ಮಂಡ್ಯ : ನಗರದ ಕೆರೆ ಅಂಗಳದಲ್ಲಿ ತಮಿಳು ಸ್ಲಂ ನಿವಾಸಿಗಳಿಗಾಗಿ ಕಟ್ಟಿದ್ದ ಮನೆಗಳು ಅನ್ಯರ ಪಾಲಾಗಿವೆ.
ಸರ್ಕಾರ ಸು.27 ಕೋಟಿ ರೂ ವೆಚ್ಚದಲ್ಲಿ ನಗರದ ಸ್ಲಂ ನಿವಾಸಿಗಳಿಗಾಗಿ 576 ಮನೆಗಳನ್ನು ನಿರ್ಮಿಸಿತ್ತು. ಆದರೆ, ಸ್ಲಂ ನಿವಾಸಿಗಳು ಸ್ಥಳಾಂತರಗೊಳ್ಳದ ಹಿನ್ನೆಲೆ ಮನೆಗಳು ಪಾಳು ಬಿದ್ದಿದ್ದವು.
ಈ ನಡುವೆ ಖಾಲಿ ಮನೆಗಳನ್ನ ಹಿಡಿದುಕೊಂಡ್ರೆ ಆ ಮನೆ ಅವರಿಗೆ ಎಂದು ಸುಳ್ಳು ವದಂತಿ ಹರಡಿದೆ. ಈ ಹಿನ್ನಲೆ ಪಾಳು ಬಿದ್ದಿದ್ದ ಮನೆಗಳಿಗೆ ಫಲಾನುಭವಿಗಳಲ್ಲದ ಅನ್ಯರು ಲಾರಿಗಳ ಮೂಲಕ ತಂಡೋಪ ತಂಡವಾಗಿ ಬಂದು ಮನೆಗಳಿಗೆ ಸೇರಿಕೊಂಡಿದ್ದಾರೆ.
ಸುಳ್ಳು ವದಂತಿ ನಂಬಿದ ಅನ್ಯರು ಖಾಲಿ ಬಿದ್ದಿದ್ದ ಮನೆಗಳಿಗೆ ನುಗ್ಗಿ ಬಾಗಿಲ ಮೇಲೆ ಕುಳಿತು. ನಮಗೆ ಮನೆ ಇಲ್ಲಾ. ಹೀಗಾಗಿ ಖಾಲಿ ಇರುವ ಮನೆ ಜಾಗ ನಾವು ಹಿಡಿದುಕೊಂಡಿದ್ದೀವಿ ಎನ್ನುತ್ತಿದ್ದಾರೆ.
ಸ್ಥಳಕ್ಕೆ ಮಂಡ್ಯ ಪೊಲೀಸರ ಭೇಟಿ ನೀಡಿ, ಸ್ಥಳದಲ್ಲಿ ಜಮಾಯಿಸಿರುವ ಅನ್ಯರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…
ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್ಟಿಆರ್ ಹಾಗೂ ಎಚ್ಎಸ್ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…
ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…
ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…
ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಿಎಂ ಡಿ.ಕೆ.ಶಿವಕುಮಾರ್…
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…