ಮಂಡ್ಯ

ಮಂಡ್ಯ | 33 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮಂಡ್ಯ: ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ, ಶಿಕ್ಷಣ, ರಂಗಭೂಮಿ, ನ್ಯಾಯಾಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 33 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ನ.1ರ ಶನಿವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಗಣ್ಯರು ಸಾಧಕರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ (ನ್ಯಾಯಾಂಗ), ನಾಗಮಂಗಲ ತಾಲ್ಲೂಕು ಕಾರಭೈಲು ಗ್ರಾಮದ ಮರಿಯಪ್ಪ (ಮೂಡಲಪಾಯ ಯಕ್ಷಗಾನ), ಎಂ.ಆರ್. ಕುಪ್ಪಸ್ವಾಮಿ, ಮದ್ದೂರು (ರಂಗಭೂಮಿ), ಇಕ್ಕಲಕ್ಕಿ ರಾಮಲಿಂಗೇಗೌಡ, ಹೊಸಹಳ್ಳಿ, ಮಂಡ್ಯ (ಸಹಕಾರ ಕ್ಷೇತ್ರ), ಸಂತೆ ಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ), ಬಿಳಿಗೌಡ, ತಗ್ಗಹಳ್ಳಿ, ಮದ್ದೂರು ತಾ. (ಸಾವಯವ ಕೃಷಿ), ದೇವರಾಜು, ಹಲಗೂರು ಆಸ್ಪತ್ರೆ (ಸಮಾಜ ಸೇವೆ), ಎಚ್.ಪಿ. ಅಶೋಕ್ ಕುಮಾರ್, ಹೊಸಹೊಳಲು, ಕೆ.ಆರ್. ಪೇಟೆ ತಾ. (ಡೋಲು ವಾದಕ), ಸುದೇಶ್ ಪಾಲ್, ಬಿ.ಜೆ. ಸೋಮಶೇಖರ್, ಸುನೀಲ್ ಕುಮಾರ್, ಚನ್ನಮಾದೇಗೌಡ (ಪತ್ರಿಕೋದ್ಯಮ). ಎಂ.ಟಿ. ರಾಜೇಂದ್ರ, ಮುಟ್ಟನಹಳ್ಳಿ, ಮದ್ದೂರು ತಾ. (ಕಾನೂನು ಕ್ಷೇತ್ರ), ಎಂ. ಕೃಷ್ಣೇಗೌಡ, ನಂಬಿನಾಯಕನಹಳ್ಳಿ, ಮದ್ದೂರು ತಾ. (ಕೋಲಾಟ), ಲವಕುಮಾರ, ಕಣಿವೆಕೊಪ್ಪಲು, ಪಾಂಡವಪುರ ತಾ. (ಪರಿಸರ), ಎಂ.ಕೆ. ಮಂಜುನಾಥ್, ಮಂಡ್ಯ ಕೊಪ್ಪಲು, ಶ್ರೀರಂಗಪಟ್ಟಣ ತಾ. (ಸಮಾಜ ಸೇವೆ), ನರಸಿಂಹೇಗೌಡ, ನಾರಾಯಣಪುರ, ಪಾಂಡವಪುರ ತಾ. (ಸಾಹಿತ್ಯ), ಜಿ.ಆರ್. ಸಂಗೀತ, ಗೌಡಹಳ್ಳಿ, ಶ್ರೀರಂಗಪಟ್ಟಣ ತಾ. (ಸುಗಮ ಸಂಗೀತ). ಡಾ. ಅ.ಮ. ಶ್ಯಾಮೇಶ್, ಕೆ.ಆರ್.ಪೇಟೆ (ಸಾಹಿತ್ಯ), ಸಿ.ಎಲ್. ಶಿವಕುಮಾರ್, ಮಂಡ್ಯ (ಕಾನೂನು ಕ್ಷೇತ್ರ), ಎಲ್.ಆರ್. ಸತೀಶ್, ಲಿಂಗಾಪುರ, ಪಾಂಡವಪುರ ತಾ. (ರಂಗಭೂಮಿ), ಎನ್.ಆರ್. ಚಂದ್ರಶೇಖರ್, ಬದರಿಕೊಪ್ಪಲು ಗೇಟ್, ನಾಗಮಂಗಲ (ಸಮಾಜ ಸೇವೆ), ಡಾ. ಆರ್.ಪಿ. ಛಾಯಾ, ಮಂಡ್ಯ (ಜಾನಪದ ಕ್ಷೇತ್ರ), ಶೇಖ್ ಉಬೇದುಲ್ಲಾ, ಮಂಡ್ಯ (ಸಮಾಜ ಸೇವೆ).

ಇದನ್ನೂ ಓದಿ:-ಪೊಲೀಸ್ ಇಲಾಖೆ ಲಂಚ ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್‌

ಮಂಜುಳಾ ರಮೇಶ್, ಮಲ್ಲನಾಯಕನಕಟ್ಟೆ, ಮಂಡ್ಯ ತಾ. (ಸಮಾಜ ಸೇವೆ), ಎಸ್. ಪ್ರಕಾಶ್, ಸೊಳ್ಳೇಪುರ, ಮದ್ದೂರು ತಾ. (ಕೃಷಿ), ಬಿ.ಆನಂದ, ಚನ್ನೇಗೌಡ ಬಡಾವಣೆ, ಮದ್ದೂರು ತಾ. (ಸಮಾಜ ಸೇವೆ), ಡಿ.ಯು. ಮನೋಜ್, ದಮ್ಮಸಂದ್ರ, ನಾಗಮಂಗಲ ತಾ. (ಕ್ರೀಡಾ ಕ್ಷೇತ್ರ), ಎಂ.ಎಲ್.ತುಳಸೀಧರ್, ಮಂಡ್ಯ (ಸಮಾಜ ಸೇವೆ), ಗೆಳೆಯರ ಬಳಗ, ಸಂತೆಬಾಚಹಳ್ಳಿ, ಕೆ.ಆರ್. ಪೇಟೆ ತಾ. (ಸಾಮಾಜಿಕ ಸೇವೆ), ಡಾ. ಕೆ.ಚಂದ್ರಶೇಖರ್, ಮಂಡ್ಯ (ವೈದ್ಯಕೀಯ ಸೇವೆ), ತಿಮ್ಮರಾಯಿಗೌಡ, ಚಾಕೇನಹಳ್ಳಿ, ನಾಗಮಂಗಲ ತಾ. (ರಂಗಭೂಮಿ), ಸಿ. ನಿಶ್ಚಿತ್‌ಗೌಡ, ಚಾಮಲಾಪುರ, ನಾಗಮಂಗಲ ತಾ. ಕ್ರೀಡೆ.

ಆಂದೋಲನ ಡೆಸ್ಕ್

Recent Posts

ಉಡುತೊರೆ ಹಳ್ಳ ಜಲಾಶಯದ 490 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಪುಟಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಕಟ್ಟೆಗಳಿಗೆ ಕಾವೇರಿ…

8 hours ago

ಹನೂರು| ಕುಡಿಯುವ ನೀರಿನ ಸಮಸ್ಯೆ ಉದ್ಭವ: ಅಧಿಕಾರಿಗಳ ವಿರುದ್ಧವೇ ದೂರು ನೀಡಿದ ಗ್ರಾಮಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸುತ್ತಿಲ್ಲ.…

8 hours ago

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

9 hours ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

9 hours ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

9 hours ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

9 hours ago