ಜಿಲ್ಲೆಗಳು

ಜಿಪಿ ನಗರ ಲಯನ್ಸ್ ಕ್ಲಬ್ ನಿಂದ ಸಾಧಕರಿಗೆ ಸನ್ಮಾನ

ಮೈಸೂರು: ದೇಶದಲ್ಲಿ‌ ಭ್ರಷ್ಟಾಚಾರ ಹೆಚ್ಚಿರುವ ಕಾರಣ, ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ದೇಶದಲ್ಲಿ ಸಾಕಷ್ಟು ಸಂಪತ್ತಿದ್ದರೂ, ಪರಸ್ಪರ ಕಚ್ಚಾಟದಿಂದ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಲಯನ್ಸ್‌ ಕ್ಲಬ್‌ನ ಪಿಎಂಜೆಎಫ್‌ ಡಾ.ನಾಗರಾಜು.ವಿ.ಬೈರಿ ತಿಳಿಸಿದರು.

ನಗರದ ದಿ‌ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಯನ್ಸ್‌ ಸಂಸ್ಥೆಗಳ ಒಕ್ಕೂಟದ ಮೈಸೂರಿನ ಲಯನ್ಸ್ ಕ್ಲಬ್ ಜೆ.ಪಿ.ನಗರ‌ ಘಟಕ ಹಾಗೂ ಎಸ್ಎಂಪಿ‌ ಡೆವಲಪರ್ಸ್ ಜೆ.ಪಿ.ನಗರ ಘಟಕದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ವಪಲ್ಲಿ ರಾಧಾಕೃಷ್ಣ ಅವರು ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಬಂದಿದ್ದ ವೇಳೆ ಆ ವಿಷಯ ಕಲಿಯಲು ಯಾರು ಬರುವುದಿಲ್ಲ ಎಂದು ಅಪಹಾಸ್ಯ ಮಾಡಿದ್ದರು. ಇಲ್ಲಿಂದ ಬೀಳ್ಕೊಡುವ ವೇಳೆ, ಸಾರೋಟಿನಲ್ಲಿ ಅವರನ್ನು ಕೂರಿಸಿ ವಿದ್ಯಾರ್ಥಿಗಳೇ ಅದನ್ನು ಎಳೆದೊಯ್ದು, ರೈಲು ನಿಲ್ದಾಣಕ್ಕೆ ಬಿಟ್ಟುಬಂದಿದ್ದರು. ಅಷ್ಟರ ಮಟ್ಟಿಗೆ, ಎಲ್ಲ ವರ್ಗದ ವಿದ್ಯಾರ್ಥಿಗಳಿಂದ ಜನಪ್ರಿಯತೆ ಪಡೆದುಕೊಂಡಿದ್ದರು.

ಸರ್‌ಎಂವಿ ವಿಶ್ವೇಶ್ವರಯ್ಯ ಅವರು ಭಾರತದ ಜೊತೆಗೆ, ಪಾಕಿಸ್ತಾನ, ನೇಪಾಳದಲ್ಲೂ ಅನೇಕ ಜನಪರ ಕಾರ್ಯ ಜಾರಿಗೊಳಿಸಿ, ಅಲ್ಲಿನ ಜನರ ಗೌರವಕ್ಕೆ ಪಾತ್ರರಾಗಿದ್ದರು. ಎಲ್ಲರೂ ಪ್ರಾತ ಸ್ಮರಣೀಯರು’ ಎಂದು ನೆನಪಿಸಿಕೊಂಡರು.

ಕೆಎಎಸ್ ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್‌ ಪಡೆದ ಕಾವ್ಯಾ, ಶಿಕ್ಷಕರಾದ ಕೆಂಪಣ್ಣ, ಗುರುಪಾದಪ್ಪ, ಶಾರದಮ್ಮ, ಆಶಾರಾಣಿ, ಇಂಜಿನಿಯರ್ ಗಳಾದ ಷಣ್ಮಖಪ್ಪ, ವಿ.ಸತ್ಯನಾರಾಯಣ, ಪ್ರಶಾಂತ ಕುಮಾರ್, ವೈದ್ಯರಾದ ಡಾ.ಯೋಗೇಶ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ರೇಣುಕಪ್ಪ, ಸರೋಜಮ್ಮ, ಮಂಜಯ್ಯ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂತೀಯ 9ರ ಅಧ್ಯಕ್ಷೆ ಲಯನ್ಸ್‌ ರತ್ನಮ್ಮ, ಜೆ.ಪಿ.ನಗರ ವಾರ್ಡ್‌ನ ನಗರ ಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್‌, ಜೆ.ಪಿ.ನಗರ ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಯು.ಎಸ್‌.ಸದಾಶಿವ, ಜೆ.ಪಿ.ನಗರ ಲಯನ್ಸ್‌ ಕ್ಲಬ್‌ನ ಖಜಾಂಚಿ ಬಿ.ಮಲ್ಲಿಕಾರ್ಜುನಪ್ಪ, ಎಸ್‌ಎಂಪಿ ಡೆವಲಪರ್ಸ್‌ನ ಮಾಲೀಕ ಎಸ್‌.ಎಂ.ಶಿವಪ್ರಕಾಶ್‌ ಇದ್ದರು..

andolanait

Recent Posts

ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡ ಮೈಸೂರಿಗರು

ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್‌ ಬ್ಯಾಂಡ್‌ನ ಸದ್ದಿನೊಂದಿಗೆ…

7 hours ago

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…

8 hours ago

ಮೈಸೂರು, ಚಾ.ನಗರ, ಮಂಡ್ಯ, ಕೊಡಗು ಎಸ್‌ಪಿಗಳ ವರ್ಗ

ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…

8 hours ago

ಕೊಡಗು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಿಂದುಮಣಿ ನೇಮಕ

ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್‌ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…

8 hours ago

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

12 hours ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

12 hours ago