ಮೈಸೂರು ಭಾಗದ ನಾಲ್ಕು ಒಕ್ಕೂಟಗಳಿಂದ ಮಾಹಿತಿ ರವಾನೆ:ಸರ್ಕಾರದಿಂದಲೇ ೧೦೦ ಕೋಟಿ. ರೂ.ವರೆಗೂ ಬಾಕಿ
ಮೈಸೂರು: ರಾಜ್ಯದಲ್ಲಿ ಹಾಲು ಮಾರಾಟದ ದರ ಏರಿಕೆಯಾಗಿ ರೈತರ ಪಾಲು ಹೆಚ್ಚಳದ ಖುಷಿ ಒಂದು ಕಡೆಯಾದರೂ ರೈತರಿಗೆ ಬರಬೇಕಾಗಿರುವ ೫ ರೂ. ಪ್ರೋತ್ಸಾಹಧನದ ಹಾಲಿನ ಬಾಕಿ ಇನ್ನೂ ಬಿಡುಗಡೆಯಾಗಬೇಕಿದೆ. ಏಕೆಂದರೆ ರೈತರಿಗೆ ಸೆಪ್ಟಂಬರ್ ತಿಂಗಳಿನಿಂದಲೇ ಸರ್ಕಾರದ ಪಾಲು ಬಿಡುಗಡೆಯಾಗದೇ ಇರುವುದರಿಂದ ಅತ್ತ ಕಡೆಯೇ ಒಕ್ಕೂಟಗಳು ಮುಖ ಮಾಡಿ ಕುಳಿತಿವೆ.
ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಾಲು ಉತ್ಪಾದಕರಿಗೆ ಮೈಮುಲ್ನಿಂದ ಕೊಡುತ್ತಿರುವ ೩೨ ರೂ. ಸಾಕಾಗದಿರುವ ಕಾರಣ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ೫ ರೂ. ಪ್ರೋತ್ಸಾಹಧನಕ್ಕಾಗಿ ಕಾದು ಕುಳಿತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ನಂತರ ಅತೀ ಹೆಚ್ಚು ಹೈನುಗಾರಿಕೆಯನ್ನೇ ನಂಬಿರುವ ಹಾಲು ಉತ್ಪಾದಕರು ಬ್ಯಾಂಕ್, ಕೈ ಸಾಲ-ಸೋಲ ಮಾಡಿ ಹಸುಗಳನ್ನು ಖರೀದಿಸಿ ಸಾಕುವ ಮೂಲಕ ಡೇರಿಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಷ್ಟು ಆರ್ಥಿಕ ಚೇತರಿಕೆ ಕಂಡು ನೆಮ್ಮದಿಯಿಂದ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ಹೀಗಿದ್ದರೂ, ಸರ್ಕಾರ ಪ್ರೋತ್ಸಾಹಧನವನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದರಿಂದ ಹೈನುಗಾರರಿಗೆ ದೊಡ್ಡ ಹೊಡೆತ ಬಿದ್ದಿದೆ.
ಕರ್ನಾಟಕದಲ್ಲಿ ೧೬ ಹಾಲು ಒಕ್ಕೂಟಗಳಿದ್ದು, ೨೫ ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ನಿತ್ಯ ೮೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಿನದ ಹಾಲಿನ ವಹಿವಾಟಿನ ಪ್ರಮಾಣವೇ ೩೦ ಕೋಟಿ ರೂ.ವರೆಗೂ ಆಗುತ್ತದೆ. ಇದರಲ್ಲಿ ರೈತರಿಗೆ ಪ್ರತಿ ಲೀಟರ್ಗೆ ೫ ರೂ. ನೀಡುತ್ತಾ ಬರುತ್ತಿದೆ. ಇದು ಆರೇಳು ವರ್ಷದಿಂದ ಏರಿಕೆಯಾಗಿಲ್ಲ. ಈಗಾಗಲೇ ಸೆಪ್ಟಂಬರ್ ಹಾಗೂ ಅಕ್ಟೋಬರ್ ಮಾಹಿತಿ ಸರ್ಕಾರಕ್ಕೆ ಹೋಗಿದ್ದು, ನವೆಂಬರ್ ಮಾಹಿತಿಯನ್ನೂ ಕಳುಹಿಸಲಾಗುತ್ತಿದೆ. ಈ ಮೂರು ತಿಂಗಳ ಬಾಕಿ ಬಿಡುಗಡೆಯಾಗಬೇಕಾಗಿದೆ.
ಮೈಸೂರು ಭಾಗದಲ್ಲಿಯೇ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಒಳಗೊಂಡಂತೆ ಹಾಸನ ಹಾಲು ಒಕ್ಕೂಟಗಳೂ ಹಾಲು ಸಂಗ್ರಹದಲ್ಲಿ ಅತ್ಯುತ್ತಮ ಸಾಧನೆ ಮಾಡಿವೆ. ಕೋವಿಡ್ ನಂತರ ಹಾಲು ಉತ್ಪಾದನೆ ಪ್ರಮಾಣ ಸಹಜ ಸ್ಥಿತಿ ಬಂದಿದೆ. ಆದರೆ ಪ್ರೋತ್ಸಾಹ ಧನ ವಿತರಣೆಯಲ್ಲಿ ಮಾತ್ರ ಸರ್ಕಾರವನ್ನೇ ಕಾಯಬೇಕಾಗಿರುವುದರಿಂದ ಕನಿಷ್ಠ ಮೂರು ತಿಂಗಳಾದರೂ ವಿಳಂಬವಾಗುತ್ತಿದೆ. ಮೈಸೂರು ಭಾಗದಲ್ಲಿಯೇ ಅಂದಾಜು ೯೦ರಿಂದ ೧೦೦ ಕೋಟಿ ರೂ.ಗಳಷ್ಟು ಎನ್ನುವುದು ಒಕ್ಕೂಟಗಳ ವಿವರಣೆ.
ಮೈಸೂರು
ಸಂಘಗಳು- ೧೧೫೬
ನಿತ್ಯ ಹಾಲು ಪ್ರಮಾಣ- ೬.೫೦ ಲಕ್ಷ ಲೀ
ಸದಸ್ಯರು- ೯೬ ಸಾವಿರ
ದರ- ೩೨ ರೂ.
ಬಾಕಿ- ೩೦ ಕೋಟಿ ರೂ.
ಮಂಡ್ಯ
ಸಂಘಗಳು-೧೨೭೪
ಹಾಲು ಪ್ರಮಾಣ- ೯ ಲಕ್ಷ ಲೀ
ಸದಸ್ಯರು- ೧,೦೨,೦೦೦
ದರ- ೩೨ ರೂ.
ಬಾಕಿ- ೩೫ ಕೋಟಿ ರೂ.
ಚಾಮರಾಜನಗರ
ಸಂಘಗಳು-೪೬೫
ಹಾಲು ಪ್ರಮಾಣ- ೨.೧೦ ಲಕ್ಷ ಲೀ.
ಸದಸ್ಯರು-೩೨ ಸಾವಿರ
ದರ- ೩೨ ರೂ.
ಬಾಕಿ- ೨.೮ ಕೋಟಿ ರೂ.
ಕೊಡಗು
ಸಂಘಗಳು- ೩೮
ಹಾಲು ಪ್ರಮಾಣ-
ಸದಸ್ಯರು-೨೭೦೦
ದರ- ೩೨ ರೂ.
ಬಾಕಿ-
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…
ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ…
ಮೈಸೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಾದಾಟ ತೀವ್ರಗೊಳ್ಳುತ್ತಿದ್ದಂತೆ, ಅಹಿಂದ ಸಮಾವೇಶದ ಹೆಸರಿನಲ್ಲಿ ಭಾರೀ ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಮುಖ್ಯಮಂತ್ರಿ…