ಮಂಡ್ಯ: ಮನೆಯವರು ದೇವಾಲಯಕ್ಕೆ ಹೋಗಿರುವುದನ್ನು ಗಮನಿಸಿ 75 ಗ್ರಾಂ ಒಡವೆಗಳನ್ನು ಕಳ್ಳತನ ಮಾಡಿರುವ ಪ್ರಕರಣ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಗ್ರಾಮದ ಸಿದ್ದೇಗೌಡ ಮತ್ತು ರಾಧಾ ದಂಪತಿ ಮನೆಯಲ್ಲಿ ಕಳ್ಳತನವಾಗಿದ್ದು, ಬೀರುವಿನಲ್ಲಿ 15 ಗ್ರಾಂ ತೂಕದ ಮೂರು ಜೊತೆ ಓಲೆಗಳು, 10 ಗ್ರಾಂ ಕುತ್ತಿಗೆ ಚೈನ್ ಹಾಗೂ 50 ಗ್ರಾಂ ಸರ ಕಳ್ಳತನ ಮಾಡಲಾಗಿದೆ.
ಮಂಡ್ಯ ತಾಲ್ಲೂಕಿನ ದೊಡ್ಡ ಬಾಣಸವಾಡಿ ಗ್ರಾಮಕ್ಕೆ ಕಾರ್ತಿಕ ಮಾಸದ ಮನೆ ದೇವರ ಪೂಜೆಗೆ ಸಿದ್ದೇಗೌಡ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನೇ ಬಳಸಿಕೊಂಡ ಕಳ್ಳರು ಮನೆಯ ಹಿತ್ತಲಿನಿಂದ ನುಗ್ಗೇಮರದ ಮೇಲೇರಿ ಹೆಂಚುಗಳನ್ನು ತೆಗೆದು, ಜಂತಿಯನ್ನು ಕಿತ್ತು ಅಡುಗೆ ಮನೆಗಿಳಿದಿದ್ದಾರೆ.
ನಂತರ ಬೀರು ಬಾಗಿಲ್ಲನ್ನು ಅಲ್ಲಿಯೇ ಪಕ್ಕದಲ್ಲಿದ್ದ ಕೊಡಲಿಯಿಂದ ಒಡೆದು ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಸರಿ ಸುಮಾರು ರಾತ್ರಿ 10.30 ಗಂಟೆಯ ಸುಮಾರಿನಲ್ಲಿ ಕಳ್ಳತನ ಮಾಡಿದ್ದು, ಪೂಜೆ ಮುಗಿಸಿ 11.15 ಗಂಟೆಗೆ ಗ್ರಾಮಕ್ಕೆ ಕುಟುಂಬ ಆಗಮಿಸಿದೆ.
ಮನೆಯೊಳಗೆ ಬಂದು ನೋಡಿದ ಸಿದ್ದೇಗೌಡ ಅವರ ಹೆಂಡತಿ ರಾಧ ಅವರಿಗೆ ಬೀರು ಮುರಿದಿರುವುದು, ಒಡವೆ ಬಾಕ್ಸ್ ಗಳು ಚೆಲ್ಲಾಡಿರುವುದು ಕಂಡುಬಂದಿದೆ. ಆದರೆ ಅಡುಗೆ ಮನೆಯಲ್ಲಿ 10 ಗ್ರಾಂ ತೂಕದ ಚಿನ್ನದ ಗುಂಡಿನ ಸರವನ್ನು ಕಳ್ಳರು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…
ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…
ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…
ಮಂಡ್ಯ: ರಾಜ್ಯದಲ್ಲಿ ಕೆಆರ್ಎಸ್ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಡ್ಯಾಂನಿಂದ…
ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…