ಮೖೆಸೂರು : ಮೈಸೂರು ಅಭಿವೃದ್ಧಿಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಶಾಸಕ ಎಲ್ ನಾಗೇಂದ್ರ ಅವರು ಸಂಸದ ಪ್ರತಾಪ್ ಸಿಂಹನಿಗೆ ಟಾಂಗ್ ನೀಡಿದ್ದಾರೆ.
ನಾವು ಮಾಡಿದ ಕೆಲಸವನ್ನು ಜನರು ಗುರುತಿಸಬೇಕು, ಆದರೆ ನಾನೇ ಮಾಡಿದ್ದು ಅಂತ ಯಾಕೆ ಕ್ರೆಡಿಟ್ ಗೆ ಇಳಿಯಬೇಕು ? ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಅಭಿವೃದ್ಧಿಗೆ ಹಣ ನೀಡಿದ್ದು 2014 ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದು ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಸಂಸದ ಪ್ರತಾಪ್ ಸಿಂಹನಿಗೆ ಟಾಂಗ್ ನೀಡಿದ್ದಾರೆ.
ಮುಂದುವರಿದು ಉಸ್ತುವಾರಿ ಸಚಿವರ ಬದಲಾವಣೆ ಸಿಎಂ ಪರಮಾಧಿಕಾರವಾಗಿದೆ. ಇಲ್ಲಿ ಸ್ಥಳೀಯರು ಹೊರಗಿನವರು ಅಂತ ಏನಿಲ್ಲ. ಮೂಲ ವಲಸಿಗ ಎಂಬುದೂ ಕೂಡ ಇಲ್ಲ. ಬಿಜೆಪಿ ಪಕ್ಷವನ್ನು ನಂಬಿ ಬಂದ ಎಲ್ಲರಿಗೂ ಪಕ್ಷದ ಮಾತಿನಂತೆ ನಡೆದುಕೊಂಡಿದೆ. ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಯಲ್ಲಿ ಯಾರನ್ನು ಟಾರ್ಗೆಟ್ ಮಾಡಿಲ್ಲ. ಹೊಸಬರಿಗೂ ಆದ್ಯತೆ ನೀಡಬೇಕು ಎಂದು ಸಿಎಂ ಬದಲಾವಣೆ ಮಾಡುತ್ತಿದ್ದಾರೆ. ಮೈಸೂರಿನಿಂದ ನಾವು ಯಾರಿಗೂ ಕೂಡ ಸಿಪಾರಸ್ಸು ಮಾಡಿಲ್ಲ. ಬಿಜೆಪಿ ಪಕ್ಷವು ನಿಷ್ಠಾವಂತರಲ್ಲಿ ಮಾಡುತ್ತದೆ ಎಂದು ಚಾಮುಂಡಿ ಬೆಟ್ಟದಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಹೇಳಿಕೆ ನೀಡಿದ್ದಾರೆ