ಕೊಡಗು

ವಿನಯ್ ಸೋಮಯ್ಯ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್ ಹಾಕಿಸಿದ್ದಾರೆ: ಮಾಜಿ ಸಂಸದ ಪ್ರತಾಪ್‌ ಸಿಂಹ

ಪ್ರಶಾಂತ್‌ ಎನ್‌ ಮಲ್ಲಿಕ್‌ 

ಕೊಡಗು: ವಿನಯ್ ಸೋಮಯ್ಯ ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಆತ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್‌ ಹಾಕಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ್ ಆತ್ಮಹತ್ಯೆ ಮಾಡಿಕೊಂಡು 4 ದಿನ ಆದರೂ ಯಾರು ಅರೆಸ್ಟ್ ಕೂಡ ಆಗಿಲ್ಲ. ವಿನಯ್‌ಗೆ ಪೊಲೀಸರು ಕರೆ ಮಾಡಿ 107 ರೌಡಿ ಶೀಟರ್ ಹಾಕುವ ಬೆದರಿಕೆ ಹಾಕಿದ್ದಾರೆ. ಕಳೆದ ಮಾರ್ಚ್.21ರಂದು ಬೆಳಗ್ಗೆ 10:09 ಗಂಟೆಗೆ ಕರೆ ಮಾಡಿ 2:45 ನಿಮಿಷ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಎಸ್ಪಿ ಅವರಿಗೆ ಧಮ್ಕಿ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ಪತ್ರ ನೀಡಿದ್ದೇವೆ ಎಂದರು.

ಇನ್ನು ಚುನಾವಣೆಯಲ್ಲಿ 5 ಬಾರಿ ತಿಪ್ಪೆಗೆ ಎಸೆದ್ರು ಬುದ್ದಿ ಬಂದಿಲ್ಲ. ಅವನ ಹೆಸರು ಹೇಳಬೇಡಿ, ಕೊಳಕು ಬಾಯಿಯವನು ಅವನು ಎಂದು ಲಕ್ಷ್ಮಣ್ ವಿರುದ್ಧ ಕಿಡಿಕಾರಿದ ಅವರು, ಅಂತಹ ನಾಯಿಗಳನ್ನು ದುಡ್ಡು ಕೊಟ್ಟು ಕರೆಸಿ ಪೊನ್ನಣ್ಣ ನಮಗೆ ಬಯ್ಯಿಸುತ್ತಾರೆ. ಕಾಸು ಕೊಟ್ಟು ಪೊನ್ನಣ್ಣ ಲಕ್ಷ್ಮಣ್, ತೆನ್ನಿರ ಮೈನಾ, ಹರೀಶ್ ಪೂವಯ್ಯರಿಂದ ಇದನ್ನು ಮಾಡಿಸುತ್ತಿದ್ದಾರೆ.
ಪೊನ್ನಣ್ಣ ಡೀಸೆಂಟ್ ಆಗಿದ್ರೆ ಇಂತ ನಾಯಿಗಳನ್ನು ಸಾಕುತ್ತಿರಲಿಲ್ಲ. ಕಾವೇರಿ ತಾಯಿ ಇಗ್ಗುತಪ್ಪ ಮನಸ್ಸಿನಲ್ಲಿಟ್ಟು ಹೇಳಿ ನಿಮಗೆ ವಿನಯ್ ಸೋಮಯ್ಯ ಗೊತ್ತಿಲ್ವಾ..? ಎಂದು ಪ್ರಶ್ನೆ ಮಾಡಿದರು.

ಇನ್ನು ಕಾಸು ಕೊಟ್ಟು ಕಾಕಾಗಳನ್ನು ಕರೆಸಿ ನನ್ನ ಪ್ರತಿಕೃತಿ ದಹನ ಮಾಡಿಸಿದ್ರಿ. ಸಂಭಾವಿತರಂತೆ ಪೋಸ್ ಕೊಡಬೇಡಿ ಪೊನ್ನಣ್ಣ, ನಿಮ್ ಬಗ್ಗೆ ನಂಗೆ ಗೊತ್ತು. ನಿಮ್ಮ ಕುಟುಂಬದ ಹಿನ್ನೆಲೆ ಸ್ವಲ್ಪ ತೆಗೆದು ನೋಡಿ ಪೊನ್ನಣ್ಣ. ಕಾವೇರಿ ತೀರ್ಥೋದ್ಭವ ಆಗಲ್ಲ ಅಂದಿದ್ದು ನಿಮ್ಮ ಅಪ್ಪ, ಅದು ನಿಮ್ಮ‌ ಸಂಸ್ಕೃತಿ. ಜಾತಿ ತಂದು ಒಡೆಯಬೇಡಿ, ಕೊಡಗಿನ ಜನ ಒಗ್ಗಟ್ಟಿನಲ್ಲಿ‌ ಇದ್ದಾರೆ.
ಕುಟ್ಟಪ್ಪ ಅವರು ತೀರಿಹೋದಾಗ ಕೋವಿ ಎತ್ತಿದವರು ಯಾರು ಅಂತ ಗೊತ್ತು. ಸಾವಿಗೆ ಕಾರಣರಾದವರು ನೀವೆ, ನಗೆ ಸಾವಿನ ಮೇಲೆ ರಾಜಕಾರಣ ಅಂತೀರ. ಮೊನ್ನೆ ಪ್ರತಿಭಟನೆ ಮಾಡಿ ಸಾವನ್ನು ಸಂಭ್ರಮಿಸಿದವರು ನೀವು ಪೊನ್ನಣ್ಣ. ನಿಮ್ಮ ಕುಟುಂಬದಲ್ಲೇ ಹೀಗೆ ಆಗಿದ್ರೆ ಏನ್ ಮಾಡುತ್ತಿದ್ರಿ. ನಿಮ್ಮ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ವಿನಯ್. ಸಹಾಯ ಮಾಡ್ತೀನಿ ಅಂತ ಗೊತ್ತು, ನೀವು ಫಿಕ್ಸರ್ ಅಂತ ನಮಗೆ ಗೊತ್ತು. ಪೊನ್ನಣ್ಣನ ಮನೆಯಲ್ಲಿ ತೆನ್ನಿರ ಮೈನಾ ಅಡಗಿ ಕುಳಿತಿರಬಹುದು. ಪೊನ್ನಣ್ಣನ‌ ಮನೆಗೆ ಹೋಗಿ ಮೊದಲು ಪೊಲೀಸರು ಸರ್ಚ್ ಮಾಡಬೇಕು. ಪೊನ್ನಣ್ಣ ನ್ಯಾಯಾಲಯದ ಮೇಲೂ ಪ್ರಭಾವ ಬೀರಬಹುದು. ಪೊನ್ನಣ್ಣ ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ಮುಗಿಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಪ್ರತಾಪ್ ಸಿಂಹ ಬಂದರೆ ಅಟ್ಟಾಡಿಸಿ ಹೊಡೆಯಲು ಕರೆ ಕೊಡುವ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾಳೆ ಪೊನ್ನಣ್ಣನ ಮನೆಗೆ ಬರಬೇಕಾ…? ತಾಕತ್ತಿದೆಯಾ..? ಎಲ್ಲಿಗೆ ಬರಬೇಕು ಹೇಳಿ ನಾನು ಬರುತ್ತೇನೆ ಎಂದು ಸವಾಲು ಹಾಕಿದರು. ಕೇರಳದ ಮಲಯಾಳಿಗಳನ್ನ ಪಕ್ಕದಲ್ಲಿ ಇಟ್ಕೊಂಡು ಪ್ರೊಟೆಕ್ಷನ್ ತೆಗೆದುಕೊಳ್ತೀರುವುದು ನೀವು.
ಯಾರು ಯಾರಿಗೋ ಹೆದರಿಲ್ಲ ನಿಮಗೆ ಹೆದರುತ್ತೀನಾ..? ಕೊಡಗಿನಲ್ಲಿ ಶಾಂತಿ‌ ಕದಡಿರೋರು ನೀವು ಪೊನ್ನಣ್ಣ. ವಿನಯ್ ಸೋಮಯ್ಯ ಪ್ರಧಾನಿ ಮೋದಿ ಅವರ ಅಭಿಮಾನಿ. ವಿನಯ್ ಬಿಜೆಪಿಗ ಅಂತಲೇ ಅವನ ವಿರುದ್ಧ ಎಫ್‌ಐಆರ್ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.

 

ಆಂದೋಲನ ಡೆಸ್ಕ್

Recent Posts

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

2 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

3 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

3 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

3 hours ago

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

3 hours ago

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ  ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…

3 hours ago