ಕೊಡಗು

ಶೌಚಾಲಯದ ಸೆಫ್ಟಿಕ್‌ ಟ್ಯಾಂಕಿಗೆ ಬಿದ್ದ ಕಾಡಾನೆ ರಕ್ಷಣೆ

ನಾಪೋಕ್ಲು : ರೆಸಾರ್ಟ್ ಒಂದರ ಪಕ್ಕದಲ್ಲಿದ್ದ ಶೌಚಾಲಯದ ಸೆಫ್ಟಿಕ್ ಟ್ಯಾಂಕಿಗೆ ಕಾಡಾನೆಯೊಂದು ಬಿದ್ದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದಲ್ಲಿ ನಡೆದಿದೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಕೀಮಲೆಕಾಡು ಎಂಬಲ್ಲಿ ಬುಧವಾರ ಮುಂಜಾನೆ ಘಟನೆ ನಡೆದಿದೆ. ಗ್ರಾಮದ ನಿವಾಸಿ ಪಟ್ರಪಂಡ ಜಗದೀಶ್ ಅಪ್ಪಯ್ಯ ಮಾಲೀಕತ್ವದ ಕೂರ್ಗ್ ಹೆರಿಟೇಜ್ ರೆಸಾರ್ಟ್ ಸಮೀಪದಲ್ಲಿ ಕಾಡಾನೆಗಳ ಗುಂಪು ಸಂಚರಿಸುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ರೆಸಾರ್ಟ್‌ನ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಒಳಗಡೆ ಬಿದ್ದಿದೆ. ಟ್ಯಾಂಕಿನ ಒಳಗಡೆ ಬಿದ್ದ ಕಾಡಾನೆ ಮೇಲೇಳಲಾಗದೆ ನರಲಾಡುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿತ್ತು. ಇದರ ಜೊತೆಗಿದ್ದ ಮತ್ತೊಂದು ಆನೆ ಸೆಪ್ಟಿಕ್ ಟ್ಯಾಂಕಿನ ಒಳಗಡೆ ಬಿದ್ದ ಆನೆಯನ್ನು ಮೇಲೇತ್ತಲು ಪ್ರಯತ್ನಪಡುವ ದೃಶ್ಯ ಕಂಡು ಬಂದಿದೆ. ಆದರೆ, ಪ್ರಯತ್ನ ಸಫಲತೆ ಕಾಣದೆ ಟ್ಯಾಂಕ್ ಒಳಗಡೆಯಿಂದ ನರಳಾಡಿದ ಕಾಡಾನೆ ಹರಸಾಹಸಪಟ್ಟು ಮೇಲೆದ್ದು ಕೊನೆಗೂ ತೋಟದೊಳಗೆ ಸಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುವಷ್ಟರಲ್ಲಿ ಕಾಡಾನೆ ಸೆಫ್ಟಿಕ್‌ಟ್ಯಾಂಕ್ ಒಳಗಡೆಯಿಂದ ಮೇಲೆದ್ದು ತೋಟಕ್ಕೆ ತೆರಳಿದೆ. ಬಳಿಕ ಗುಂಪಿನಿಂದ ಬೆರ್ಪಟ್ಟಿದ್ದ ಆನೆಗಳನ್ನು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೇರ್ಪಟ್ಟಿದ್ದ ಆನೆಯನ್ನು ಗುಂಪಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಗ್ರಾಮಸ್ತರು ಭಯ ಭೀತರಾಗಿದ್ದಾರೆ. ಕಳೆದ ವರ್ಷ ಕಾಡಾನೆಯೊಂದು ಮರಿಗೆ ಈ ಗ್ರಾಮದಲ್ಲೇ ಜನ್ಮ ನೀಡಿತ್ತು. ಗ್ರಾಮದ ಪಾಲಂಗಾಲದಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದು ಮೃತಪಟ್ಟಿತ್ತು. ಆದರೂ ಕೂಡ ಅರಣ್ಯ ಇಲಾಖೆ ಹೆಚ್ಚೆತ್ತುಕೊಳ್ಳುತ್ತಿಲ್ಲ ಇಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆಯವರು ಕೂಡಲೇ ಕಾಡಾನೆಯನ್ನು ಗ್ರಾಮಕ್ಕೆ ನುಸಳದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಅರಣ್ಯಧಿಕಾರಿಗಳಾದ ಆರ್‌ಎಫ್‌ಒ ಶಿವರಾಂ, ಡಿಆರ್‌ಎಫ್‌ಒ ಶ್ರೀನಿವಾಸ್, ಇಟಿಎಫ್ ಫಾರೆಸ್ಟರ್ ದೇವರಾಜ್ ಹಾಗೂ ಆರ್‌ಆರ್‌ಟಿ, ಕ್ಯಾಂಪ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

7 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

9 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

10 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

12 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

18 hours ago