ಜಿಲ್ಲೆಗಳು

ಮೈಸೂರು ದಸರಾ ಅಂಗವಾಗಿ ವಿ. ಮಿಲ್ ಸಂಸ್ಥೆ ವತಿಯಿಂದ ವಿವಿಧ ಸ್ಪರ್ಧೆಗಳು

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಉದ್ಯಮ ಶೀಲತೆಯನ್ನು ಬೆಳೆಸುತ್ತಾ, ಸಾಮಾಜಿಕ ಉದ್ಯಮವಾಗಿ ಗುರುತಿಸಿಕೊಂಡಿರುವ ವಿ ಮಿಲ್ ಸಂಸ್ಥೆಯು ರಾಗಿಯ ಮಹತ್ವ ತಿಳಿಸುವ ಉದ್ದೇಶದಿಂದ ನವಸಿರಿ ಅಭಿಯಾನ ಆರಂಭಿಸಿದ್ದು, ಇದರ ಭಾಗವಾಗಿ ಸೆ.27ರಿಂದ ಹಮ್ಮಿಕೊಳ್ಳಲಿರುವ ನಗರದ ಜೆಕೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಸಂಸ್ಥೆಯು ಸ್ಟಾಲ್ ಹಾಕುವ ಮೂಲಕ ವಿವಿಧ ಸ್ವರ್ಧೆಗಳನ್ನು ಆಯೋಜಿಸಿದೆ.

ಸ್ಪರ್ಧೆಗಳು : ಸೆ. 26, 27 ನವಕುಂಚ ಸ್ಪರ್ಧೆ, ಸೆ.28 ರಂದು ಬೆಳಿಗ್ಗೆ 11ಕ್ಕೆ ನವರುಚಿ ಸ್ಪರ್ಧೆ, ಸೆ.29 ಮಧ್ಯಾಹ್ನಕ್ಕೆ ನವಸಿರಿಧಾನ್ಯ ಸ್ಪರ್ಧೆ, ಸೆ.26 ರಿಂದ 28ರವರೆಗೆ ನವರಾಗ ಸ್ಪರ್ಧೆ, ಸೆ.26 ರಿಂದ 29ರವರೆಗೆ ನವರಂಗ್, ನವಚಿತ್ರ ಸ್ಪರ್ಧೆ, ನವಕಾವ್ಯ ಸ್ಪರ್ಧೆಗಳನ್ನು ಮತ್ತು ಸೆ.26ರಿಂದ ಸೆ.30ರವರೆಗೆ ನವಶಕ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತೀ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು ಇರುತ್ತವೆ.

ಸ್ಪರ್ಧೆ ವಿವರ: ನವರುಚಿ ರಾಗಿ ಮುದ್ದೆ ತಿನ್ನುವುದು. ನವಕಾವ್ಯ ರಾಗಿ ಮತ್ತು ಸಿರಿಧಾನ್ಯದ ಕುರಿತು ಕವಿತೆ ರಚನೆ ಮತ್ತು ವಾಚನ. ನವರಂಗ್ ನವರಾತ್ರಿ ಹಿನ್ನೆಲೆ ಬಣ್ಣದ ಉಡುಗೆ ತೊಟ್ಟು ಪೋಟೋ ಕಳುಹಿಸುವುದು. ನವ ಕುಂಚ
ಮೈಸೂರು ದಸರಾವನ್ನು ಬಿಂಬಿಸಬೇಕು ಪೇಂಟಿಂಗ್ ಮಾಡುವುದು. ನವ ರಾಗ ಶ್ರೀ ಪುರಂದರದಾಸರು ರಚಿಸಿದ ರಾಗಿ ತಂದಿರ ಭಿಕ್ಷಕೆ ರಾಗಿ ತಂದಿರಾ ಹಾಡನ್ನು ಹಾಡಿ ಕಳಿಸಬೇಕು.‌ ನವಸಿರಿಧಾನ್ಯ ಸಿರಿಧಾನ್ಯ ಬಳಸಿ ಅಡುಗೆ ಮಾಡುವುದು. ನವಶಕ್ತಿ ದಸರಾ ಗೊಂಬೆಯ ವಿಡಿಯೋ 2 ನಿಮಿಷದೊಳಗೆ ಇರಬೇಕು.
ಗೊಂಬೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರಬೇಕು.

ವಿಶೇಷ: ಇನ್ನು ಈ ಸ್ಟಾಲ್ ನಲ್ಲಿ ವಿ ಮಿಲ್ ನ 14 ಗ್ರಾಮೀಣ ಭಾಗದ ಮಹಿಳೆಯರು ದೇಸಿ ಆಹಾರ ಉತ್ಪನ್ನಗಳ ಬಗ್ಗೆ ಅಚ್ಚುಕಟ್ಟಾಗಿ ಮಾಹಿತಿ ನೀಡಲಿದ್ದು, ಇಂತಹ ಒಂದು ಉದ್ಯಮದಿಂದ ಆರ್ಥಿಕವಾಗಿ ಪ್ರಗತಿಗೊಂಡ ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಮೂಲಕ ಮತ್ತಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿದ್ದಾರೆ. ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಣೆ ಬರುವ ಪ್ರೇಕ್ಷಕರು ಸ್ಟಾಲ್ ಗೆ ಭೇಟಿ ನೀಡಿ ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡುತ್ತೇವೆ.

ಸೂಚನೆಗಳು: ಸ್ಮರ್ಧೆಯಲ್ಲಿ ಪ್ರವೇಶಕ್ಕಾಗಿ #navasiri ಹ್ಯಾಶ್‌ಟ್ಯಾಗ್ ಜೊತೆಗೆ @wemillindia ಅನ್ನು ಟ್ಯಾಗ್ ಮಾಡುವುದು ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ‌ ಸಂಪರ್ಕಿಸಿ: 7337844633.

andolanait

Recent Posts

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

8 mins ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

25 mins ago

400 ಕೋಟಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳ ಹೈಜಾಕ್‌ : ಚೋರ್ಲಾ ಘಾಟ್‌ನಲ್ಲಿ ನಡೆದ ದರೋಡೆ ಬಗ್ಗೆ ಎಸ್‌ಪಿ ಹೇಳಿದ್ದಿಷ್ಟು

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್​​ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ…

54 mins ago

ಮೂವರು ಕನ್ನಡಿಗರು ಸೇರಿದಂತೆ 45 ಮಂದಿಗೆ ಪದ್ಮಶ್ರೀ ಗೌರವ

ಮೂವರು ಕನ್ನಡಿಗರಿವರು ; ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ ಬೆಂಗಳೂರು : ದೇಶದ…

1 hour ago

ಫೆ.2ರಿಂದ ಬಜೆಟ್ ತಯಾರಿ : ಸಿಎಂ ಸಿದ್ದರಾಮಯ್ಯ

ಮೈಸೂರು : ಮುಂದಿನ ಬಜೆಟ್ ಮಂಡನೆಗೆ ಫೆ.2 ರಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ತಯಾರಿ ಶುರು ಮಾಡಲಿದ್ದೇನೆ ಎಂದು…

4 hours ago

2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೀವಿ : ಸಿಎಂ ವಿಶ್ವಾಸ

ಮೈಸೂರು : ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಒಂದಾದರೂ ಅಧಿಕಾರಕ್ಕೆ ಬರಲ್ಲವೆಂದು ಭವಿಷ್ಯ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು…

4 hours ago