ಕೊಡಗು

ದಾಸವಾಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

ಮಡಿಕೇರಿ :ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳದಲ್ಲಿ ಕಾಡಾನೆ ದಾಂಧಲೆ ಎಗ್ಗಿಲ್ಲದೆ ಸಾಗಿದೆ. ನೆನ್ನೆ ರಾತ್ರಿ ಅಮೃತ ಹರೀಶ್ ರವರ ಮನೆಯ ತೋಟ ಹಾಗೂ ಅಂಗಳಕ್ಕೆ ದಾಳಿಯಿಟ್ಟಿರುವ ಕಾಡಾನೆ ಬಾಳೆ ಮತ್ತಿತರ ಗಿಡಗಳನ್ನು ದ್ವಂಸಗೊಳಿಸಿವೆ. ಪಿ.ಕೆ. ರಾಮನ್ ರವರ ಮನೆ ಮುಂಭಾಗದ ಕಂಪೌಂಡ್ ಅನ್ನು ಪುಡಿ ಮಾಡಿ ಮರವನ್ನು ಹಾನಿಗೊಳಿಸಿದೆ.

ದಾಸವಾಳ ಭಾಗದ ಅರಣ್ಯದಂಚಿನಲ್ಲಿ ಕಾಡಾನೆಗಳು ನಾಡಿನ ಒಳಗೆ ಬರದಂತೆ ಅರಣ್ಯ ಇಲಾಖೆ ಲಕ್ಷಾಂತರ ರೂ. ವ್ಯಯಿಸಿ ರೈಲ್ವೆ ಬ್ಯಾರಿ ಕೇಡ್ ಗಳನ್ನು ಅಳವಡಿಸಿದೆ. ಆದರೆ ಅವೈಜ್ಞಾನಿಕವಾಗಿ ಕಳಪೆಯಿಂದ ನಿರ್ಮಿಸಿರುವ ಬ್ಯಾರಿ ಕೇಡ್ ಗಳನ್ನು ನಾಜುಕಾಗಿ ದಾಟಿ ಬರುತ್ತಿರುವ ಕಾಡಾನೆಗಳು, ಫಸಲನ್ನು ತಿಂದು ಕೃಷಿಕರಿಗೆ ನಷ್ಟಪಡಿಸುತ್ತಾ ಅರಣ್ಯ ಇಲಾಖೆಗೆ ದಾಸವಾಳ ಮುಡಿಸುತ್ತಿವೆ. ಹೀಗಾಗಿ ಬ್ಯಾರಿ ಕೇಡ್ ಗಳು ಕಾಡಾನೆಗಳನ್ನು ತಡೆಯುವ ಬದಲು ಸ್ಥಳೀಯರಿಗೆ ಕೇವಲ “ಬರೀ ಕೇಡು” ಆಗಿ ಪರಿಣಮಿಸಿದೆ.

ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಯೊಂದಿಗೆ ತೋಡಿ ಕೊಂಡಿರುವ ಅಹವಾಲು ಅರಣ್ಯರೋಧನೆ ಆಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

31 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

33 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

35 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

39 mins ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

43 mins ago