ಜಿಲ್ಲೆಗಳು

ಆಸಿಡ್ ತಯಾರಿ ಕಟ್ಟಡದಲ್ಲಿ ಭಾರಿ ಬೆಂಕಿ

2 ಕಿ.ಮೀ.ವ್ಯಾಪ್ತಿಯಲ್ಲಿ ರಾಸಾಯನಿಕ ವಾಸನೆಯಿಂದ ಆತಂಕ

ಮೈಸೂರು : ಬಾತ್ ರೂಮ್ ಆಸಿಡ್ ತಯಾರು ಮಾಡುವ ಕಟ್ಟಡದಲ್ಲಿ ಬಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಕ್ಕೆ ಭಾಗಶಃ ಹಾನಿಯಾಗಿದ್ದು, ಕಟ್ಟಡದಲ್ಲಿ ಇದ್ದ ರಸಾಯನಿಕಗಳು ಬೆಂಕಿಗೆ ಆಹುತಿಯಾಗಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಗರದ ಯಾದವಗಿರಿಯ ಮೇದರ್ ಬ್ಲಾಕ್‌ನಲ್ಲಿ ರೈಲ್ವೆ ಟ್ರ್ಯಾಕ್ ಎದುರು ನಾಗರಾಜ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಬುಧವಾರ ಸಂಜೆ ೬ ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದೆ. ಇಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಹೊಗೆ ಮತ್ತು ವಾಸನೆ ಸುಮಾರು ೨ ರಿಂದ ೩ ಕಿ.ಮೀ.ನಗರದ ಸುತ್ತಲು ಒಂದುವರೆ ಗಂಟೆಗಳ ಕಾಲ ಸುತ್ತುವರಿದಿತ್ತು. ಇದರಿಂದ ಆತಂಕದ ವಾತಾವರಣ ಉಂಟಾಗಿತ್ತು.

ಈ ಕಟ್ಟಡವಿರುವ ಆವರಣವನ್ನು ನಾಗರಾಜು ಎಂಬವರು ನಾಲ್ವರಿಗೆ ಬಾಡಿಗೆ ನೀಡಿದ್ದು, ಈ ಜಾಗದಲ್ಲಿ ಒಂದು ಕಟ್ಟಡದಲ್ಲಿ ಆಸಿಡ್, ಥಿನ್ನರ್ ಮತ್ತು ಪೇಯಿಂಟ್ ಕೆಮಿಕಲ್‌ಗಳು ಇದ್ದರೆ. ಮತ್ತೊಂದು ಕಡೆ ರೂಲರ್ ಕೆಮಿಕಲ್, ಪೇಪರ್ ಸಂಬಂಧಿ ವಸ್ತುಗಳ ತಯಾರಿ ನಡೆಯುತ್ತದೆ. ಜೊತೆಗೆ ಪ್ಲಾಸ್ಟಿಕ್ ವೇಸ್ಟ್ ಹಾಕುವುದಕ್ಕೂ ಜಾಗ ಮಾಡಿಕೊಳ್ಳಲಾಗಿದ್ದು, ಬಾಡಿಗೆ ಪಡೆದಿರುವ ಇಮ್ರಾನ್ ಪಾಷ ಎಂಬವರು ಬಾತ್ ರೂಮ್ ಆಸಿಡ್ ತಯಾರಿಸುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಕೆಮಿಕಲ್‌ಗಳು ಇದ್ದ ಕಾರಣ ಕೆಲವೇ ನಿಮಿಷಗಳಲ್ಲಿ ಭಾರೀ ಪ್ರಮಾಣ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಟ್ಟಡದಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅವರು ಹೊರೆಗೆ ಓಡಿ ಬಂದಿದ್ದಾರೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ಠಾಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ : ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್.ಜಯರಾಮಯ್ಯ ಅವರ ನೇತೃತ್ವದಲ್ಲಿ ನಗರದ ಹೆಬ್ಬಾಳ, ಬನ್ನಿಮಂಟಪ, ಸರಸ್ವತಿಪುರಂ ಮೂರು ಅಗ್ನಿಶಾಮಕ ಠಾಣೆಗಳಿಂದ ೬೦ ಸಿಬ್ಬಂದಿ, ೬ ಅಗ್ನಿಶಾಮಕ ವಾಹನಗಳಲ್ಲಿ ಬಂದು ಸುಮಾರು ಒಂದೂವರೆ ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ. ಏಕಿವಿಯಸ್ ಫಿಲ್ಮಂ ಫಾರ್ಮಿಂಗ್ ಪೋಮ್ (ಎಎಫ್‌ಎಫ್‌ಎಫ್) ಎಂಬ ರಾಸಾಯನಿಕವನ್ನು ಬಳಸಿ ಬೆಂಕಿಯನ್ನು ಆರಿಸಲಾಗಿದೆ.


ಬೆಂಕಿ ಹೇಗೆ ಹತ್ತಿಕೊಂಡಿದೆ ಎಂಬುದನ್ನು ಈಗ ತಿಳಿದುಕೊಳ್ಳಬೇಕು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಟ್ಟಡಕ್ಕೆ ಮಾಲೀಕರಾಗಲಿ, ಇದನ್ನು ಬಾಡಿಗೆ ಪಡೆದವರಾಗಲಿ ಯಾರೂ ಬಂದು ಏನೂ ಹೇಳುತ್ತಿಲ್ಲ. ಒಳಗೆ ಏನೆಲ್ಲ ಇತ್ತು. ಎಷ್ಟು ನಷ್ಟವಾಗಿದೆ ಎಂಬ ಅಂದಾಜನ್ನು ಅವರಿಂದ ಮಾಹಿತಿ ಪಡೆದ ನಂತರವೇ ಹೇಳಬೇಕು.

ಪಿ.ಎಸ್.ಜಯರಾಮಯ್ಯ, ಅಗ್ನಿಶಾಮಕ ಅಧಿಕಾರಿ

andolanait

Recent Posts

ಓದುಗರ ಪತ್ರ:  ಸಾರ್ವಜನಿಕ ಶೌಚಾಲಯಗಳ ಬೀಗ ತೆರೆಯಿರಿ

ಮೈಸೂರಿನ ಮೆಟ್ರೋ ಪೋಲ್ ವೃತ್ತದ ಹತ್ತಿರ (ಮಹಾರಾಣಿ ಕಾಲೇಜು) ಮತ್ತು ಗಂಡಭೇರುಂಡ ಉದ್ಯಾನವನದ ಮುಂಭಾಗದಲ್ಲಿ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ…

2 mins ago

ಓದುಗರ ಪತ್ರ: ಅನಗತ್ಯ ಸಿಸೇರಿಯನ್: ಆಸ್ಪತ್ರೆಗಳ ವಿರುದ್ಧ ಕ್ರಮ ಸ್ವಾಗತಾರ್ಹ

ಹೆರಿಗೆ ಸಮಯದಲ್ಲಿ ಅನಗತ್ಯವಾಗಿ ಸಿಸೇರಿಯನ್ ಮಾಡುವ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಕೆಪಿಎಂಇ ಅಧಿನಿಯಮ ಕಾಯ್ದೆ ಪ್ರಕಾರ ಕಾನೂನು ಕ್ರಮ…

8 mins ago

ಪಂಜು ಗಂಗೊಳ್ಳಿ ವಾರದ ಅಂಕಣ: ವಿಕಲಾಂಗರ ಬದುಕಿಗೆ ಚಲನೆ ನೀಡುವ ಸಂದೀಪ್ ತಲ್ವಾರ್

ಸ್ವಾವಲಂಬನೆಗೆ ಸಹಕಾರಿಯಾದ ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ 2010ರ ಆಗಸ್ಟ್ ತಿಂಗಳಿನಲ್ಲಿ ನಾಗ್ಪುರದ ನಿವಾಸಿ ನಿತೀನ್‌ರ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಲು…

46 mins ago

ನವೆಂಬರ್‌ನಲ್ಲೇ 1.59 ಕೋಟಿ ರೂ ರಾಜಸ್ವ ಸಂಗ್ರಹ

ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…

3 hours ago

ಅದ್ದೂರಿಯಾಗಿ ನೆರವೇರಿದ ಶ್ರೀ ಮುತ್ತುರಾಯಸ್ವಾಮಿ ಜಾತ್ರೆ

ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…

3 hours ago

ಹಳೆಯ ವಿದ್ಯಾರ್ಥಿಗಳಿಂದ ಕನ್ನಡಮಯವಾದ ಸರ್ಕಾರಿ ಶಾಲೆ

ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…

3 hours ago