90ರಿಂದ 425 ಕಿಲೋ ತನಕ ದೇಹ ತೂಕ ಹೆಚ್ಚಿಸಿಕೊಂಡ ದಸರೆ ಆನೆಗಳು
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ 14 ಆನೆಗಳ ತೂಕ ದಾಖಲಿಸುವ ಪ್ರಕ್ರಿಯೆ ಶುಕ್ರವಾರ ನಡೆಯಿತು.
ದಸರಾ ಗಜಪಡೆಗೆ ಸೇರಿದ ಆನೆಗಳ ತೂಕ ನೋಡುವ ಪ್ರಕ್ರಿಯೆಯು ಪ್ರತೀವರ್ಷ ಮೈಸೂರಿನ ಧನ್ವಂತ್ರಿ ರಸ್ತೆಯ ವೇ ಬ್ರಿಡ್ಜ್ ನಲ್ಲಿ ನಡೆಯುತ್ತದೆ. ಈ ಬಾರಿಯೂ ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5950 ಕೆ.ಜಿ ತೂಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆ ಅರಮನೆ ಪ್ರವೇಶಿಸಿದಾಗಲೂ ಎಲ್ಲ ಆನೆಗಳ ತೂಕ ದಾಖಲಿಸಲಾಗಿತ್ತು. ಆಗಷ್ಟ್ 10ರಂದು ಅರ್ಜುನನ ತೂಕ 5775 ಇತ್ತು. ಒಂದು ತಿಂಗಳಲ್ಲಿ 175 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.
ಅರಮನೆಗೆ ಕಾಲಿಟ್ಟ ಕ್ಷಣದಿಂದಲೇ ಎಲ್ಲ ಆನೆಗಳಿಗೆ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತದೆ. ಜಂಬೂ ಸವಾರಿ ವೇಳೆಗೆ ಈ ಎಲ್ಲ ಆನೆಗಳು ತೂಕ ಹೆಚ್ಚಿಸಿಕೊಂಡು ಸದೃಢವಾಗುತ್ತವೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಈಗ ಬರೋಬ್ಬರಿ 5000 ಕಿಲೋ ತೂಗುತ್ತಿದ್ದಾನೆ. ಕಳೆದ ತಿಂಗಳು ಈತನ ತೂಕ 4,770 ಇತ್ತು. ಒಂದು ತಿಂಗಳಲ್ಲಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.
ಗಂಡಾನೆಗಳಿಗೆ ಹೋಲಿಸಿದರೆ ಸ್ಲಿಮ್ ಆಗಿದ್ದ ಹೆಣ್ಣಾನೆಗಳೂ ಈಗ ತೂಕ ಹೆಚ್ಚಿಸಿಕೊಂಡು ದಸರೆಯ ಕಾರ್ಯಭಾರ ವಹಿಸಲು ಸಿದ್ದವಾಗಿವೆ. 3,050 ಕಿಲೋ ತೂಕದ ಚೈತ್ರ ಒಂದು ತಿಂಗಳಲ್ಲಿ 3235 ಕಿಲೋ, 3100 ಕಿಲೋ ತೂಕದ ಕಾವೇರಿ 3245 ಕಿಲೋಗೆ ದೇಹ ತೂಕ ಏರಿಸಿಕೊಂಡಿದ್ದಾರೆ. 2920 ಕಿಲೋ ಇದ್ದ ಲಕ್ಷ್ಮೀ ಬರೋಬ್ಬರಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾಳೆ. ದಸರೆಯ ಹಳೆಯ ಆನೆಗಳಲ್ಲಿ ಒಂದಾದ ವಿಜಯ 2760 ಕಿಲೋ ತೂಗುವ ಮೂಲಕ ಎಲ್ಲರಿಗಿಂತ ಹೆಚ್ಚು ಸ್ಲಿಮ್ ಆಗಿದ್ದಾಳೆ.
ಡಾ.ವಿ. ಕರಿಕಾಳನ್, ಡಿಸಿಎಫ್
ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಮತ್ತು ಎರಡನೇ ತಂಡದ ಆನೆಗಳು ಸೇರಿ ಒಟ್ಟು 14 ಆನೆಗಳನ್ನು ತೂಕ ಮಾಡಿದ್ದೇವೆ. ಗಂಡಾನೆಗಳು 4000 ದಿಂದ 4600 ಸಾವಿರ ಕೆಜಿ ಇದ್ದು, ಕಿರಿಯ ವಯಸ್ಸಿನ ಆನೆ ಪಾರ್ಥಸಾರಥಿ ಮಾತ್ರ 3445 ತೂಕ ಹೊಂದಿದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ. ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ನಿತ್ಯದ ತಾಲೀಮಿನಲ್ಲಿ ಭಾಗವಹಿಸಲಿವೆ. ದಸರೆ ಮುಗಿಯುವದರೊಳಗೆ ಎಲ್ಲ ಆನೆಗಳ ತೂಕ ಹೆಚ್ಚು ಕಡಿಮೆ 100 ರಿಂದ 500 ಕಿಲೋ ಏರುತ್ತದೆ.
ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…
ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…
ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…
ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…
ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…