ಮಂಡ್ಯ

ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ ಕಾರ್ಯಕ್ರಮದ ಮೂರನೇ ಸಂಚಿಕೆ

ಮಂಡ್ಯ: ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಜೊತೆಗೂಡಿ ಆಯೋಜಿಸಿದ್ದ ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ ಕಾರ್ಯಕ್ರಮದ ಮೂರನೇಯ ಸಂಚಿಕೆ ಯಶಸ್ವಿಯಾಗಿ ಜರುಗಿತು.

ನಾಟಕ ನೋಡುವುದಕ್ಕೇ ಜನ ಬರುವುದಿಲ್ಲ ಇನ್ನೂ ನಾಟಕ ಕೃತಿ ಓದಿಕೊಂಡು ಬಂದು ಸಂವಾದ ನಡೆಸುವುದು ಉಂಟೇ ಎಂಬ ಸಂಶಯವನ್ನು ತುಂಬಿದ ಸಭಾಂಗಣ ಹಾಗೂ ಎರಡು ತಾಸಿನ ಚರ್ಚೆ ಸುಳ್ಳು ಮಾಡಿತು. ಬೀದಿ ನಾಟಕದಿಂದ ಶುರುವಾಗಿ ವಾಟ್ಸ್ ಅಪ್ ಯೂನಿವರ್ಸಿಟಿವೆರೆಗೆ ಹಲವು ವಿಷಯಗಳು ಬಂದು ಹೋದವು, ಜೇನ್ ಪಾಲ್ ಸಾರ್ತ್ರೆಯಿಂದ ಕೆ. ವಿ. ಶಂಕರಗೌಡ, ಜಿ. ಮಾದೇಗೌಡರರವೆರೆಗೆ ರಾಜಕೀಯ ಸಿದ್ಧಾಂತ ಹಾಗೂ ಜನಪರ ವ್ಯಕ್ತಿತ್ವ ಹಾಗೂ ನಿಲುವುಗಳ ಕುರಿತೂ ಮಾತುಕತೆಯಾಯಿತು.

ಕಲೆಗಾಗಿ ಕಲೆ, ಕಲಾವಿದ ಯಾವ ಪಂಥಕ್ಕೂ ಸೇರಬಾರದು ಎಂಬ ಸ್ವಲಾಭ ಕೇಂದ್ರೀತ ಚಿಂತನೆಗಳನ್ನು ರಾಷ್ಟ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದರೂ ತಮ್ಮನ್ನು ರಂಗಕರ್ಮಿ ಎಂತಲೇ ಹೆಮ್ಮೆಯಿಂದ ಕರೆದುಕೊಳ್ಳುವ ಬಿ. ಸುರೇಶರವರು ಯಾವ ಮುಲಾಜೂ ಇಲ್ಲದೇ ಧೂಳಿಪಟವಾಗಿಸಿಬಿಟ್ಟರು.

ಸಂವಾದವನ್ನು ಕಳೆದ ಎರಡು ಸಂಚಿಕೆ ಗಳಿಗಿಂತ ಭಿನ್ನವಾಗಿಸಿದ ಬಿ. ಸುರೇಶರಿಗೆ ಕಾರ್ಯಕ್ರಮದ ಯಶಸ್ಸಿಗೆ ದುಡಿದವರಿಗೆ, ಪ್ರಾಯೋಜಕರಿಗೆ, ಸುದ್ದಿ ಮನೆಯ ಮಿತ್ರರಿಗೆ, ಪುಸ್ತಕ ಓದಿ ಸಂವಾದ ನಡೆಸಿದ ಓದುಗರಿಗೆ, ಭಾಗವಹಿಸಿದ ಸಾರ್ವಜನಿಕರಿಗೆ, ದೂರದಿಂದಲೇ ಹರಸಿದ ಎಲ್ಲರಿಗೆ ತುಂಬು ಹೃದಯದ ಧನ್ಯವಾದಗಳು.

(ಇದು ಪ್ರತೀ ತಿಂಗಳ ಮೊದಲ ಭಾನುವಾರ ಮಂಡ್ಯದ ಗಾಂಧಿ ಭವನದಲ್ಲಿ ನಡೆಯುವ ಖಾಯಂ ಕಾರ್ಯಕ್ರಮ. ಆಪ್ತ ಸಂವಾದ ಕಮ್ಯೂನಿಟಿ ಸೇರುವ ಮೂಲಕ ನೀವೂ ಸಹ ತಿಂಗಳಿಗೊಂದು ಪುಸ್ತಕ ಓದಿ ಆ ಪುಸ್ತಕದ ಲೇಖಕರೊಡನೆ ಸಂವಾದ ನಡೆಸಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಪುಸ್ತಕ ಓದಲು ಸ್ಕಾಲರ್ಷಿಪ್ ನೀಡಬಹುದು, ಕಾರ್ಯಕ್ರಮವನ್ನು ಪ್ರಾಯೋಜಿಸಬಹುದು)

 

ಆಂದೋಲನ ಡೆಸ್ಕ್

Recent Posts

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

12 mins ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

13 mins ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

13 mins ago

ಮಂಡ್ಯ: ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ

ಮಂಡ್ಯ: ಮುಂಬರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲವಾಗುವಂತೆ ಯಾವುದೇ ಅಡಚಣೆಯಿಲ್ಲದೇ ವಿವಿಧ ಬೆಳೆಗಳಿಗೆ ಅವಶ್ಯಕವಾದ ರಸಗೊಬ್ಬರಗಳನ್ನು ನಿಯಮಾನುಸಾರ…

14 mins ago

ಗಾಯಕಿ ಮಂಗ್ಲಿಯಿಂದ ೧೦ ಕೋಟಿ ವಂಚನೆ, ಕೊಲೆ ಬೆದರಿಕೆ ಆರೋಪ

ಬೆಂಗಳೂರು: ಗಾಯಕಿ ಮಂಗ್ಲಿ ಮತ್ತು ಅವರ ಸಹೋದರನ ವಿರುದ್ಧ ೧೦ ಕೋಟಿ ರೂ. ಮೋಸದ ಆರೋಪದಡಿ ಪಂಜಗುಟ್ಟ ಪೊಲೀಸರು ಪ್ರಕರಣ…

2 hours ago

ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಒಂದು ವಾರ ಮಳೆ, ಕರಾವಳಿಯಲ್ಲಿ ಬಿಸಿ ಗಾಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ…

2 hours ago