ಜಿಲ್ಲೆಗಳು

ಹಾಲು : ಸಿಗದ ಪ್ರೋತ್ಸಾಹಧನ

ಮೈಸೂರು ಭಾಗದ ನಾಲ್ಕು ಒಕ್ಕೂಟಗಳಿಂದ ಮಾಹಿತಿ ರವಾನೆ:ಸರ್ಕಾರದಿಂದಲೇ ೧೦೦ ಕೋಟಿ. ರೂ.ವರೆಗೂ ಬಾಕಿ

ಮೈಸೂರು: ರಾಜ್ಯದಲ್ಲಿ ಹಾಲು ಮಾರಾಟದ ದರ ಏರಿಕೆಯಾಗಿ ರೈತರ ಪಾಲು ಹೆಚ್ಚಳದ ಖುಷಿ ಒಂದು ಕಡೆಯಾದರೂ ರೈತರಿಗೆ ಬರಬೇಕಾಗಿರುವ ೫ ರೂ. ಪ್ರೋತ್ಸಾಹಧನದ ಹಾಲಿನ ಬಾಕಿ ಇನ್ನೂ ಬಿಡುಗಡೆಯಾಗಬೇಕಿದೆ. ಏಕೆಂದರೆ ರೈತರಿಗೆ ಸೆಪ್ಟಂಬರ್ ತಿಂಗಳಿನಿಂದಲೇ ಸರ್ಕಾರದ ಪಾಲು ಬಿಡುಗಡೆಯಾಗದೇ ಇರುವುದರಿಂದ ಅತ್ತ ಕಡೆಯೇ ಒಕ್ಕೂಟಗಳು ಮುಖ ಮಾಡಿ ಕುಳಿತಿವೆ.

ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಾಲು ಉತ್ಪಾದಕರಿಗೆ ಮೈಮುಲ್‌ನಿಂದ ಕೊಡುತ್ತಿರುವ ೩೨ ರೂ. ಸಾಕಾಗದಿರುವ ಕಾರಣ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ೫ ರೂ. ಪ್ರೋತ್ಸಾಹಧನಕ್ಕಾಗಿ ಕಾದು ಕುಳಿತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ನಂತರ ಅತೀ ಹೆಚ್ಚು ಹೈನುಗಾರಿಕೆಯನ್ನೇ ನಂಬಿರುವ ಹಾಲು ಉತ್ಪಾದಕರು ಬ್ಯಾಂಕ್, ಕೈ ಸಾಲ-ಸೋಲ ಮಾಡಿ ಹಸುಗಳನ್ನು ಖರೀದಿಸಿ ಸಾಕುವ ಮೂಲಕ ಡೇರಿಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಷ್ಟು ಆರ್ಥಿಕ ಚೇತರಿಕೆ ಕಂಡು ನೆಮ್ಮದಿಯಿಂದ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ಹೀಗಿದ್ದರೂ, ಸರ್ಕಾರ ಪ್ರೋತ್ಸಾಹಧನವನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದರಿಂದ ಹೈನುಗಾರರಿಗೆ ದೊಡ್ಡ ಹೊಡೆತ ಬಿದ್ದಿದೆ.

ಕರ್ನಾಟಕದಲ್ಲಿ ೧೬ ಹಾಲು ಒಕ್ಕೂಟಗಳಿದ್ದು, ೨೫ ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ನಿತ್ಯ ೮೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಿನದ ಹಾಲಿನ ವಹಿವಾಟಿನ ಪ್ರಮಾಣವೇ ೩೦ ಕೋಟಿ ರೂ.ವರೆಗೂ ಆಗುತ್ತದೆ. ಇದರಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ ೫ ರೂ. ನೀಡುತ್ತಾ ಬರುತ್ತಿದೆ. ಇದು ಆರೇಳು ವರ್ಷದಿಂದ ಏರಿಕೆಯಾಗಿಲ್ಲ. ಈಗಾಗಲೇ ಸೆಪ್ಟಂಬರ್ ಹಾಗೂ ಅಕ್ಟೋಬರ್ ಮಾಹಿತಿ ಸರ್ಕಾರಕ್ಕೆ ಹೋಗಿದ್ದು, ನವೆಂಬರ್ ಮಾಹಿತಿಯನ್ನೂ ಕಳುಹಿಸಲಾಗುತ್ತಿದೆ. ಈ ಮೂರು ತಿಂಗಳ ಬಾಕಿ ಬಿಡುಗಡೆಯಾಗಬೇಕಾಗಿದೆ.

ಮೈಸೂರು ಭಾಗದಲ್ಲಿಯೇ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಒಳಗೊಂಡಂತೆ ಹಾಸನ ಹಾಲು ಒಕ್ಕೂಟಗಳೂ ಹಾಲು ಸಂಗ್ರಹದಲ್ಲಿ ಅತ್ಯುತ್ತಮ ಸಾಧನೆ ಮಾಡಿವೆ. ಕೋವಿಡ್ ನಂತರ ಹಾಲು ಉತ್ಪಾದನೆ ಪ್ರಮಾಣ ಸಹಜ ಸ್ಥಿತಿ ಬಂದಿದೆ. ಆದರೆ ಪ್ರೋತ್ಸಾಹ ಧನ ವಿತರಣೆಯಲ್ಲಿ ಮಾತ್ರ ಸರ್ಕಾರವನ್ನೇ ಕಾಯಬೇಕಾಗಿರುವುದರಿಂದ ಕನಿಷ್ಠ ಮೂರು ತಿಂಗಳಾದರೂ ವಿಳಂಬವಾಗುತ್ತಿದೆ. ಮೈಸೂರು ಭಾಗದಲ್ಲಿಯೇ ಅಂದಾಜು ೯೦ರಿಂದ ೧೦೦ ಕೋಟಿ ರೂ.ಗಳಷ್ಟು ಎನ್ನುವುದು ಒಕ್ಕೂಟಗಳ ವಿವರಣೆ.

ಮೈಸೂರು

ಸಂಘಗಳು- ೧೧೫೬

ನಿತ್ಯ ಹಾಲು ಪ್ರಮಾಣ- ೬.೫೦ ಲಕ್ಷ ಲೀ

ಸದಸ್ಯರು- ೯೬ ಸಾವಿರ

ದರ- ೩೨ ರೂ.

ಬಾಕಿ- ೩೦ ಕೋಟಿ ರೂ.


ಮಂಡ್ಯ 

ಸಂಘಗಳು-೧೨೭೪

ಹಾಲು ಪ್ರಮಾಣ- ೯ ಲಕ್ಷ ಲೀ

ಸದಸ್ಯರು- ೧,೦೨,೦೦೦

ದರ- ೩೨ ರೂ.

ಬಾಕಿ- ೩೫ ಕೋಟಿ ರೂ.


 

ಚಾಮರಾಜನಗರ

ಸಂಘಗಳು-೪೬೫

ಹಾಲು ಪ್ರಮಾಣ- ೨.೧೦ ಲಕ್ಷ ಲೀ.

ಸದಸ್ಯರು-೩೨ ಸಾವಿರ

ದರ- ೩೨ ರೂ.

ಬಾಕಿ- ೨.೮ ಕೋಟಿ ರೂ.


 

ಕೊಡಗು

ಸಂಘಗಳು- ೩೮

ಹಾಲು ಪ್ರಮಾಣ-

ಸದಸ್ಯರು-೨೭೦೦

ದರ- ೩೨ ರೂ.

ಬಾಕಿ-

 

 

andolanait

Recent Posts

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

27 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

1 hour ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

4 hours ago