ಮಂಡ್ಯ : ಯಾರು ಅವನು ಪುಟ್ಟರಾಜು, ಸರಿಯಾಗಿ ಮಾತನಾಡೋಕ್ಕೆ ಹೇಳಿ ಅವನಿಗೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ವಿರುದ್ಧ ಏಕವಚನದಲ್ಲಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
CWRC ಮುಂದೆ ಸರಿಯಾದ ವಾದ ಮಂಡಿಸಿಲ್ಲ ಎಂಬ ವಿಚಾರಕ್ಕೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಅವನು ಯಾರು ಪುಟ್ಟರಾಜು ಸರಿಯಾಗಿ ಮಾತನಾಡಲು ಹೇಳಿ. ಸುಮ್ನೆ ಏನೇನೋ ಮಾತನಾಡಿದ್ರೆ ಹೇಗೆ. ನಾನು ಅವರತ್ತಿರ ಕಲಿತುಕೊಳ್ಳಬೇಕಾ..? ನನಗೆ ಬೇಡ ಉತ್ತರ ಕೊಡೋದು, ನಮ್ಮ ಎಂಎಲ್ ಎ ರವಿಗೆ ಉತ್ತರ ಕೊಡಲು ಹೇಳಿ ಪುಟ್ಟರಾಜುಗೆ ಸಾಕು ಎಂದು ಕಿಡಿಕಾರಿದರು.
ಅಲ್ಲದೆ ಅಧಿಕಾರಿಗಳು ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡಿದ್ದಾರೆ. ಖಡಕ್ ಆಗಿ ನೀರು ಬೀಡೋದಿಕ್ಕೆ ಆಗಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ತೀಟೆ ಮಾಡಲು ವಿರೋಧ ಪಕ್ಷದವರಿಗೆ ಬೇರೆ ವಿಚಾರವಿದೆ. ಅವಕಾಶಗಳು ಕೂಡ ಇದೆ. ಪುಟ್ಟರಾಜುಗೆ ಇದೇ ಕೆಲಸನಾ, ಬೇರೆ ಕೆಲಸ ಇಲ್ವಾ..? ಕುಮಾರಸ್ವಾಮಿ ಅವರೇ ಹೇಳಿದ್ರು ನನ್ನ ಮೊದಲ ಆದ್ಯತೆ ಕಾವೇರಿ ಎಂದು. ಕುಮಾರಸ್ವಾಮಿ ಅವರೇ ಮಾತುಕೊಟ್ಟಿದ್ದು, ಈಗ ಅವರೇ ಹೇಳಲಿ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು . ಕಾವೇರಿ ಸಮಸ್ಯೆ ಬಗೆಹರಿಸುವುದು ಕುಮಾರಸ್ವಾಮಿ ಜವಾಬ್ದಾರಿ ಎಂದು ಹೇಳಿದರು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…