ಕೊಡಗು

ಕೊಡಗು ವಿವಿ ಉಳಿಸಲು ಕಾನೂನು ಹೋರಾಟಕ್ಕೂ ಸಿದ್ಧ

ಮಡಿಕೇರಿ: ಜನರಿಗೆ ಹತ್ತಿರದ ಶಿಕ್ಷಣ ಸಿಗಬೇಕು ಎಂಬ ಮಹತ್ವದ ಉದ್ದೇಶದಿಂದಲೇ ಕೊಡಗು ವಿವಿ ಆರಂಭಿಸಿರೋದು. ಹಾಗಾಗಿ ಹಣಕಾಸು ಅಥವಾ ಅನುದಾನದ ಕಾರಣದಿಂದ ಕೊಡಗು ವಿವಿ ಮುಚ್ಚಲು ಸರ್ಕಾರ ಮುಂದಾದರೆ ಕಾನೂನು ಹೋರಾಟ ನಡೆಸುವುದಾಗಿ ರಾಜ್ಯ ಉಚ್ಛನ್ಯಾಯಾಲಯದ ವಕೀಲರೂ ಆದ ಕಾಂಗ್ರೆಸ್ ಮುಖಂಡ ಹೆಚ್.ಎಸ್.ಚಂದ್ರಮೌಳಿ ಹೇಳಿದ್ದಾರೆ.

ರಾಜ್ಯದ ಬೇರೆ ವಿವಿಗಳಿಗೆ ಇರುವ ಪರಿಸ್ಥಿತಿ ಕೊಡಗು ವಿವಿಗೆ ಇಲ್ಲ. ಕೊಡಗು ವಿವಿ ಉಳಿಸಲು ರಾಜಕೀಯ ರಹಿತವಾದ ಹೋರಾಟದ ಅನಿವಾರ್ಯತೆ ಇದೆ. ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳು ವಿವಿ ಇಲ್ಲ ಎಂಬ ಕಾರಣಕ್ಕೆ ಹೊರ ಜಿಲ್ಲೆಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆಯದಂತಹ ಕೆಟ್ಟ ವಾತಾವರಣ ನಿರ್ಮಾಣ ವಾಗಕೂಡದು. ಲಾಭದಲ್ಲಿಯೇ ನಡೆಸಲು ಇದೇನು ಉದ್ಯಮವಲ್ಲ. ಹಾಗಾಗಿ ಲಾಭ ನಷ್ಟದ ಪ್ರಶ್ನೆ ಅಸಮಂಜಸ ಎಂದು ತಿಳಿಸಿದ್ದಾರೆ.

ಈಗ ಇರುವ ಕೊಡಗು ವಿವಿಗೆ ಸರ್ಕಾರ ಕನಿಷ್ಟ 10 ಕೋಟಿ ರೂ. ಕೊಟ್ಟರೂ ಸಾಕು. ಹೇಗೂ ನಡೆಸಿಕೊಂಡು ಹೋಗಬಹುದು. ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ದೂರದೃಷ್ಟಿ ಇಟ್ಟುಕೊಳ್ಳಬೇಕು. ಮಂಗಳೂರು ವಿವಿಗೆ ಕೊಡಗು ವಿವಿ ಸೇರಿಸಿ ಆ ವಿವಿಯ ಭಾರವನ್ನು ಹೆಚ್ಚಿಸೋದಕ್ಕಿಂತ ನಮ್ಮಲ್ಲಿಯೇ ಉಳಿಸಿಕೊಂಡರೆ ಮುಂದಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಮಹಾವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತದೆ ಎಂದಿದ್ದಾರೆ.

ವಿವಿ ಕುಲಪತಿಗಳನ್ನು ಜೊತೆಯಲ್ಲಿ ಒಯ್ದು ಸಂಪುಟ ಸಮಿತಿಯ ಸದಸ್ಯರಲ್ಲೊಬ್ಬರಾದ ಸಚಿವ ಹೆಚ್.ಸಿ.ಮಹದೇವಪ್ಪ, ಕೊಡಗು ಉಸ್ತುವಾರಿ ಸಚಿವ ಭೋಸರಾಜು ಅವರನ್ನು ಭೇಟಿಯಾಗಿ ವಾಸ್ತವ ವಿವರಿಸಲಾಗಿದೆ.
ಕೊಡಗಿನ ಮಂದಿ ಒಗ್ಗೂಡಿ ರಾಜಕೀಯ ರಹಿತವಾದ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಕೊಡಗಿನ ಜನಪ್ರತಿನಿಧಿಗಳು ಕೂಡ ಜನರ ಪರ ನಿಂತು ಸರ್ಕಾರಕ್ಕೆ ಒತ್ತಾಯ ಮಾಡಬೇಕು.
ನಾವು ರಾಜ್ಯದ ಒಂಭತ್ತು ವಿವಿ ಗಳ ಬಗ್ಗೆ ಮಾತಾಡಲ್ಲ. ಕೊಡಗು ಗುಡ್ಡ ಗಾಡು ಪ್ರದೇಶ. ಇಲ್ಲಿ ಬುಡಕಟ್ಟು, ಪರಿಶಿಷ್ಟ ಜಾತಿ, ವರ್ಗ ಹಾಗೂ ಪಂಗಡಗಳಿಗೆ ಸೇರಿದ ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಇಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಸಾಕ್ಷರರ ಸಂಖ್ಯೆಯೂ ಕ್ಷೀಣವಾಗಿದೆ. ಹಾಗಾಗಿ ಎಲ್ಲವನ್ನು ಸರ್ಕಾರಕ್ಕೆ ವಿವರಿಸಬೇಕು ಎಂದು ಹೇಳಿದ್ದಾರೆ.

ಕೊಡಗು ವಿವಿಯಲ್ಲಿ ಮತ್ತೆ ಹೊಸದಾಗಿ ಪ್ರವಾಸೋದ್ಯಮ ಹಾಗೂ ಹೋಟೆಲ್ ಮೇನೇಜ್ ಮೆಂಟ್ ಕೋರ್ಸ್ ಅತೀ ಅಗತ್ಯವಿದ್ದು ಬೇಗ ಆರಂಭಿಸುವುದು ಸೂಕ್ತವಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ.
ವೀರರು, ಯೋಧರು ಹಾಗೂ ಕ್ರೀಡಾಕಲಿಗಳ ಜಿಲ್ಲೆ ಕೊಡಗು ಜಿಲ್ಲೆಯ ವಿವಿ ಕುಲಪತಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ನಿಲಯವಿಲ್ಲ. ಓಡಾಡೋಕೆ ಒಂದು ಕಾರು ಕೂಡ ಇಲ್ಲ ಅಂದರೆ ಇದು ನಾಚಿಕೆಗೇಡಿನ ವಿಷಯ.
ಆದ್ದರಿಂದ ಸರ್ಕಾರ ಕೊಡಗು ವಿವಿ ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ನಾನು ಕೊಡಗು ವಿವಿ ಉಳಿವಿಗೋಸ್ಕರ ನ್ಯಾಯಾಲಯದಲ್ಲಿ ಹೋರಾಟ ನಡೆಸಲೂ ಕೂಡ ಸಿದ್ಧನಿದ್ದೇನೆ ಎಂದು ಚಂದ್ರಮೌಳಿ ಹೇಳಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗವೂ ಅರಸು-ಸಿದ್ದರಾಮಯ್ಯ ಆಡಳಿತ ರಂಗವೂ

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…

2 mins ago

ಇಂದು ಫಲಪುಷ್ಪ ಪ್ರದರ್ಶನದ ಮಧುರ ವಸ್ತ್ರೋತ್ಸವ

ಮಂಡ್ಯ: ಜಿಲ್ಲಾಡಳಿತ ಮತ್ತು ಮಂಡ್ಯ ಜಿಲ್ಲಾ ಪಂಚಾಯಿತಿ,ತೋಟಗಾರಿಕೆ ಇಲಾಖೆ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ಸಹ ಯೋಗದಲ್ಲಿ ಫಲಪುಷ್ಪ…

7 mins ago

ಜನವರಿ.24ರಿಂದ ಮಂಜಿನ ನಗರಿಯಲ್ಲಿ ಫಲಪುಷ್ಪ ಪ್ರದರ್ಶನ

ನವೀನ್ ಡಿಸೋಜ ಗಮನ ಸೆಳೆಯಲಿದೆ ೧೮ ಅಡಿ ಎತ್ತರದ ಶ್ರೀ ಭಗಂಡೇಶ್ವರ ದೇವಸ್ಥಾನ ಕಲಾಕೃತಿ; ಹಲವು ವಿಭಿನ್ನತೆಯೊಂದಿಗೆ ಆಯೋಜನೆ ಮಡಿಕೇರಿ:…

16 mins ago

ನಗರ ಪಾಲಿಕೆಯಲ್ಲಿ ವೈದ್ಯ ಪದವಿ ಆರೋಗ್ಯಾಧಿಕಾರಿಗೆ ಕೊಕ್: ಇಂಜಿನಿಯರ್‌ಗೆ ಹೊಸ ಹುದ್ದೆ!

ಎಚ್.ಎಸ್.ದಿನೇಶ್‌ಕುಮಾರ್ ಸರ್ಕಾರದ ನಿರ್ಧಾರಕ್ಕೆ ಮಾಜಿ ಮಹಾಪೌರರು, ಮಾಜಿ ಸದಸ್ಯರ ವಿರೋಧ ಮೈಸೂರು: ಬಿಬಿಎಂಪಿ ಹೊರತುಪಡಿಸಿ ಮೈಸೂರು ನಗರಪಾಲಿಕೆ ಸೇರಿದಂತೆ ರಾಜ್ಯದ…

23 mins ago

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

9 hours ago