Accused Sentenced for Fraud Involving Fake Medicines
ಮಡಿಕೇರಿ : ಮಾನಸಿಕ ಖಾಯಿಲೆ ಹಾಗೂ ಶರೀರದ ನಡುಕ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಗುಣಪಡಿಸುವುದಾಗಿ ನಂಬಿಸಿ 8,76,000 ರೂ. ವಂಚಿಸಿದ ಮೂವರು ಆರೋಪಿಗಳಿಗೆ ಮಡಿಕೇರಿಯ ಸಿ.ಜೆ.ಎಂ. ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಮೇಶ್ ಗೋವಿಂದಪ್ಪ ಗೊಲ್ಲಾರ್, ಭರತ್ ಹಾಗೂ ರವಿ ಓಣಿಕೇರಿ ಶಿಕ್ಷೆಗೆ ಒಳಗಾದವರು.
2019 ರಲ್ಲಿ ಮಡಿಕೇರಿಯ ದೇಚೂರಿನಲ್ಲಿ ಸಿ.ಡಿ.ಸರೋಜ ಹಾಗೂ ಸಿ.ಡಿ.ಕಾಳಪ್ಪ ಮನೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿ ರಮೇಶ ಗೋವಿಂದಪ್ಪ ಗೊಲ್ಲರ್ ಎಂಬವರು ಆಗಮಿಸಿದ್ದರು. ಮಾನಸಿಕ ಖಾಯಿಲೆ ಹಾಗೂ ಶರೀರದ ನಡುಕ ಖಾಯಿಲೆಯಿಂದ ಬಳಲುತ್ತಿರುವ ಸರೋಜರವರ ಗಂಡನನ್ನು ನೋಡಿ, ತನ್ನ ತಾಯಿಗೂ ಕೂಡ ಇದೇ ರೀತಿಯ ಖಾಯಿಲೆ ಇದ್ದು, ಆಯುರ್ವೇದ ಔಷಧ ನೀಡಿದ ನಂತರ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಔಷಧಿಯು ಕುಶಾಲನಗರದ ಆಯುರ್ವೇದಿಕ್ ಅಂಗಡಿಯಲ್ಲಿ ಮಾತ್ರ ದೊರೆಯುವುದಾಗಿ ನಂಬಿಸಿ, ಸಿ.ಡಿ.ಸರೋಜ ಮತ್ತು ಕಾಳಪ್ಪ ಅವರನ್ನು ಕುಶಾಲನಗರದ ಆಯುರ್ವೇದಿಕ್ ಔಷಧ ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಮತ್ತೊಬ್ಬ ಆರೋಪಿ ಭರತ್ನನ್ನು ಭೇಟಿ ಮಾಡಿಸಿ ಈ ಔಷಧಿಗೆ ಒಟ್ಟು 8,76,000 ರೂ.ಗಳಾಗುವುದೆಂದು ಹೇಳಿದ್ದಾರೆ. ಬಳಿಕ ಸಿ.ಡಿ.ಸರೋಜರವರ ಬ್ಯಾಂಕ್ ಖಾತೆಗಳಿಂದ ಮತ್ತೊಬ್ಬ ಆರೋಪಿ ರವಿ ಓಣಿಕೇರಿ ಎಂಬ ವ್ಯಕ್ತಿಯ ಹೆಸರಿಗೆ ಒಟ್ಟು 8,76,000 ರೂ.ಗಳನ್ನು 2 ಚೆಕ್ಗಳ ಮೂಲಕ ಪಡೆದುಕೊಂಡಿದ್ದರು. ಬಳಿಕ ಮೋಸ ಹೋಗಿರುವುದು ತಿಳಿದು ಈ ಸಂಬಂಧ ದಂಪತಿಗಳು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ಎಂ.ಟಿ.ಅಂತಿಮ ತನಿಖೆ ನಡೆಸಿ ಆರೋಪಿತರ ವಿರುದ್ಧ ಮೋಸ, ವಂಚನೆಯ ಅಪರಾಧಕ್ಕಾಗಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯು ಸಿ.ಜೆ.ಎಂ. ನ್ಯಾಯಾಲಯ, ಮಡಿಕೇರಿ ಇಲ್ಲಿ ನಡೆದಿದ್ದು, ಆರೋಪಿತರು ಮೋಸದಿಂದ ಸಿ.ಡಿ.ಸರೋಜರವರಿಗೆ ವಂಚಿಸಿ ಒಟ್ಟು 8,76,000 ರೂ.ಗಳನ್ನು ಲಪಟಾಯಿಸಿರುವುದು ನಿಸ್ಸಂಶಯವಾಗಿ ಸಾಬೀತಾಗಿದೆ ಎಂದು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಸಿ.ವೀರಭದ್ರಯ್ಯ ತೀರ್ಪು ನೀಡಿದ್ದಾರೆ.
ಆರೋಪಿಗಳಿಗೆ ದಂಡ
ಆರೋಪಿತರಿಗೆ ಕಲಂ ೪17ರ ಪ್ರಕಾರ ಅಪರಾಧಕ್ಕಾಗಿ 1 ವರ್ಷ ಸಜೆ ಹಾಗೂ ರೂ.10,000 ದಂಡ. ಕಲಂ420 ಭಾ.ದಂ.ಸಂ.ರ ಅಪರಾಧಕ್ಕಾಗಿ 2 ವರ್ಷಗಳ ಸಜೆ ಹಾಗೂ ರೂ. 10,000 ದಂಡ, ಕಲಂ:19 ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ ಮೆಂಟ್ ಆಕ್ಟ್ನ ಅಪರಾಧಕ್ಕಾಗಿ 2 ವರ್ಷಗಳ ಸಜೆ, ರೂ.10,000 ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿದ್ದರು.
ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು…
ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್, ವಿದೇಶದಲ್ಲಿ ಅಡಗಿದ್ದ…
ಗೋಣಿಕೊಪ್ಪ : ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ರಸ್ತೆ ಅತಿಕ್ರಮಣ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ…
72,100 ಟನ್ ಕಬ್ಬಿಣದ ಅದಿರು ಇದ್ದ ಹಡಗು ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯ ಆಳ ಸಮುದ್ರದಲ್ಲಿ ಶನಿವಾರ ಭೀಕರ ನೌಕಾ…
ಬೆಂಗಳೂರು : ಕೆಪಿಎಸ್ಸಿ ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನುಪಸ್ಥಿತಿಯಲ್ಲಿ ಅವರ…
ಚಾಮರಾಜನಗರ: ಚಾಮರಾಜನಗರ ಅರಣ್ಯ ವಲಯದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದೆ. ಕಳೆದ 16 ವರ್ಷಗಳಲ್ಲಿ ಬರೋಬ್ಬರಿ 3,289 ವನ್ಯಜೀವಿ ಅಪರಾಧ ಪ್ರಕರಣಗಳು…