ಜಿಲ್ಲೆಗಳು

ದಸರಾ ಆನೆಗಳಿಗೆ ಅಂತಿಮ ಹಂತದ ಫಿರಂಗಿ ತಾಲೀಮು ಯಶಸ್ವಿ

ಮೈಸೂರು : ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಮೂರನೇ ಹಂತದ ಹಾಗೂ ಅಂತಿಮ ಫಿರಂಗಿ ಸಿಡಿಸುವ ತಾಲೀಮು ನಡೆಯಿತು.

ವಸ್ತು ಪ್ರದರ್ಶನ ಆವರಣದ ವಾಹನ ನಿಲುಗಡೆ ಜಾಗದಲ್ಲಿ 13 ಆನೆಗಳು ಹಾಗೂ 35 ಕುದುರೆಗಳ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನ ಮೂರನೇ ಹಂತದ ತಾಲೀಮು ನಡೆಸಲಾಯಿತು. ಏಳು ಫಿರಂಗಿ ಗಾಡಿಗಳಿಂದ ಸಿಎಆರ್ ಸಿಬ್ಬಂದಿಗಳು ಕುಶಾಲು ತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21 ಕುಶಾಲು ತೋಪು ಸಿಡಿಸಿ ತಾಲೀಮು ನಡೆಸಲಾಯಿತು. ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಹೊಂದಿಕೊಂಡಂತೆ ಕಂಡುಬಂದಿದ್ದು, ಕುಶಾಲು ತೋಪು ಸಿಡಿಸಿದಾಗ ಬೆದರದೆ ನಿಂತಿದ್ದವು. ಈ ವೇಳೆ ಡಿಸಿಎಫ್ ಡಾ. ವಿ. ಕರಿಕಾಳನ್ ಮಾತನಾಡಿ, ಮೂರನೇ ಹಂತದ ಫಿರಂಗಿ ತಾಲೂಕು ಯಶಸ್ವಿಯಾಗಿ ನಡೆದಿದೆ. ವಿಶೇಷವೆಂದರೆ ಯಾವ ಆನೆಯ ಕಾಲಿಗೂ ಸರಪಳಿ ಕಟ್ಟಿರಲಿಲ್ಲ. ಮರಕ್ಕೆ ಕಟ್ಟಿ ಹಾಕಿರಲಿಲ್ಲ. ಆದರೂ ಆನೆಗಳು ಬೆಚ್ಚಲಿಲ್ಲ. ಹಾಗಾಗಿ ಜಂಬೂ ಸವಾರಿ ಯಶಸ್ವಿಯಾಗುವ ಭರವಸೆ ಇದೆ. ಆನೆಗಳು ಆರೋಗ್ಯವಾಗಿವೆ ತೂಕದಲ್ಲಿ 200 ರಿಂದ 400 ಕೆಜಿ ಹೆಚ್ಚಳವಾಗಿದೆ ಎಂದರು.

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago