ಮಂಡ್ಯ

ಕರ್ವಾಲೋಗೆ 50 ವರ್ಷ ; ಧ್ಯಾನಸ್ಥ ಮನಸ್ಸಿನ ಪ್ರಕೃತಿಯ ದರ್ಶನವೇ ಕರ್ವಾಲೋ : ನಾಗತಿಹಳ್ಳಿ ಚಂದ್ರಶೇಖರ್

ಮಂಡ್ಯ : ಕಳೆದ ಐದು ದಶಕಗಳಲ್ಲಿ ಕರ್ವಾಲೋ ಅಂತಹ ಮತ್ತೊಂದು ಕೃತಿ ರಚನೆಯಾಗಿಲ್ಲ, ಪೂರ್ಣಚಂದ್ರ ತೇಜಸ್ವಿ ಅವರು ಪ್ರಕೃತಿಯನ್ನು ಆರಾಧಿಸಿದ, ಧ್ಯಾನಿಸಿದ, ತಮ್ಮ ಒಳನೋಟದಿಂದ ಅನುಭವಿಸಿದ ಸಕಲವನ್ನು ಕರ್ವಾಲೋ ಕೃತಿಯಲ್ಲಿ ಅಭಿವ್ಯಕ್ತಿಸಿದ್ದಾರೆ, ಅದು ಧ್ಯಾನಸ್ಥ ಮನಸ್ಸಿನ ದರ್ಶನ ಎಂದು ಖ್ಯಾತ ಸಾಹಿತಿ ಚಲನ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ,ಮಂಡ್ಯ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಯಡಿ “ಕರ್ವಾಲೋ 50 ವರ್ಷ- ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಳೆದ 50 ವರ್ಷಗಳಲ್ಲಿ 87 ಮುದ್ರಣಗಳನ್ನು ಕಂಡಿರುವ ಕರ್ವಾಲೊ ಕನ್ನಡದ ಅತ್ಯಂತ ವಿಶಿಷ್ಟವಾದ ಕೃತಿಯಾಗಿದೆ, ಈ ಕಾದಂಬರಿಯ ವಿಸ್ಮಯತೆ ಇರುವುದೇ ಅದರ ಸರಳತೆಯಲ್ಲಿ. ತಮ್ಮ ತಂದೆಯ ಪ್ರಭಾವಳಿಯಿಂದ ಹೊರಬಂದು ಎಲ್ಲ ರೀತಿಯ ಲೌಕಿಕದ ಆಮಿಷಗಳನ್ನ ಮೀರಿ ಕಾಡಿನಲ್ಲಿ ಕಳೆದು ಹೋಗಿ ,ಕಾಡಿನ ಪಾಡುಗಳನ್ನು ಅನುಭವಿಸಿ ,ಅದನ್ನೇ ಬರಹದ ಬಂಡವಾಳ ಮಾಡಿಕೊಂಡು ಅನನ್ಯವಾದ ಕೃತಿ ರಚನೆ ಮಾಡಿದ ತೇಜಸ್ವಿ ಕನ್ನಡ ನಾಡು ಕಂಡ ಅತ್ಯಂತ ಅದ್ಭುತ ಬರಹಗಾರ ಎಂದು ಅವರು ಬಣ್ಣಿಸಿದರು.

ಪ್ರಕೃತಿಯನ್ನು ನೋಡುವ ಎರಡು ತಲೆಮಾರುಗಳ ದೃಷ್ಟಿಕೋನ ಹೇಗಿರುತ್ತದೆ ಎಂಬುದಕ್ಕೆ ಕುವೆಂಪು ಹಾಗೂ ತೇಜಸ್ವಿ ಅತ್ಯುತ್ತಮ ಉದಾಹರಣೆ ಎಂದು ಅವರು ಹೇಳಿದರು. ಕರ್ವಾಲೋ ಕೃತಿಯಲ್ಲಿ ಬರುವ ಮಂದಣ್ಣ ಇತರ ಕಥೆ, ಕಾದಂಬರಿಗಳಲ್ಲಿ ಬರುವ ನಾಯಕನ ಎಲ್ಲಾ ಕಲ್ಪನೆಗಳನ್ನು ಮೀರಿದ ಅತ್ಯಂತ ಸರಳ ಸ್ವಾಭಾವಿಕ, ನಮ್ಮ ನೆರೆಮನೆಯ ವ್ಯಕ್ತಿಯಾಗಿ ಮೂಡಿಬಂದಿದ್ದಾನೆ. ಆತನ ಮತ್ತು ನಿಸರ್ಗ ವಿಜ್ಞಾನಿ ಕರ್ವಾಲೋ ಅವರ ನಡುವಿನ ಅನುಬಂಧ ಕಾದಂಬರಿಯಲ್ಲಿ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ. ನಿಸರ್ಗದೊಳಗಿನ ರಹಸ್ಯ ಭೇದಿಸುವ ಅವರ ತವಕ, ಹಾರುವ ಓತಿಯನ್ನು ಹಿಡಿಯುವ ಸಾಹಸ ಎಲ್ಲವೂ ಕರ್ವಾಲೋ ದೊಳಗೆ ರೋಚಕವಾಗಿ ಮೂಡಿ ಬಂದಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಓದಲೇ ಬೇಕಾದ ಅನುಭವಿಸಬೇಕಾದ ಕಾದಂಬರಿ ಕರ್ವಾಲೊ ಎಂದ ಅವರು ಎ ಐ ತಂತ್ರಜ್ಞಾನವೂ ಸಹ ಇಂತಹ ಅದ್ಭುತ ಸೃಜನಶೀಲ ಕೃತಿ ರಚನೆ ಮಾಡಲಾರದು ಎಂದು ತಿಳಿಸಿದರು.

ಇದನ್ನು ಓದಿ: ಶಬರಿ ಮಲೆ ಅಯ್ಯಪ್ಪ ಭಕ್ತರಿಗೆ ವಂಚನೆ : ನಕಲಿ ವೆಬ್‌ಸೈಟ್ ಪತ್ತೆ

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿ. ಚಂದ್ರೇಗೌಡರು ತೇಜಸ್ವಿ ಅವರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು ತೇಜಸ್ವಿ ಕಾಡಿನೊಳಗೆ ಹೇಗೆ ಬದುಕಿದ್ದರು, ಅವರ ಜೀವನ ದೃಷ್ಟಿ ಹೇಗೆ ಪ್ರಕೃತಿಯ ಜೊತೆ ಥಳುಕು ಹಾಕಿಕೊಂಡಿತ್ತು ಎಂಬ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡರು.

ಪರಿಸರ ನಾಶದ ಬಗ್ಗೆ ತೇಜಸ್ವಿ ಅವರು ಕೊಟ್ಟ ಎಚ್ಚರಿಕೆಯ ಬಗ್ಗೆ ಇಂದಿನ ಜನಾಂಗ ಗಮನಹರಿಸಬೇಕು. ಪ್ರಕೃತಿಯೊಂದಿಗೆ ಅವರಿಗಿದ್ದ ಅಗಾಧ ತಾಧ್ಯಾತ್ಮಿಕತೆ , ಸಾಮಾನ್ಯರೊಂದಿಗಿನ ಅವರ ಒಡನಾಟ ಇವೆಲ್ಲವೂ ವಿಸ್ಮಯ ಹುಟ್ಟಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ ಮಕ್ಕಳು ಪುಸ್ತಕ ಪ್ರೇಮಿಗಳಾಗಬೇಕು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಜೀವನದ ಪರೀಕ್ಷೆ ಎದುರಿಸಲು ಅಗತ್ಯವಾದ ಸಾಧನೆವೇ ಸಾಹಿತ್ಯ ಹಾಗಾಗಿ ಸಾಹಿತ್ಯ ಕೃತಿಗಳ ಅಧ್ಯಯನವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ ಶಿವಚಿತ್ತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕುಲ ಸಚಿವ ಎಂಪಿ ಕೃಷ್ಣಕುಮಾರ್ ಪ್ರೊಫೆಸರ್ ಯೋಗ ನರಸಿಂಹಾಚಾರಿ, ಉಪ ಕುಲಸಚಿವ ಡಾ.ಎಂ ವೈ ಶಿವರಾಮು ಹಾಗೂ ಪ್ರಾಂಶುಪಾಲರಾದ ಸ್ವರ್ಣ ಬಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಅವರು ಪ್ರಾಸ್ತಾವಿಕ ಮಾತನಾಡಿದರು. ಮಂಡ್ಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಕೆ ಪಿ ಸ್ವಾಗತಿಸಿದರು.

ಆಂದೋಲನ ಡೆಸ್ಕ್

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

5 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

7 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

8 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

10 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

16 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

22 hours ago