ಮಂಡ್ಯ

ಕಣ್ಮನ ಸೆಳೆದ ಕೃಷಿ ಪ್ರಾತ್ಯಕ್ಷಿಕೆಗಳು

ಮಂಡ್ಯ : ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ವಿಸಿ ಫಾರಂ ಆವರಣದಲ್ಲಿ ಕೃಷಿ ಪ್ರಾತ್ಯಕ್ಷೆಗಳು ನೋಡುಗರ ಕಣ್ಮನ ಸೆಳೆದವು.

ಕರ್ನಾಟಕದಲ್ಲಿ ಒಟ್ಟು ೧೮೦ ದೇಶಿ ಭತ್ತದ ತಳಿಗಳಿವೆ. ೧೮೦ ಭತ್ತದ ತಳಿಗಳನ್ನು ವಿಸಿ ಫಾರಂನಲ್ಲಿ ಬೆಳೆಸಲಾಗಿದೆ. ಜಿಂಕ್ ಮತ್ತು ಐರನ್ ಅಂಶಗಳು ಹೆಚ್ಚು ಇರುವ ಭತ್ತದ ತಳಿಗಳು ಇಲ್ಲಿವೆ. ಫಿಲಿಪೈನ್ಸ್ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ನಮ್ಮ ಹವಾಮಾನಕ್ಕೆ ಸರಿಹೊಂದುವ ಭತ್ತದ ತಳಿಗಳನ್ನು ಬೆಳೆಸಲಾಗುವುದು ಹಾಗೂ ಈ ಭತ್ತದವನ್ನು ಸಕ್ಕರೆ ಖಾಯಿಲೆ ಇರುವವರು ಕೂಡ ತಿನ್ನ ಬಹುದಾಗಿದೆ.

೧೮ ದೇಶಿ ರಾಗಿ ತಳಿಗಳನ್ನು ಅಭಿವೃದ್ಧಿಪಡಿಸಿ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಇವುಗಳಿಂದ ಧಾನ್ಯದ ಇಳುವರಿ ಹಾಗೂ ಬೇವಿನ ಇಳುವರಿ ಹೆಚ್ಚು ನಿರೀಕ್ಷಿಸಬಹುದು. ಸಾವಯವ ಕೃಷಿಯಿಂದ ರಾಗಿ, ಕಬ್ಬು, ಸೂರ್ಯಕಾಂತಿ, ಕಡಲೆಕಾಯಿ, ಸೋಯಾಬಿನ್, ಉದ್ದು, ಹೆಸರುಕಾಳು, ಗೋರಿ ಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ ಬೆಳೆಯಲಾಗಿದೆ.

ಇದನ್ನೂ ಓದಿ:-ಮೋದಿ-ಪುಟಿನ್‌ ಮಾತುಕತೆ : ರಕ್ಷಣಾ ಒಪ್ಪಂದಗಳ ಬಗ್ಗೆ ಚರ್ಚೆ

ಆಕರ್ಷಿಸಿದ ಕಸಿ ಟೊಮೊಟೊ ಬದನೆಕಾಯಿ ಗಿಡ
ಕೃಷಿ ವಿಜ್ಞಾನಿಗಳ ಮಂಡ್ಯ ವಿ.ಸಿ. ಫಾರಂ ಆವರಣದಲ್ಲಿ ಬೆಳೆಸಲಾದ ಕಸಿ ಟೊಮೋಟೊ ಮತ್ತು ಬದನೆಕಾಯಿ ಒಂದೇ ಗಿಡದಲ್ಲಿ ಟೊಮೋಟೊ ಮತ್ತು ಬದನೆಕಾಯಿ ಬಿಟ್ಟಿದ್ದು, ಇದು ನೋಡುಗರನ್ನು ಆಕರ್ಷಿಸುತ್ತದೆ. ವಿವಿಧ ಅಲಂಕಾರ ಹೂಗಳನ್ನು ವಿ.ಸಿ.ಫಾರಂನಲ್ಲಿ ಬೆಳೆಯಲಾಗಿದೆ.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

8 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

8 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

10 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

11 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

12 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

12 hours ago