ಶ್ರೀರಂಗಪಟ್ಟಣ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದಲ್ಲಿ ಶನಿವಾರ ಸಂಜೆ ತಾಂತ್ರಿಕ ಕಾರಣದಿಂದ ಸಂಗೀತ ಕಾರಂಜಿ ಪ್ರಾರಂಭ ವಾಗುವುದು ತಡವಾದ ಕಾರಣ ಪ್ರವಾಸಿಗರ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ನ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸತತ ರಜಾ ಹಿನ್ನಲೆಯಲ್ಲಿ ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು, ಶನಿವಾರ ಸಂಜೆ ಎಂದಿನಂತೆ ೬.೪೫ ಕ್ಕೆ ನೃತ್ಯ ಕಾರಂಜಿ ಪ್ರಾರಂಭವಾಗ ಬೇಕಾಗಿತ್ತು. ಸಂಗೀತಾ ಕಾರಂಜಿಯು ತಾಂತ್ರಿಕ ಕಾರಣದಿಂದ ಸುಮಾರು ೧ ಘಂಟೆಯಾದರೂ ಪ್ರಾರಂಭವಾಗದ ಕಾರಣ ರೊಚ್ಚಗೆದ್ದ ಪ್ರವಾಸಿಗರು, ನೃತ್ಯ ಕಾರಂಜಿ ಬಳಿ ಪ್ರವಾಸಿಗರು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಜೊತೆ ಜಗಳವಾಡಿ ನಂತರ ಪ್ರವೇಶ ಟೆಕೆಟ್ ಕೌಂಟರ್ ಬಳಿ ಬಂದು ಟಿಕೆಟ್ ನೀಡಲು ನಿಯೋಜನೆಗೊಂಡಿರುವ ಕೆ.ಸಿ.ಐ.ಸಿ ಸಿಬ್ಬಂದಿಗಳ ಜೊತೆ ಜಗಳವಾಡಿ ನಂತರ ಆಕ್ರೋಷಗೊಂಡ ಪ್ರವಾಸಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿರುವ ಬಗ್ಗೆ ವರದಿಯಾಗಿದೆ.
ತಾಂತ್ರಿಕ ಕಾರಣದಿಂದ ನೃತ್ಯ ಕಾರಂಜಿ ತಡವಾಗಿದ್ದು, ನಮ್ಮ ಸಿಬ್ಬಂದಿಗಳು ಚುನಾವಣೆ ಕರ್ತವ್ಯ ಮುಗಿಸಿಕೊಂಡು ಕೂಡ ಬಂದಿದ್ದು, ಪ್ರವಾಸಿಗರು ಸಂಹವನ ಸಮಸ್ಯೆಯಿಂದ ಟೆಕೆಟ್ ಕೌಂಟರ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದು ಬೇಸರವಾಗಿದೆ, ಈ ಘಟನೆ ಕುರಿತು ನಮ್ಮ ಕಾ.ನೀ.ನಿಗಮ ಮತ್ತು ಕೆ.ಎಸ್.ಐ.ಎಸ್.ಎಫ್, ಹಾಗೂ ಟೆಕಟ್ ಕೌಂಟರ್ ನಿರ್ವಹಣೆ ಮಾಡುವ ಕೆ.ಸಿ.ಐ.ಸಿ ಕಂಪನಿ ಜೊತೆ ಸೊಮವಾರ ಸಭೆ ನಡೆಸಿ ಮುಂದೆ ಈ ರೀತಿ ಘಟನೆ ನಡೆಯದಂತೆ ಕ್ರಮ ಜರುಗಿಸಲಾಗುತ್ತದೆ.
-ರಘುರಾಮ್, ಅಧೀಕ್ಷಕ ಅಭಿಯಂತರ , ಕಾವೇರಿ ನೀರಾವರಿ ನಿಗಮ, ಮಂಡ್ಯ
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್ನ ಸದ್ದಿನೊಂದಿಗೆ…
ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…
ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…
ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…