ಮೈಸೂರು : ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಮೂರನೇ ಹಂತದ ಹಾಗೂ ಅಂತಿಮ ಫಿರಂಗಿ ಸಿಡಿಸುವ ತಾಲೀಮು ನಡೆಯಿತು.
ವಸ್ತು ಪ್ರದರ್ಶನ ಆವರಣದ ವಾಹನ ನಿಲುಗಡೆ ಜಾಗದಲ್ಲಿ 13 ಆನೆಗಳು ಹಾಗೂ 35 ಕುದುರೆಗಳ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನ ಮೂರನೇ ಹಂತದ ತಾಲೀಮು ನಡೆಸಲಾಯಿತು. ಏಳು ಫಿರಂಗಿ ಗಾಡಿಗಳಿಂದ ಸಿಎಆರ್ ಸಿಬ್ಬಂದಿಗಳು ಕುಶಾಲು ತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21 ಕುಶಾಲು ತೋಪು ಸಿಡಿಸಿ ತಾಲೀಮು ನಡೆಸಲಾಯಿತು. ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಹೊಂದಿಕೊಂಡಂತೆ ಕಂಡುಬಂದಿದ್ದು, ಕುಶಾಲು ತೋಪು ಸಿಡಿಸಿದಾಗ ಬೆದರದೆ ನಿಂತಿದ್ದವು. ಈ ವೇಳೆ ಡಿಸಿಎಫ್ ಡಾ. ವಿ. ಕರಿಕಾಳನ್ ಮಾತನಾಡಿ, ಮೂರನೇ ಹಂತದ ಫಿರಂಗಿ ತಾಲೂಕು ಯಶಸ್ವಿಯಾಗಿ ನಡೆದಿದೆ. ವಿಶೇಷವೆಂದರೆ ಯಾವ ಆನೆಯ ಕಾಲಿಗೂ ಸರಪಳಿ ಕಟ್ಟಿರಲಿಲ್ಲ. ಮರಕ್ಕೆ ಕಟ್ಟಿ ಹಾಕಿರಲಿಲ್ಲ. ಆದರೂ ಆನೆಗಳು ಬೆಚ್ಚಲಿಲ್ಲ. ಹಾಗಾಗಿ ಜಂಬೂ ಸವಾರಿ ಯಶಸ್ವಿಯಾಗುವ ಭರವಸೆ ಇದೆ. ಆನೆಗಳು ಆರೋಗ್ಯವಾಗಿವೆ ತೂಕದಲ್ಲಿ 200 ರಿಂದ 400 ಕೆಜಿ ಹೆಚ್ಚಳವಾಗಿದೆ ಎಂದರು.
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಬಾಲಕನ…
ಮಡಿಕೇರಿ: ಕೊಡಗು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಒಂದು ತಿಂಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ಮಾಡುವ ಮೂಲಕ ನಾಗರಿಕರು ಕಳೆದುಕೊಂಡ…
ಎಚ್.ಡಿ.ಕೋಟೆ: ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯುಕ್ತ ಅರಣ್ಯ ಮತ್ತು…
ಮಂಡ್ಯ: ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವ ಜನತೆಯೂ ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು…
ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ…
ಮಂಡ್ಯ: ಪೌತಿ ಖಾತೆ ಪ್ರಕ್ರಿಯೆಯನ್ನು ಮಂಡ್ಯ ಜಿಲ್ಲೆಯು ಈ ಪೌತಿ ಖಾತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ಪೌತಿ ಖಾತೆಯನ್ನು…