ಜಿಲ್ಲೆಗಳು

ತಿಂಗಳೊಳಗೆ 425 ಕಿಲೋ ತೂಕ ಹೆಚ್ಚಿಸಿಕೊಂಡ ಬಲಭೀಮ!

90ರಿಂದ 425 ಕಿಲೋ ತನಕ ದೇಹ ತೂಕ ಹೆಚ್ಚಿಸಿಕೊಂಡ ದಸರೆ ಆನೆಗಳು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ 14 ಆನೆಗಳ ತೂಕ ದಾಖಲಿಸುವ ಪ್ರಕ್ರಿಯೆ ಶುಕ್ರವಾರ ನಡೆಯಿತು.
ದಸರಾ ಗಜಪಡೆಗೆ ಸೇರಿದ ಆನೆಗಳ ತೂಕ ನೋಡುವ ಪ್ರಕ್ರಿಯೆಯು ಪ್ರತೀವರ್ಷ ಮೈಸೂರಿನ ಧನ್ವಂತ್ರಿ ರಸ್ತೆಯ ವೇ ಬ್ರಿಡ್ಜ್ ನಲ್ಲಿ ನಡೆಯುತ್ತದೆ. ಈ ಬಾರಿಯೂ ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5950 ಕೆ.ಜಿ ತೂಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆ ಅರಮನೆ ಪ್ರವೇಶಿಸಿದಾಗಲೂ ಎಲ್ಲ ಆನೆಗಳ ತೂಕ ದಾಖಲಿಸಲಾಗಿತ್ತು. ಆಗಷ್ಟ್ 10ರಂದು ಅರ್ಜುನನ ತೂಕ 5775 ಇತ್ತು. ಒಂದು ತಿಂಗಳಲ್ಲಿ 175 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.


ಅರಮನೆಗೆ ಕಾಲಿಟ್ಟ ಕ್ಷಣದಿಂದಲೇ ಎಲ್ಲ ಆನೆಗಳಿಗೆ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತದೆ. ಜಂಬೂ ಸವಾರಿ ವೇಳೆಗೆ ಈ ಎಲ್ಲ ಆನೆಗಳು ತೂಕ ಹೆಚ್ಚಿಸಿಕೊಂಡು ಸದೃಢವಾಗುತ್ತವೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಈಗ ಬರೋಬ್ಬರಿ 5000 ಕಿಲೋ ತೂಗುತ್ತಿದ್ದಾನೆ. ಕಳೆದ ತಿಂಗಳು ಈತನ ತೂಕ 4,770 ಇತ್ತು. ಒಂದು ತಿಂಗಳಲ್ಲಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.

ಇದೇ ರೀತಿ ಕಳೆದ ತಿಂಗಳು 5140 ಕಿಲೋ ದೇಹತೂಕವಿದ್ದ ಗೋಪಾಲಸ್ವಾಮಿ ಈಗ 320 ಕಿಲೋ ಹೆಚ್ಚಿಸಿಕೊಂಡು 5460 ಕಿಲೋ ತೂಕದ ಮಹಾಗಜನಾಗಿದ್ದಾನೆ. ಧನಂಜಯ ಒಂದು ತಿಂಗಳಲ್ಲಿ ಕೇವಲ 80 ಕಿಲೋ ಹೆಚ್ಚಿಸಿಕೊಂಡು 4890 ಕಿಲೋ ತಲುಪಿದ್ದಾನೆ. ಮಹೇಂದ್ರ 200 ಕಿಲೋ ಹೆಚ್ಚಿಸಿಕೊಂಡು 4450 ಕಿಲೋ ತೂಕದ ಬಲಶಾಲಿಯಾಗಿದ್ದಾನೆ. 2018ರಲ್ಲಿ ಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದ ಭೀಮ ಕಳೆದ ತಿಂಗಳು 3,920 ಕಿಲೋ ತೂಗುತ್ತಿದ್ದ. ಈಗ ಬರೋಬ್ಬರಿ 425 ಕಿಲೋ ಹೆಚ್ಚಿಸಿಕೊಂಡು 4345 ಕಿಲೋ ತಲುಪಿದ್ದಾನೆ.

ಇನ್ನು ಮೊದಲ ಬಾರಿಗೆ ತೂಕ ಯಂತ್ರದ ಮೇಲೆ ನಿಂತ ಸುಗ್ರೀವ ಈಗ 4785 ಕಿಲೋ ಇದ್ದರೆ, ಗೋಪಿ 4670 ಕಿಲೋ ತೂಗುತ್ತಿದ್ದಾನೆ. ಇದೇ ಮೊದಲ ಬಾರಿಗೆ ದಸರೆಗೆ ಬಂದ ಶ್ರೀರಾಮ 4475 ಕಿಲೋ ತೂಕವಿದ್ದಾನೆ. ಗಜಪಡೆಯಲ್ಲಿ ಕಿರಿಯವನಾಗಿರುವ 18 ವರ್ಷದ ಪಾರ್ಥಸಾರಥಿ 3445 ಕಿಲೋ ತೂಕವಿದ್ದು ಬೆಳವಣಿಗೆಯ ಲಕ್ಷಣ ತೋರಿಸಿದ್ದಾನೆ.
ಗಂಡಾನೆಗಳಿಗೆ ಹೋಲಿಸಿದರೆ ಸ್ಲಿಮ್ ಆಗಿದ್ದ ಹೆಣ್ಣಾನೆಗಳೂ ಈಗ ತೂಕ ಹೆಚ್ಚಿಸಿಕೊಂಡು ದಸರೆಯ ಕಾರ್ಯಭಾರ ವಹಿಸಲು ಸಿದ್ದವಾಗಿವೆ. 3,050 ಕಿಲೋ ತೂಕದ ಚೈತ್ರ ಒಂದು ತಿಂಗಳಲ್ಲಿ 3235 ಕಿಲೋ, 3100 ಕಿಲೋ ತೂಕದ ಕಾವೇರಿ 3245 ಕಿಲೋಗೆ ದೇಹ ತೂಕ ಏರಿಸಿಕೊಂಡಿದ್ದಾರೆ. 2920 ಕಿಲೋ ಇದ್ದ ಲಕ್ಷ್ಮೀ ಬರೋಬ್ಬರಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾಳೆ. ದಸರೆಯ ಹಳೆಯ ಆನೆಗಳಲ್ಲಿ ಒಂದಾದ ವಿಜಯ 2760 ಕಿಲೋ ತೂಗುವ ಮೂಲಕ ಎಲ್ಲರಿಗಿಂತ ಹೆಚ್ಚು ಸ್ಲಿಮ್ ಆಗಿದ್ದಾಳೆ.

ಡಾ.ವಿ. ಕರಿಕಾಳನ್, ಡಿಸಿಎಫ್
ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಮತ್ತು ಎರಡನೇ ತಂಡದ ಆನೆಗಳು ಸೇರಿ ಒಟ್ಟು 14 ಆನೆಗಳನ್ನು ತೂಕ ಮಾಡಿದ್ದೇವೆ. ಗಂಡಾನೆಗಳು 4000 ದಿಂದ 4600 ಸಾವಿರ ಕೆಜಿ ಇದ್ದು, ಕಿರಿಯ ವಯಸ್ಸಿನ ಆನೆ ಪಾರ್ಥಸಾರಥಿ ಮಾತ್ರ 3445 ತೂಕ ಹೊಂದಿದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ. ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ನಿತ್ಯದ ತಾಲೀಮಿನಲ್ಲಿ ಭಾಗವಹಿಸಲಿವೆ. ದಸರೆ ಮುಗಿಯುವದರೊಳಗೆ ಎಲ್ಲ ಆನೆಗಳ ತೂಕ ಹೆಚ್ಚು ಕಡಿಮೆ 100 ರಿಂದ 500 ಕಿಲೋ ಏರುತ್ತದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago