ಜಿಲ್ಲೆಗಳು

ದಸರೆ ಆಹಾರ ಮೇಳದಲ್ಲಿ ಬಿರಿಯಾನಿ ಸ್ಪೆಶಲ್‌!

ಸಂಗೀತ ಸಂಜೆಯ ಜತೆ ಹೊಟ್ಟೆ ತಣಿಸಲಿವೆ ಬಗೆಬಗೆಯ ಆಹಾರ

ಮೈಸೂರು: ಎರಡು ವರ್ಷಗಳ ನಂತರ ಅದ್ದೂರಿ ದಸರಾ ಆಚರಿಸಲು ಮೈಸೂರು ಸಜ್ಜಾಗಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ನಾನಾ ಬಗೆಯ ಆಹಾರ ಖಾದ್ಯಗಳನ್ನು ಸವಿಯಲು ಮೈಸೂರು ಮತ್ತು ದಸರೆ ವೇಳೆಯಲ್ಲಿ ಭೇಟಿ ನೀಡುವ ಪ್ರವಾಸಿಗರು ಕಾತರರಾಗಿದ್ದಾರೆ.
ದಸರಾ ಮಹೋತ್ಸವ ಪ್ರಯುಕ್ತ ಭಾರತ್ ಸ್ಕೌಟ್ಸ್ ‍ ಅಂಡ್ ಗೈಡ್ಸ್ ಮೈದಾನದಲ್ಲಿ ಈ ಬಾರಿಯೂ ಭರ್ಜರಿ ಭಕ್ಷ್ಯ ಭೋಜನ ಉಣಬಡಿಸಲು ಆಹಾರ ಮೇಳ ಉಪ ಸಮಿತಿ ಸರ್ವ ಸನ್ನದ್ಧವಾಗಿದೆ. ಈ ಬಾರಿ ನಾನಾ ಬಗೆಯ ಬಿರಿಯಾನಿಗಳನ್ನು ಪರಿಚಯಿಸಲು ಸಮಿತಿ ನಿರ್ಧರಿಸಿದೆ. ಪ್ರತೀ ವರ್ಷದಂತೆ ಈ ಸಲವೂ ಬೊಂಬು ಬಿರಿಯಾನಿ ಜತೆಗೆ ಮಡಿಕೆ ಬಿರಿಯಾನಿ ಮಾಂಸಾಹಾರಿ ಪ್ರಿಯರನ್ನು ಸೆಳೆಯಲಿದೆ. ಹಾಡಿಯ ಮಂದಿ ಕಾಡಿನಲ್ಲಿ ದೊರೆಯುವ ಬಿದಿರು ಬೊಂಬಿನಲ್ಲಿ ಬಿರಿಯಾನಿ ಮಾಡಿ ಉಣಬಡಿಸುತ್ತಿದ್ದರು. ಈ ಬಾರಿ ಮಣ್ಣಿನ ಮಡಿಕೆಯಲ್ಲಿ ತಯಾರಿಸುವ ಮಟನ್ ಬಿರಿಯಾನಿಯನ್ನು ತಯಾರಿಸಿ ರುಚಿ ತೋರಿಸಲಿದ್ದಾರೆ.

ಈಗಾಗಲೇ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ಮೈದಾನದ ಅಲದ ಮರ ಬಳಿ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನುರಿತ ಬಾಣಸಿಗರು ಮಾಂಸಪ್ರಿಯರ ಬೇಡಿಕೆಗೆ ತಕ್ಕಂತೆ ಬಿರಿಯಾನಿ ತಯಾರಿಸಲು ಆಗಮಿಸಿರುವುದು ವಿಶೇಷವಾಗಿದೆ. ಇತರ ಜತೆಗೆ ಉತ್ತರಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಖಾದ್ಯಗಳು, ಆಂಧ್ರ ಮತ್ತು ತೆಲಂಗಾಣದ ತಿನಿಸುಗಳೂ, ಉತ್ತರಭಾರತದ ವಿಶೇಷ ಖಾದ್ಯಗಳು, ಚೈನಿಸ್ ಮತ್ತು ಕಾಂಟಿನೆಂಟಲ್ ಫುಡ್, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖಾದ್ಯಗಳು ದೊರೆಯಲಿವೆ.
ತಿಂಡಿ ಸವಿಯುವ ಜತೆಗೆ ಒಂದಿಷ್ಟು ಮಜಾ ಜೊತೆಗೆ ಮನರಂಜನೆಯು ದೊರೆಯಲಿವೆ. ಅಡುಗೆ ಮಾಡುವ ಸ್ಪರ್ಧೆ, ಹಾಸ್ಯಭರಿತ ಸ್ಪರ್ಧೆಗಳು, ತಿನ್ನುವ ಸ್ಪರ್ಧೆಗಳು ನಡೆದರೆ, ಸಂಜೆ ಹಾಸ್ಯ ಸಂಜೆ, ಸಂಗೀತಸಂಜೆ, ಮನರಂಜನಾ ಕಾರ್ಯಕ್ರಮಗಳು ಜರುಗಿ ತಿಂಡಿತಿನಿಸುಗಳನ್ನು ಸವಿಯುವವರಿಗೆ ಸಂಗೀತದ ಮುದ ಸಿಗುವಂತೆ ಮಾಡಲಾಗಿದೆ.
ಈ ಚುರುಮುರಿ,ಪಾನಿಪುರಿ,ಮಂಗಳೂರು ಬಜ್ಜಿ,ದಾವಣಗೆರೆ ಬೆಣ್ಣೆ ದೋಸೆ ಒಂದು ಕಡೆ ಸವಿಯಬಹುದಾದರೆ,ಮತ್ತೊಂದು ಕಡೆ ಈ ಬಾರಿ ಮಡಿಕೆ, ಬೊಂಬು ಬಿರಿಯಾನಿ ಘಮಲು ಬಾಯಿ ಚಪ್ಪರಿಸುವವರನ್ನುಕೈ ಬೀಸಿ ಕರೆಯಲು ಸಜ್ಜಾಗಿದೆ.

ಮಳಿಗೆಗಳ ನಿರ್ಮಾಣ: ಪ್ರತಿ ವರ್ಷದಂತೆ ಈ ಬಾರಿಯೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದ್ದು, ಸ್ಕೌಟ್ಸ್ ಮೈದಾನದಲ್ಲಿ 118 ಮಳಿಗೆಗಳಿದ್ದು,ಇದರಲ್ಲಿ ಒಂದು ಬದಿಯಲ್ಲಿ 40 ಮಾಂಸಾಹಾರಿ ಮಳಿಗೆಗಳು ಇವೆ. ಚಿಕನ್, ಮಟನ್ ಕಬಾಬ್, ಧಮ್‌ ಬಿರಿಯಾನಿ, ಮಂಗಳೂರು ಫಿಶ್, ಬನ್ನೂರುಕುರಿ ಬಿರಿಯಾನಿ, ಫಿಶ್‌ಕಬಾಬ್, ಫಿಶ್‌ ಫ್ರೈ ಮೊದಲಾದ ತರಹೇವಾರಿ ಖಾದ್ಯಗಳು ನಾನ್‌ ವೆಜ್‌ ಪ್ರಿಯರ ಹೊಟ್ಟೆ ತಣಿಸಲಿವೆ.
ಅದೇ ರೀತಿ ಚುರುಮುರಿ,ಪಾನಿಪುರಿ, ಐಸ್‌ಕ್ರೀಂ, ಪುಳಿಯೋಗರೆ, ಬಂಗಾರಪೇಟೆ ಪಾನಿ ಪುರಿ , ದಾವಣಗೆರೆ ಮಸಾಲೆ ದೋಸೆ, ಧಾರವಾಡ ಪೇಡ ಸೇರಿದಂತೆ ನೂರಾರು ಬಗೆಯ ತಿನಿಸುಗಳು ಆಹಾರ ಪ್ರಿಯರ ಮನಗೆಲ್ಲಲಿವೆ.

ಲಲಿತಮಹಲ್‌ ಪ್ಯಾಲೇಸ್‌ ಮೈದಾನದಲ್ಲಿ 74 ಮಳಿಗೆಗಳನ್ನು ನಿರ್ಮಿಸಲಿದ್ದು, ಇಲ್ಲಿಯೂ ಸ್ಥಳೀಯ ಮತ್ತು ಹೊರಗಿನವರು ವಿವಿಧ ಖಾದ್ಯಗಳನ್ನು ಉಣಬಡಿಸಲಿದ್ದಾರೆ. ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಮಾಡಲಾಗಿದ್ದು, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಳೆ ಬಂದರೆ ಯಾವುದೇ ತೊಂದರೆ ಆಗದಂತೆ ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದ್ದು, ವಿದ್ಯುತ್,ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲು ಪ್ರತ್ಯೇಕ ಪೌರ ಕಾರ್ಮಿಕರು,ವಿಶೇಷ ಕಾರ್ಮಿಕರನ್ನು ನೇಮಿಸಿದ್ದು, ತಿಂಡಿ-ತಿನಿಸುಗಳನ್ನು ಸವಿದ ಮೇಲೆ ತಟ್ಟೆಗಳನ್ನು ಕಸದ ಡಬ್ಬಿಗೆ ಹಾಕುವಂತೆ ಮಾಡಲು ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಸ್ವಚ್ಛ ಮೈಸೂರಿನ ಹಿರಿಮೆಯನ್ನು ಉಳಿಸಿಕೊಳ್ಳುತ್ತಲೇ ಆಹಾರ ಮೇಳ ಯಶಸ್ವಿಗೊಳಿಸಲು ಸಮಿತಿ ಸಜ್ಜಾಗಿದೆ.

andolanait

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

5 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

5 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

6 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

6 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

6 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

6 hours ago