ಜಿಲ್ಲೆಗಳು

ಇದು ನಮ್ಮ ಬೊಂಬೆ ಮನೆ: ಹೇಮಲತಾ ಮನೆಯಲ್ಲಿ ಬೊಂಬೆಗಳ ದರ್ಬಾರ್

ಹೇಮಲತಾ ಮನೆಯಲ್ಲಿ ಬೊಂಬೆಗಳ ದರ್ಬಾರ್

ಅತಿ ಪುರಾತನವಾದ, ದೇಶ-ವಿದೇಶಗಳಿಂದ ತಂದ, ಮಣ್ಣಿನ, ಕಂಚಿನ, ಮರದ, ವಿವಿಧ ಬಗೆಯ ಲೋಹಗಳಿಂದ ಮಾಡಿದ ಅತ್ಯಾಕರ್ಷಕ, ಒಂದೊಂದು ಪರಿಕಲ್ಪನೆ ಇಟ್ಟುಕೊಂಡು ಕೂರಿಸಿದ ಬೊಂಬೆಗಳನ್ನು ನೋಡಬೇಕು ಎಂದರೆ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿರುವ ನಿವೃತ್ತ ಉಪತಹಶಿಲ್ದಾರ್ ಹೇಮಲತಾ ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಬೇಕು.

ಸುಮಾರು ೩೦-೩೫ ವರ್ಷಗಳಿಂದಲೂ ಬೊಂಬೆಗಳನ್ನು ಕೂರಿಸುತ್ತಾ ಬಂದಿರುವ ಇವರ ಬಳಿ ೧೫ ಸಾವಿರಕ್ಕೂ ಹೆಚ್ಚು ಬೊಂಬೆಗಳ ಸಂಗ್ರವಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿಯೂ ಮನೆಯಲ್ಲಿ ೯ ಹಂತಗಳಲ್ಲಿ ಬೊಂಬೆಗಳನ್ನು ಕೂರಿಸುವ ಇವರು ಈ ಬಾರಿ ಕೆಆರ್‌ಎಸ್ ಡ್ಯಾಂ, ಕೊಲ್ಲೂರು ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೆ, ಶೃಂಗೇರಿ ಶಾರದೆ, ಮೈಸೂರು ಚಾಮುಂಡೇಶ್ವರಿ, ಕಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ, ಕಾಶಿ ಅನ್ನಪೂರ್ಣೇಶ್ವರಿ, ತಮಿಳುನಾಡಿನ ಚೋಟಾಣಿ ಅಮ್ಮನವರ ಬೊಂಬೆಗಳನ್ನು ಕೂರಿಸಲಾಗಿದೆ.

ಪಟ್ಟದ ಬೊಂಬೆಗಳು, ರಾಜರಾಜೇಶ್ವರಿ ದರ್ಬಾರು, ದುರ್ಗಾಪೂಜೆ, ದಶಾವತಾರ, ಸಪ್ತಋಷಿಗಳು, ಶಂಕರಾಚಾರ್ಯ ಜೀವನ ಚರಿತ್ರೆ, ರಾಮಾಯಣ ಕಥೆ ಹೇಳುವ ಬೊಂಬೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ.

ಬೊಂಬೆಗಳನ್ನು ಕೂರಿಸುವಾಗ ಎಷ್ಟು ಖುಷಿಯಿಂದ ಕೂರಿಸುತ್ತವೆೋಂ ಅಷ್ಟೇ ಜಬ್ದಾರಿಯುತವಾಗಿ, ಎತ್ತಿಡಬೇಕು. ಇದರಲ್ಲಿ ಆಸಕ್ತಿ ಮತ್ತು ತಾಳ್ಮೆ ಬಹುಮುಖ್ಯ ಎನ್ನುವ ಹೇಮಲತಾ ಅವರು ಹೋದ ಕಡೆಗಳಲೆಲ್ಲಾ ಇಷ್ಟವಾದ ಬೊಂಬೆಗಳನ್ನು ತರುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಮಗ ಕಾರ್ತಿಕ್ ಅವರೂ ತಾಯಿಯ ಈ ಚೆಂದದ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.

ಬೊಂಬೆ ಕೂರಿಸಿದವರು
ಹೇಮಲತಾ ಕುಮಾರಸ್ವಾಮಿ
ನಿವೃತ್ತ ಉಪತಹಶಿಲ್ದಾರ್, ನಂ. ೫೬೭/೩೨ನೇ ರಾಮಚಂದ್ರ ಅಗ್ರಹಾರ, ಮೈಸೂರು

andolanait

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

3 hours ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

3 hours ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

4 hours ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

4 hours ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

14 hours ago