ಮೈಸೂರು: ನಾಡಹಬ್ಬ ದಸರೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಇಂದು ನಗರ ಸಶಸ್ತ್ರ ಮೀಸಲು ಪಡೆ (City armed reserve police force) ಪೊಲೀಸರು ಆನೆಗಳ ಸಮ್ಮುಖದಲ್ಲಿ ಫಿರಂಗಿ ಸಿಡಿಸಿ ತಾಲೀಮು (Cannon firing rehearsal) ನಡೆಸಿದರು. 14 ಆನೆಗಳು ಮತ್ತು 43 ಅಶ್ವಗಳು ತಾಲೀಮಿನಲ್ಲಿ ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ದಸರೆ ಗಜೆ ಪಡೆಗೆ ಸೇರಿರುವ 18 ವರ್ಷದ ಕಿರಿಯ ಆನೆ ಪಾರ್ಥಸಾರಥಿ ಫಿರಂಗಿ ಸಿಡಿದಾಗ ಬೆಚ್ಚಿ ಹಿಂದಕ್ಕೆ ಸರಿದ. ಆತನನ್ನು ಮಾವುತರು ನಿಯಂತ್ರಣಕ್ಕೆ ತಂದರು. ಇದೇ ರೀತಿ ಮೊದಲ ಬಾರಿ ದಸರೆ ತಂಡಕ್ಕೆ ಸೇರಿಕೊಂಡಿರುವ ಶ್ರೀ ರಾಮ, ಸುಗ್ರೀವ ಹೆಸರಿನ ಆನೆಗಳೂ ಸ್ವಲ್ಪ ಮಟ್ಟಿಗೆ ಭಯಗೊಂಡವು. ಭೀಮ ಮತ್ತು ತಂಡದ ಹಿರಿಯ ಸದಸ್ಯೆಯಾಗಿರುವ ವಿಜಯಾ ಕೂಡ ಬೆದರಿದಂತೆ ಕಂಡು ಬಂದವು. ಈ ನಡುವೆ ತಾಲೀಮಿಗೆ ಮುನ್ನವೇ ಎರ್ಟನ್ ಬೋಲ್ಟ್ ಹೆಸರಿನ ಕುದುರೆಯೊಂದು ಗದ್ದಲ ಎಬ್ಬಿಸಿತು. ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದಿದ್ದಾಗ ತಾಲೀಮು ತಂಡದಿಂದ ಹೊರಗೆ ಕಳುಹಿಸಲಾಯಿತು. ಅನುಭವಿ ಆನೆಗಳಾದ ದಸರೆ ಪಡೆಯ ಮಾಜಿ ನಾಯಕ ಅರ್ಜುನ ಮತ್ತು ಹಾಲಿ ನಾಯಕ ಅಭಿಮನ್ಯು ಸೇರಿದಂತೆ ಈ ಹಿಂದೆ ದಸರೆ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಇತರ ಆನೆಗಳು ಯಾವುದೇ ಅಳುಕು ತೋರಿಸದೆ ತಾಲೀಮಿನಲ್ಲಿ ಪಾಲ್ಗೊಂಡವು. ಮೂರು ಸುತ್ತಿನಲ್ಲಿ 21 ಫಿರಂಗಿ ಸಿಡಿಸಲಾಯಿತು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಡಿಸಿಎಫ್ ಡಾ. ವಿ. ಕರಿಕಾಳನ್, ಡಿಸಿಪಿ ಪ್ರದೀಪ್ ಗುಂಟಿ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆ ಕೊರತೆ ಮುಂದುವರಿದಿದ್ದು, ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಾರಿ ಮುಂಗಾರು ಕೊರತೆ…
ಸೋಮವಾರಪೇಟೆ: ತಾಲೂಕಿನ ಮಾದಾಪುರ ಹೋಬಳಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೌಟುಂಬಿಕ ಕಲಹ ಶಂಕೆಯಡಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಕನ್ನಿಕಂಡ…
ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಇದ್ದ ಓಂ ಪ್ರಕಾಶ್ ರಾವ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅಪಘಾತವೊಂದರಲ್ಲಿ ಓಂ ಪ್ರಕಾಶ್…
ನವದೆಹಲಿ: 2,000 ರೂ. ವರೆಗೆ ನಡೆಯುವ ಎಲ್ಲಾ UPI ವಹಿವಾಟುಗಳಿಗೆ ಶುಲ್ಕವಿಲ್ಲ. ಅಷ್ಟೇ ಅಲ್ಲ, RuPay ಡೆಬಿಟ್ ಕಾರ್ಡ್ ಮೂಲಕ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…
ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…