ಜಿಲ್ಲೆಗಳು

ಮೈಸೂರು : ಸೆ.29 ರಿಂದ ಮಕ್ಕಳ ದಸರಾ, ಹಾಡಿ ಕುಣಿಯಲಿರುವ ಮಕ್ಕಳು!

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ದಸರಾದಲ್ಲಿ ಈ ಬಾರಿ ಶಾಲಾ ಮಕ್ಕಳನ್ನು ಒಳಗೊಂಡ ಮಕ್ಕಳ ದಸರಾ ಸೆ.29ರಿಂದ ಎರಡು ದಿನ ನಡೆಯಲಿದ್ದು, ಮಕ್ಕಳೇ ನಡೆಸಿಕೊಡಲಿರುವ ವಿವಿಧ ಕಾರ್ಯಕ್ರಮಗಳು ದಸರೆಗೆ ಮೆರುಗು ನೀಡಲಿವೆ.
ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 7 ರಿಂದ 10ನೇ ತರಗತಿ ವರೆಗಿನ 1 ಸಾವಿರ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಜಿಲ್ಲೆಯಲ್ಲಿ 2  ಲಕ್ಷ ಮಕ್ಕಳಿದ್ದು, ಮಕ್ಕಳ ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಂಡು ಅಧಿಕಾರಿಗಳು ಹಾಗೂ ಶಿಕ್ಷಕರು 1 ಸಾವಿರ ಮಕ್ಕಳನ್ನು ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಆ್ಂಕೆು ಮಾಡಲಿದ್ದಾರೆ.
ಜೂನಿಯರ್ ಮಹಾರಾಣಿ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯುವ ಮಕ್ಕಳ ದಸರಾದಲ್ಲಿ ಸಂಗೀತ, ನೃತ್ಯ, ಚರ್ಚಾ ಸ್ಪರ್ಧೆ, ಆಶುಭಾಷಣ, ಜಾನಪದ, ಚಲನಚಿತ್ರಗೀತೆ, ರಸಪ್ರಶ್ನೆ, ಪ್ರಬಂಧ, ವಿವಿಧ ವೇಷಭೂಷಣ ಸ್ಪರ್ಧೆ ಹೀಗೆ 31 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ದೇಸಿ ಆಟಗಳಾದ ಲಗ್ಗೋರಿ, ಬುಗುರಿ, ಚೌಕಾಬಾರ, ಕುಂಟೆಬಿಲ್ಲೆ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ.

ವಿಶೇಷಚೇತನ ಮಕ್ಕಳು ಭಾಗಿ: ವಿಶೇಷಚೇತನ ಮಕ್ಕಳಿಗಾಗಿ ವೇಶಭೂಷಣ ಸ್ಪರ್ಧೆ, ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಹಾಡಿ ಮಕ್ಕಳಿಂದ ಕಾರ್ಯಕ್ರಮ: ಮಾವುತರು ಹಾಗೂ ಕಾವಾಡಿಗಳ ಮಕ್ಕಳನ್ನೂ ಮಕ್ಕಳ ದಸರಾದಲ್ಲಿ ಜೊತೆಯಾಗಿಸಿಕೊಳ್ಳಲಾಗಿದೆ. ಅವರಿಂದ ಸೆ.29ರ ಮದ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

9 ಸ್ಟಾಲ್‌ಗಳು: ಜಗನ್ಮೋಹನ ಅರಮನೆ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ 9 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ ಮಕ್ಕಳಿಗಾಗಿ ಸರ್ಕಾರ ರೂಪಿಸಿರುವ ಸವಲತ್ತುಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕರಕುಶಲ, ಚಿತ್ರಕಲೆಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ.

andolanait

Recent Posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ವಿಚಾರ: ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಮೈಸೂರು: ಕಾಳಸಂತೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಮಾರಾಟವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್‌ ಮೇಲೆ ಇಸ್ರೇಲ್‌…

3 mins ago

ಇನ್ನೂ ಎರಡು ವರ್ಷ ಸಿದ್ದರಾಮಯ್ಯನವರೇ ಸಿಎಂ: ಗೃಹ ಸಚಿವ ಪರಮೇಶ್ವರ್‌

ಮೈಸೂರು: ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್‌ ಅವರು ಸಿಎಂ…

12 mins ago

ಡೊನಾಲ್ಡ್‌ ಟ್ರಂಪ್‌ ಡೆಡ್‌ಲೈನ್‌ಗೆ ಇರಾನ್‌ ಕೌಂಟರ್‌: ಏನದು ಗೊತ್ತಾ.?

ಟೆಹರಾನ್:‌ ನಷ್ಟ ಪರಿಹಾರವಿಲ್ಲದೇ ಹಾರ್ಮುಜ್‌ ಜಲಸಂಧಿ ಓಪನ್‌ ಮಾಡಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇರಾನ್‌ ಕೌಂಟರ್‌ ಕೊಟ್ಟಿದೆ.…

52 mins ago

ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ: 5 ಕೆಜಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ಅಮೇರಿಕಾ ಮತ್ತು ಇರಾನ್‌ ನಡುವಿನ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಎಲ್‌ಪಿಜಿ ಆತಂಕದಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಅಭಯ…

1 hour ago

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕಸರತ್ತು ಸಲ್ಲದು

ಇತ್ತೀಚೆಗೆ ಮುಕ್ತಾಯಗೊಂಡ ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲು ರಾಜ್ಯ ಸರ್ಕಾರ…

2 hours ago

ಕಟಕಟೆಯಲ್ಲಿ ಜಾಲತಾಣಗಳು; ಚಟ ಹಿಡಿಸುವ ವೇದಿಕೆಗಳು

ಶುಭಾ ಖಟಾವಕರ ಮ್ಹೆತ್ರಸ್ ಸಿಗರೇಟು ಮತ್ತು ಜೂಜಿನಷ್ಟೇ ಸಾಮಾಜಿಕ ಜಾಲತಾಣಗಳೂ ಅಪಾಯಕರವೆ? ಅವು ನಿಮ್ಮನ್ನು ಚಟದ ದಾಸರನ್ನಾಗಿಸಬಲ್ಲವೆ? ಇತ್ತೀಚೆಗೆ ಅಮೆರಿಕದ…

2 hours ago