ಮಂಡ್ಯ

ಮಂಡ್ಯ | 33 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮಂಡ್ಯ: ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ, ಶಿಕ್ಷಣ, ರಂಗಭೂಮಿ, ನ್ಯಾಯಾಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 33 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ನ.1ರ ಶನಿವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಗಣ್ಯರು ಸಾಧಕರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ (ನ್ಯಾಯಾಂಗ), ನಾಗಮಂಗಲ ತಾಲ್ಲೂಕು ಕಾರಭೈಲು ಗ್ರಾಮದ ಮರಿಯಪ್ಪ (ಮೂಡಲಪಾಯ ಯಕ್ಷಗಾನ), ಎಂ.ಆರ್. ಕುಪ್ಪಸ್ವಾಮಿ, ಮದ್ದೂರು (ರಂಗಭೂಮಿ), ಇಕ್ಕಲಕ್ಕಿ ರಾಮಲಿಂಗೇಗೌಡ, ಹೊಸಹಳ್ಳಿ, ಮಂಡ್ಯ (ಸಹಕಾರ ಕ್ಷೇತ್ರ), ಸಂತೆ ಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ), ಬಿಳಿಗೌಡ, ತಗ್ಗಹಳ್ಳಿ, ಮದ್ದೂರು ತಾ. (ಸಾವಯವ ಕೃಷಿ), ದೇವರಾಜು, ಹಲಗೂರು ಆಸ್ಪತ್ರೆ (ಸಮಾಜ ಸೇವೆ), ಎಚ್.ಪಿ. ಅಶೋಕ್ ಕುಮಾರ್, ಹೊಸಹೊಳಲು, ಕೆ.ಆರ್. ಪೇಟೆ ತಾ. (ಡೋಲು ವಾದಕ), ಸುದೇಶ್ ಪಾಲ್, ಬಿ.ಜೆ. ಸೋಮಶೇಖರ್, ಸುನೀಲ್ ಕುಮಾರ್, ಚನ್ನಮಾದೇಗೌಡ (ಪತ್ರಿಕೋದ್ಯಮ). ಎಂ.ಟಿ. ರಾಜೇಂದ್ರ, ಮುಟ್ಟನಹಳ್ಳಿ, ಮದ್ದೂರು ತಾ. (ಕಾನೂನು ಕ್ಷೇತ್ರ), ಎಂ. ಕೃಷ್ಣೇಗೌಡ, ನಂಬಿನಾಯಕನಹಳ್ಳಿ, ಮದ್ದೂರು ತಾ. (ಕೋಲಾಟ), ಲವಕುಮಾರ, ಕಣಿವೆಕೊಪ್ಪಲು, ಪಾಂಡವಪುರ ತಾ. (ಪರಿಸರ), ಎಂ.ಕೆ. ಮಂಜುನಾಥ್, ಮಂಡ್ಯ ಕೊಪ್ಪಲು, ಶ್ರೀರಂಗಪಟ್ಟಣ ತಾ. (ಸಮಾಜ ಸೇವೆ), ನರಸಿಂಹೇಗೌಡ, ನಾರಾಯಣಪುರ, ಪಾಂಡವಪುರ ತಾ. (ಸಾಹಿತ್ಯ), ಜಿ.ಆರ್. ಸಂಗೀತ, ಗೌಡಹಳ್ಳಿ, ಶ್ರೀರಂಗಪಟ್ಟಣ ತಾ. (ಸುಗಮ ಸಂಗೀತ). ಡಾ. ಅ.ಮ. ಶ್ಯಾಮೇಶ್, ಕೆ.ಆರ್.ಪೇಟೆ (ಸಾಹಿತ್ಯ), ಸಿ.ಎಲ್. ಶಿವಕುಮಾರ್, ಮಂಡ್ಯ (ಕಾನೂನು ಕ್ಷೇತ್ರ), ಎಲ್.ಆರ್. ಸತೀಶ್, ಲಿಂಗಾಪುರ, ಪಾಂಡವಪುರ ತಾ. (ರಂಗಭೂಮಿ), ಎನ್.ಆರ್. ಚಂದ್ರಶೇಖರ್, ಬದರಿಕೊಪ್ಪಲು ಗೇಟ್, ನಾಗಮಂಗಲ (ಸಮಾಜ ಸೇವೆ), ಡಾ. ಆರ್.ಪಿ. ಛಾಯಾ, ಮಂಡ್ಯ (ಜಾನಪದ ಕ್ಷೇತ್ರ), ಶೇಖ್ ಉಬೇದುಲ್ಲಾ, ಮಂಡ್ಯ (ಸಮಾಜ ಸೇವೆ).

ಇದನ್ನೂ ಓದಿ:-ಪೊಲೀಸ್ ಇಲಾಖೆ ಲಂಚ ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್‌

ಮಂಜುಳಾ ರಮೇಶ್, ಮಲ್ಲನಾಯಕನಕಟ್ಟೆ, ಮಂಡ್ಯ ತಾ. (ಸಮಾಜ ಸೇವೆ), ಎಸ್. ಪ್ರಕಾಶ್, ಸೊಳ್ಳೇಪುರ, ಮದ್ದೂರು ತಾ. (ಕೃಷಿ), ಬಿ.ಆನಂದ, ಚನ್ನೇಗೌಡ ಬಡಾವಣೆ, ಮದ್ದೂರು ತಾ. (ಸಮಾಜ ಸೇವೆ), ಡಿ.ಯು. ಮನೋಜ್, ದಮ್ಮಸಂದ್ರ, ನಾಗಮಂಗಲ ತಾ. (ಕ್ರೀಡಾ ಕ್ಷೇತ್ರ), ಎಂ.ಎಲ್.ತುಳಸೀಧರ್, ಮಂಡ್ಯ (ಸಮಾಜ ಸೇವೆ), ಗೆಳೆಯರ ಬಳಗ, ಸಂತೆಬಾಚಹಳ್ಳಿ, ಕೆ.ಆರ್. ಪೇಟೆ ತಾ. (ಸಾಮಾಜಿಕ ಸೇವೆ), ಡಾ. ಕೆ.ಚಂದ್ರಶೇಖರ್, ಮಂಡ್ಯ (ವೈದ್ಯಕೀಯ ಸೇವೆ), ತಿಮ್ಮರಾಯಿಗೌಡ, ಚಾಕೇನಹಳ್ಳಿ, ನಾಗಮಂಗಲ ತಾ. (ರಂಗಭೂಮಿ), ಸಿ. ನಿಶ್ಚಿತ್‌ಗೌಡ, ಚಾಮಲಾಪುರ, ನಾಗಮಂಗಲ ತಾ. ಕ್ರೀಡೆ.

ಆಂದೋಲನ ಡೆಸ್ಕ್

Recent Posts

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

7 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

10 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

10 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

10 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

11 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

12 hours ago