹಾರಾಣಿ ಕಾಲೇಜು ಆವರಣದಲ್ಲಿನ ಕಸ ತೆರವುಗೊಳಿಸಿ

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲೇಟ್, ಚೀಲಗಳು ಹಾಗೂ ಮರದ ಎಲೆಗಳು ತುಂಬಿದ್ದು, ಅನೈರ್ಮಲ್ಯದ…

6 hours ago