ಮಂಡ್ಯ

ಯಮ ಬಂದು ಕರೆದರೆ ಅಮ್ಮನ ಕೆಲಸ ಮುಗಿಸಿ ಬರುತ್ತೇನೆ ಎಂದು ಹೇಳುತ್ತೇನೆ; ಸುಮಲತಾ ಪರ ದರ್ಶನ್‌ ಬ್ಯಾಟಿಂಗ್‌

ಮಂಡ್ಯ: ಸಂಸದೆ ಸುಮಲತಾಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿದ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಎಲ್ಲರ ಕುತೂಹಲಕ್ಕೆ ಇಂದು ( ಏಪ್ರಿಲ್‌ 3 ) ಸುಮಲತಾ ತಮ್ಮ ನಿಲುವನ್ನು ಬಹಿರಂಗಪಡಿಸುವ ಮೂಲಕ ತೆರೆಎಳೆದಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ, ಆದರೆ ಮಂಡ್ಯವನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ. ನಗರದ ಕಾಳಿಕಾಂಬ ದೇವಾಲಯದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸುಮಲತಾ ಈ ನಿರ್ಧಾರವನ್ನು ಪ್ರಕಟಿಸಿದರು.

ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ಅವರಿಗೆ ತೀವ್ರ ಬೆಂಬಲವನ್ನು ನೀಡಿದ್ದ ನಟ ದರ್ಶನ್‌ ಸಹ ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು. ʼನನ್ನ ಸೆಲೆಬ್ರಿಟಿಗಳಿಗೆ, ಹಿರಿಯರಿಗೆ ನಮಸ್ಕಾರ. ಇದೇ ಐದು ವರ್ಷಗಳ ಹಿಂದೆ ಪ್ರಚಾರ ಮಾಡಲು ಬಂದಾಗ ಎಲ್ಲಾ ರೈತರು ಎಳೆನೀರು ಕೊಟ್ಟು ನನ್ನನ್ನು ತಣ್ಣಗೆ ಮಾಡಿದ್ದರು. ಅವರಿಗೆ ಧನ್ಯವಾದ. ಆರತಿ ಬೆಳಗಿದ ತಾಯಂದಿರಿಗೂ ನನ್ನ ಧನ್ಯವಾದʼ ಎಂದು ದರ್ಶನ್‌ ಮೊದಲಿಗೆ ಕಡೆಯ ಚುನಾವಣಾ ಪ್ರಚಾರದ ಸಂದರ್ಭವನ್ನು ಮೆಲುಕು ಹಾಕಿದರು.

ʼಯಮ ಕರೆದರೆ ಅಮ್ಮನ ಕೆಲಸ ಇದೆ ಮುಗಿಸಿ ಬರುತ್ತೇನೆ ಎಂದು ಎಂದು ಹೇಳುತ್ತೇನೆ. ಅವರ ಕುಟುಂಬದ ಜತೆಗಿನ ಬಾಂಧವ್ಯ ಅಂತಹದ್ದು. ಇವತ್ತು ಕೈಗೆ ಆಪರೇಷನ್‌ ಇತ್ತು. ಆದರೆ ಅಮ್ಮನ ಕೆಲಸ ಇದೆ ಎಂದು ಹೇಳಿ ಬಂದಿದ್ದೇನೆ. ಇಂದು ಸಂಜೆ ಅಡ್ಮಿಟ್‌ ಆಗಿ, ನಾಳೆ ಆಪರೇಷನ್‌ ಮಾಡಿಸಿಕೊಳ್ಳುತ್ತೇನೆʼ ಎಂದರು.

ʼಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಹಿಂದೆ ಇರುತ್ತೇನೆ. ತಾಯಿ ತಾಯಿನೇ. ಏನೇ ಹೇಳಿದ್ರೂ ನಾನು ಮಾಡುತ್ತೇನೆ. ಹಾಳು ಬಾವಿಗೆ ಬೀಳು ಅಂದ್ರೂ ಬೀಳುತ್ತೇನೆ. ನಾನು ಮತ್ತು ನನ್ನ ತಮ್ಮ ಅವರ ಮಾತಿಗೆ ಬದ್ಧವಾಗಿರುತ್ತೇವೆʼ ಎಂದು ಮಾತನಾಡಿದರು.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago